ದೆಹಲಿ: ಪೋಷಕರನ್ನು ವಿರೋಧಿಸಿ ಮದುವೆ; ಗುಂಡಿನ ದಾಳಿ; ಪತ್ನಿ ದೇಹ ಹೊಕ್ಕ 5 ಬುಲೆಟ್, ಪತಿ ಸಾವು!

ಅಪರಿಚಿತ ದುಷ್ಕರ್ಮಿಗಳು ಯುವ ದಂಪತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಾದ ಅಂಬರ್ಹೈ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಅಪರಿಚಿತ ದುಷ್ಕರ್ಮಿಗಳು ಯುವ ದಂಪತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಾದ ಅಂಬರ್ಹೈ ಗ್ರಾಮದಲ್ಲಿ ನಡೆದಿದೆ.

ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ದಂಪತಿ ಮೇಲೆ 10 ಬಾರಿ ಗುಂಡು ಹಾರಿಸಿದ್ದು ಸ್ಥಳದಲ್ಲೇ 23 ವರ್ಷದ ವಿನಯ್ ದಹಿಯಾ ಮೃತಪಟ್ಟಿದ್ದು 19 ವರ್ಷದ ಕಿರಣ್ ದಹಿಯಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ದ್ವಾರಕಾದ ಸೆಕ್ಟರ್ 23 ರ ಪೊಲೀಸ್ ಠಾಣೆಗೆ ಅಂಬರ್ಹೈ ಗ್ರಾಮದಲ್ಲಿ ಗುಂಡಿನ ದಾಳಿ ನಡೆದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ದ್ವಾರಕಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ವೇಳೆ ಆರರಿಂದ ಏಳು ಜನರು ಬಂದು ದಂಪತಿಗೆ ಗುಂಡು ಹಾರಿಸಿರುವುದು ತಿಳಿದುಬಂದಿದೆ.

ಪತಿ ನಾಲ್ಕು ಗುಂಡೇಟಿನಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಐದು ಗುಂಡುಗಳು ಹೊಕ್ಕಿರುವ ಪತ್ನಿ ಐದು ಗುಂಡುಗಳನ್ನು ಗಂಭೀರ ಸ್ಥಿತಿಯಲ್ಲಿ ವೆಂಕಟೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪುರುಷನನ್ನು ವಿನಯ್ ದಹಿಯಾ (23) ಮತ್ತು ಮಹಿಳೆಯನ್ನು ಕಿರಣ್ ದಹಿಯಾ (19) ಎಂದು ಗುರುತಿಸಲಾಗಿದೆ.

ಇಬ್ಬರೂ ಹರಿಯಾಣದ ಸೋನಿಪತ್‌ನ ಗೋಪಾಲ್‌ಪುರ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ದಂಪತಿಗಳು ಒಂದು ವರ್ಷದ ಹಿಂದೆ ಓಡಿಹೋಗಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com