ಆಂಧ್ರಪ್ರದೇಶ: ಹೊಂಡಕ್ಕೆ ಟ್ರಾಕ್ಟರ್ ಟ್ರೈಲರ್ ಉರುಳಿ ಗ್ರಾಮದ ಸರಪಂಚ್ ಸೇರಿ ಐವರ ಸಾವು

ನೆಲ್ಲೂರು ಗ್ರಾಮೀಣ ಮಂಡಲದ ಗೊಲ್ಲಕಂದುಕೂರ್ ಗ್ರಾಮದಲ್ಲಿ ಟ್ರಾಕ್ಟರ್ ಟ್ರೈಲರ್ ಹೊಂಡಕ್ಕೆ ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಅಪಘಾತ ದೃಶ್ಯ
ಅಪಘಾತ ದೃಶ್ಯ

ನೆಲ್ಲೂರು(ಆಂಧ್ರ): ನೆಲ್ಲೂರು ಗ್ರಾಮೀಣ ಮಂಡಲದ ಗೊಲ್ಲಕಂದುಕೂರ್ ಗ್ರಾಮದಲ್ಲಿ ಟ್ರಾಕ್ಟರ್ ಟ್ರೈಲರ್ ಹೊಂಡಕ್ಕೆ ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಗ್ರಾಮದ ಸರಪಂಚ್ ಅಬ್ಬು ಕೋಟಿಪೆಂಚಲಯ್ಯ(60), ಪಾಕಾ ಕೃಷ್ಣವೇಣಿ(26), ಕಿಲಾರಿ ಹರಿಬಾಬು(43), ಲಾಲಿ ಲಕ್ಷ್ಮೀಕಾಂತಮ್ಮ(45), ಮತ್ತು ತಾಂಡ್ರ ವೆಂಕಟರಮಣಮ್ಮ(19) ಅವರು ಹೊಲದಲ್ಲಿ ಬೆಳೆ ಕೊಯ್ಲುಗಾಗಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲದೆ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಕೂಡಲೇ ಸರ್ಕಾರದ ಕಡೆಯಿಂದ ನೆರವು ಸಿಗುವಂತೆ ಮಾಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com