ಆಕ್ರೋಶಗೊಂಡ ಗ್ರಾಮಸ್ಥರಿಂದ ಸೇನಾ ವಾಹನಕ್ಕೆ ಬೆಂಕಿ (ಸಂಗ್ರಹ ಚಿತ್ರ)
ಆಕ್ರೋಶಗೊಂಡ ಗ್ರಾಮಸ್ಥರಿಂದ ಸೇನಾ ವಾಹನಕ್ಕೆ ಬೆಂಕಿ (ಸಂಗ್ರಹ ಚಿತ್ರ)

ನಾಗಾಲ್ಯಾಂಡ್ ಹತ್ಯೆ: ಬದುಕಿ ಉಳಿದವರ ಸ್ಥಿತಿ ಗಂಭೀರ; ಮಾಧ್ಯಮಗಳೊಂದಿಗೆ ಮಾತನಾಡದಂತೆ ಸಂಬಂಧಿಕರಿಗೆ ಸೂಚನೆ

ನಾಗಾಲ್ಯಾಂಡ್ ನಲ್ಲಿ ಸೇನಾ ದಾಳಿಗೆ ತುತ್ತಾಗಿದ್ದ ಪ್ರಜೆಗಳ ಪೈಕಿ ಬದುಕಿ ಉಳಿದಿದ್ದ ಇಬ್ಬರ ಪರಿಸ್ಥಿತಿ ಈಗ ಗಂಭೀರವಾಗಿದೆ.

ದಿಬ್ರುಘರ್: ನಾಗಾಲ್ಯಾಂಡ್ ನಲ್ಲಿ ಸೇನಾ ದಾಳಿಗೆ ತುತ್ತಾಗಿದ್ದ ಪ್ರಜೆಗಳ ಪೈಕಿ ಬದುಕಿ ಉಳಿದಿದ್ದ ಇಬ್ಬರ ಪರಿಸ್ಥಿತಿ ಈಗ ಗಂಭೀರವಾಗಿದೆ. ಸಂಬಂಧಿಕರಿಗೆ 13 ಮಂದಿ ಗ್ರಾಮಸ್ಥರ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಮಾತನಾಡದಂತೆ ನಾಗಾಲ್ಯಾಂಡ್ ನ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

ಈ ಬಗ್ಗೆ ಸಂತ್ರಸ್ತರ ಸಂಬಂಧಿಕರು ಮಾಹಿತಿ ನೀಡಿದ್ದು, 30 ವರ್ಷಗಳ ಯೆವಾಂಗ್ ಕೊನ್ಯಾಕ್ ಹಾಗೂ ಶೇವಾಂಗ್ ಕೊನ್ಯಾಕ್ (22) ಇಬ್ಬರೂ ದಾಳಿಯಲ್ಲಿ ಗಾಯಗೊಂಡಿದ್ದು ದಿಬ್ರುಘರ್ ನ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆ (ಎಎಂಸಿಹೆಚ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇಬ್ಬರೂ ಗಾಯಾಳುಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಪೈಕಿ ಓರ್ವನಿಗೆ ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಮತ್ತೊಂದು ವೈದ್ಯಕೀಯ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿಂದೆ ಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಈಗ ಮೌನಕ್ಕೆ ಶರಣಾಗಿದ್ದು ತಮಗೆ ಮಾಧ್ಯಮಗಳೂ ಸೇರಿದಂತೆ ಯಾರೊಂದಿಗೂ ಈ ಘಟನೆಯ ಬಗ್ಗೆ ಮಾತನಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದಷ್ಟೇ ಹೇಳಿದ್ದಾರೆ.

"ದಯಮಾಡಿ ನಮ್ಮನ್ನು ಏನೂ ಕೇಳಬೇಡಿ. ಆ ಘಟನೆಯ ಬಗ್ಗೆ ಏನನ್ನೂ ಮಾತನಾಡದಂತೆ ಸೂಚನೆ ಬಂದಿದೆ" ಎಂದು ಓರ್ವ ಗಾಯಾಳುವಿನ ಸಂಬಂಧಿಕರು ಹೇಳಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com