ಕೃಷಿ ಕಾನೂನು: ದೋಷಪೂರಿತ ಕಾನೂನು, ಸಂಸತ್ತಿನಲ್ಲೇ ರದ್ದುಪಡಿಸುವ ಅಗತ್ಯವಿದೆ ಎಂದ ತಜ್ಞರು

ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಹೊರಟಿದ್ದು, ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ದೃಷ್ಟಿಯಿಂದ ಕೃಷಿ ಕಾನೂನು ವಿನ್ಯಾಸ ಮತ್ತು ವಿಷಯದಲ್ಲಿ ದೋಷಪೂರಿತವಾಗಿದೆ ಎಂದು ಪ್ರಮುಖ ಕೃಷಿ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಂಡೀಗಢ: ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಹೊರಟಿದ್ದು, ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ದೃಷ್ಟಿಯಿಂದ ಕೃಷಿ ಕಾನೂನು ವಿನ್ಯಾಸ ಮತ್ತು ವಿಷಯದಲ್ಲಿ ದೋಷಪೂರಿತವಾಗಿದೆ ಎಂದು ಪ್ರಮುಖ ಕೃಷಿ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪ್ರಮುಖ ಕೃಷಿ ತಜ್ಞ ಡಾ ಸುಖ್ಪಾಲ್ ಸಿಂಗ್ ಅವರು, 'ಈ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದು ಒಳ್ಳೆಯದು. ರೈತರ ಹಿತಾಸಕ್ತಿಗಳ ರಕ್ಷಣೆಗಾಗಿ ಅದರ ವಿನ್ಯಾಸ ಮತ್ತು ವಿಷಯದಲ್ಲಿ ಅವು ದೋಷಪೂರಿತವಾಗಿವೆ. ಉದಾಹರಣೆಗೆ, ಗುತ್ತಿಗೆ ಕೃಷಿ ಕಾಯಿದೆ ಇಂದು ಅನೇಕ ರಾಜ್ಯಗಳಲ್ಲಿ ಕಾನೂನುಬಾಹಿರವಾಗಿರುವ ಭೂಮಿಯನ್ನು ಗುತ್ತಿಗೆಯ ಮೂಲಕ ಸಹಕಾರಿ ಕೃಷಿಗೆ ಅವಕಾಶ ಮಾಡಿಕೊಟ್ಟಿದೆ.

ರೈತರ ಉತ್ಪಾದನೆ ಮತ್ತು ವ್ಯಾಪಾರ ಕಾಯಿದೆ ಕೂಡ ದೋಷಪೂರಿತವಾಗಿದೆ. ಏಕೆಂದರೆ ಇದು ಯಾವುದೇ ಕೌಂಟರ್-ಪಾರ್ಟಿ ರಿಸ್ಕ್ ಗ್ಯಾರಂಟಿ ಇಲ್ಲದೆ ಕೇವಲ ಪಾನ್ ಕಾರ್ಡ್‌ನೊಂದಿಗೆ ರೈತರ ಉತ್ಪನ್ನಗಳನ್ನು ಖರೀದಿಸಲು ಯಾರಿಗಾದರೂ ಅವಕಾಶ ನೀಡುತ್ತದೆ. ಅಲ್ಲದೆ ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಕ್ಷೇತ್ರವನ್ನು ಅವಲಂಬಿಸಿರುವುದು ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಮತ್ತೊಬ್ಬ ಕೃಷಿ ತಜ್ಞ ದೇವಿಂದರ್ ಶರ್ಮಾ ಕೂಡ ಪ್ರಧಾನಿ ಮೋದಿ ಅವರ ಈ ನಿರ್ಧಾರವನ್ನು ಸ್ವಾಗತಿಸಿದ್ದು, 'ಪ್ರಧಾನಿ ಮೋದಿಯವರ ಘೋಷಣೆಯ ನಂತರ ಈ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ. ರೈತರ ಹೋರಾಟ ಸದ್ಯಕ್ಕೆ, ಅರ್ಧದಷ್ಟು ಯುದ್ಧವು ಗೆದ್ದಿದೆ. ನಾವು ರೈತರನ್ನು ಕೃಷಿ ಬಿಕ್ಕಟ್ಟಿನಿಂದ ಹೊರತೆಗೆಯಬೇಕಾದರೆ, ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು (MSP) ಒದಗಿಸಬೇಕು. ರೈತರಿಗೆ ಒಂದು ಚೌಕಟ್ಟಿನಲ್ಲಿ ಕಾನೂನುಬದ್ಧ ಹಕ್ಕು, ಇದರಿಂದ ಅವರ ಆದಾಯವನ್ನು ಖಾತರಿಪಡಿಸಲಾಗುತ್ತದೆ. ಅದು ಕೃಷಿ ವಲಯದಲ್ಲಿ ನಿಜವಾದ ಸುಧಾರಣೆಯಾಗಲಿದೆ. ಈ ಕಾನೂನುಗಳು ಮೊದಲ ದಿನದಿಂದ ದೋಷಪೂರಿತವಾಗಿವೆ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಅಂತಿಮವಾಗಿ, ಉತ್ತಮ ಪ್ರಜ್ಞೆಯು ಮೇಲುಗೈ ಸಾಧಿಸಿದೆ ಅವರು ಹೇಳಿದರು.

ಸಂಸತ್ತಿನಲ್ಲಿ ವಿವಾದಾತ್ಮಕ ಕಾನೂನು ತೆರವಿಗೆ ಅಂತಿಮ ಮೊಳೆ
ಏತನ್ಮಧ್ಯೆ, ಈ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರವು ಸಂಸತ್ತಿನಲ್ಲಿ ಕಾಯಿದೆಯನ್ನು ತರಬೇಕಾಗಿದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ಪ್ರಮುಖ ಮತ್ತು ಹಿರಿಯ ವಕೀಲ ಆರ್‌ಎಸ್ ಚೀಮಾ ಅವರು ಹೇಳುವಂತೆ, 'ಈ ನಿರ್ಧಾರವನ್ನು ಪ್ರಕಟಿಸಿದ ವಿಧಾನವು ರಾಜಕೀಯ ಉದ್ದೇಶದಿಂದ ನಿರ್ದೇಶಿಸಲ್ಪಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಉದ್ದೇಶಕ್ಕಾಗಿ ಸುಗ್ರೀವಾಜ್ಞೆಯನ್ನು ಪ್ರಕಟಿಸುವುದು ಅನುಕೂಲಕರ ಮಾರ್ಗವಾಗಿದೆ. ಸಹಜವಾಗಿ. ಸಂಸತ್ತಿನ ಕಾಯಿದೆಯ ಮೂಲಕ ಅಂತಿಮ ಮುದ್ರೆಯನ್ನು ಹಾಕಲಾಗುತ್ತದೆ ಎಂದು ಹೇಳಿದರು.

ಮತ್ತೊಬ್ಬ ಪ್ರಮುಖ ವಕೀಲ ಜಿಪಿಎಸ್ ಧಿಲ್ಲೋನ್ ಮಾತನಾಡಿ, ಸರ್ಕಾರವು ಒಂದೇ ಮಸೂದೆಯ ಮೂಲಕ ಮೂರು ಕಾನೂನುಗಳನ್ನು ರದ್ದುಗೊಳಿಸಬಹುದು. ಆದರೆ ಸಂಸತ್ತಿನಲ್ಲಿ ಈ ಸಂಬಂಧ ಮಸೂದೆಯನ್ನು ತರಬೇಕು ಮತ್ತು ಅದನ್ನು ಅಂಗೀಕರಿಸಬೇಕು, ಅದು ನಂತರ ಅದು ಕಾಯ್ದೆಯಾಗಲಿದೆ ಎಂದು  ಹೇಳಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com