ನೋಯ್ಡ: ಮಧ್ಯಮ ವಯಸ್ಸಿನ ದಲಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಹೀನ ಕೃತ್ಯ ಉತ್ತರ ಪ್ರದೇಶದ ಜವಾರ್ ನಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ಈ ಕೃತ್ಯ ನಡೆದಿರುವುದನ್ನು ದೃಢಪಡಿಸಿದ್ದು, ಈ ಘಟನೆ ಭಾನುವಾರ ನಡೆದಿದೆ.
ಮಹಿಳೆ ಹುಲ್ಲು ಕಟಾವು ಮಾಡಲು ಹೋಗಿದ್ದಾಗ ಈ ಸಾಮೂಹಿಕ ಅತ್ಯಾಚಾರವೆಸಗಲಾಗಿದ್ದು, 28 ವರ್ಷದ ಪ್ರಮುಖ ಆರೋಪಿ ದನ ಮೇಯಿಸುವುದಕ್ಕೆ ಅದೇ ಸ್ಥಳಕ್ಕೆ ಬಂದಿದ್ದ ಎಂದು ಪ್ರಾಥಮಿಕ ತನಿಖೆ ಮೂಲಕ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಂತೆ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಈ ವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಡಿಸಿಪಿ (ಮಹಿಳಾ ಮತ್ತು ಮಕ್ಕಳ ರಕ್ಷಣೆ) ವೃಂದಾ ಶುಕ್ಲಾ ಈ ಬಗ್ಗೆ ಮಾತನಾಡಿದ್ದು, ಬೆಳಿಗ್ಗೆ 9:30 ರಿಂದ 10:30 ರ ನಡುವೆ ಕೃಷಿ ಭೂಮಿಯಲ್ಲಿ ಮಹಿಳೆ ಹುಲ್ಲು ಕಟಾವು ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಒಂದೇ ಗ್ರಾಮದವರಾಗಿದ್ದಾರೆ.
ಪ್ರಮುಖ ಆರೋಪಿ ಡ್ರಗ್ ವ್ಯಸನಿಯಾಗಿದ್ದು, ಘಟನೆಯಲ್ಲಿ ಇನ್ನಿತರರ ಪಾತ್ರ ತನಿಖೆಯ ನಂತರ ಸ್ಪಷ್ಟವಾಗಬೇಕಿದೆ ಎಂದು ಡಿಸಿಪಿ ಹೇಳಿದರು.
Advertisement