ಮೋದಿ ಸರ್ಕಾರ ಬಂದ ಮೇಲೆ 35,000 ಉದ್ಯಮಿಗಳು ದೇಶ ತೊರೆದಿದ್ದಾರೆ: ಪ.ಬಂಗಾಳ ವಿತ್ತಸಚಿವ ಆರೋಪ

ಮೋರ್ಗನ್ ಸ್ಟ್ಯಾನ್ಲಿ ಸಂಸ್ಥೆ ಇತ್ತೀಚಿಗೆ ಸಂಶೋಧನಾ ವರದಿ ಪ್ರಕಟಿಸಿತ್ತು. ಅದನ್ನು ಉಲ್ಲೇಖಿಸಿ ಮಿತ್ರಾ ಅವರು ಈ ಆರೋಪ ಮಾಡಿದ್ದಾರೆ. 
ಪಶ್ಚಿಮ ಬಂಗಾಳ ವಿತ್ತ ಸಚಿವ ಅಮಿತ್ ಮಿತ್ರಾ
ಪಶ್ಚಿಮ ಬಂಗಾಳ ವಿತ್ತ ಸಚಿವ ಅಮಿತ್ ಮಿತ್ರಾ

ಕೋಲ್ಕತಾ: ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಸುಮಾರು 35,000 ಮಂದಿ ಭಾರತೀಯ ಉದ್ಯಮಿಗಳು ದೇಶ ತೊರೆದಿದ್ದಾರೆ ಎಂದು ಪಶ್ಚಿಮ ಬಂಗಾಳ ವಿತ್ತ ಸಚಿವ ಅಮಿತ್ ಮಿತ್ರಾ ಅವರು ಆರೋಪ ಮಾಡಿದ್ದಾರೆ.

2014- 20ರ ಅವಧಿಯಲ್ಲಿ ಈ ವಿದ್ಯಮಾನ ಘಟಿಸಿದ್ದು, ಈ ಬಗ್ಗೆ ನರೇಂದ್ರ ಮೋದಿ ಸಂಸತ್ತಿನಲ್ಲಿ ತಮ್ಮ ಆಡಳಿತದಲ್ಲಿ ಉದ್ಯಮಿಗಳು ಏಕೆ ಕಾಲ್ತೆಗೆದರು ಎಂಬುದರ ಕುರಿತಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

೨೦೧೪- ೧೮ರ ಅವಧಿಯಲ್ಲಿ ೨೩,೦೦೦ ಮಂದಿ ಉದ್ಯಮಿಗಳು ದೇಶ ತೊರೆದಿದ್ದಾರೆ ಎಂದು ಪ್ರತಿಷ್ಟಿತ ವಾಣಿಜ್ಯ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ಇತ್ತೀಚಿಗೆ ಸಂಶೋಧನಾ ವರದಿ ಪ್ರಕಟಿಸಿತ್ತು. ಅದನ್ನು ಉಲ್ಲೇಖಿಸಿ ಮಿತ್ರಾ ಅವರು ಈ ಆರೋಪ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com