ಮುಂಬೈ: ಬಾಲಿವುಡ್ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣ ವಿಚಾರಣೆ ಉಸ್ತುವಾರಿ ಹೊತ್ತಿದ್ದ ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ವಿರುದ್ಧ 25 ಕೋಟಿ ಹಣದ ಆಮಿಷ ಆರೋಪ ದಾಖಲಾಗಿತ್ತು. ಅದರ ಬೆನ್ನಲ್ಲೇ ಸಮೀರ್ ವಾಂಖಡೆ ಅವರು ತಮ್ಮ ವಿರುದ್ಧ ಆರೋಪದ ವಿರುದ್ಧ ಕಾನೂನು ರಕ್ಷಣೆ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ವಾಂಖಡೆ ಅವರು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗರಾಳೆ ಅವರಿಗೆ ಪತ್ರ ಬರೆದಿದ್ದು, ತಮ್ಮ ವಿರುದ್ಧ ಲಂಚದ ಆರೋಪ ನಿರಾಧಾರವಾಗಿದ್ದು, ಅದರ ವಿರುದ್ಧ ತಮಗೆ ಕಾನೂನು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ವಾಂಖಡೆ ಅವರ ಮಧ್ಯವರ್ತಿಯೋರ್ವ ಶಾರುಖ್ ಬಳಿ 25 ಕೋಟಿ ರೂ. ಲಂಚ ಕೊಟ್ಟರೆ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದ್ದಾಗಿ ಪ್ರಕರಣದ ಮೊದಲನೇ ಆರೋಪಿ ಪ್ರಭಾಕರ್ ಸಯಿಲ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದ.
ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್
ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಆರೋಪ ತಳ್ಳಿಹಾಕಿದ ಅನನ್ಯಾ ಪಾಂಡೆ, ಸೋಮವಾರ ಮತ್ತೆ ವಿಚಾರಣೆ
ಅನನ್ಯ ಪಾಂಡೆಯಿಂದ ಮೂರು ಬಾರಿ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಸಿರುವುದು ಚಾಟ್ ನಿಂದ ಬಹಿರಂಗ: ಎನ್ ಸಿಬಿ
ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ನ್ಯಾಯಾಂಗ ಬಂಧನ ಅವಧಿ ಅ.30 ರವರೆಗೆ ವಿಸ್ತರಣೆ, ಅನನ್ಯಾಗೆ ತೀವ್ರ ವಿಚಾರಣೆ
Advertisement