ಎಲ್ಗಾರ್ ಪರಿಷದ್ ಆರೋಪಿ ವರವರ ರಾವ್ ಜಾಮೀನು ಅವಧಿ ವಿಸ್ತರಿಸಿದ ಬಾಂಬೆ ಹೈಕೋರ್ಟ್
ತಲೋಜಾ ಜೈಲಿನಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ ರಾವ್ ಅವರಿಗೆ ಫೆಬ್ರವರಿ 22ರಂದು ಜಾಮೀನು ದೊರೆತಿತ್ತು. ಅದರಂತೆ ಸೆಪ್ಟೆಂಬರ್ 5ರಂದು ಅವರ ಜಾಮೀನು ಅವಧಿ ಕೊನೆಗೊಳ್ಳಲಿತ್ತು.
Published: 26th October 2021 07:43 PM | Last Updated: 26th October 2021 07:43 PM | A+A A-

ಸಾಹಿತಿ ವರವರ ರಾವ್
ಮುಂಬೈ: ಎಲ್ಗಾರ್ ಪರಿಷದ್ ಗಲಭೆ ಪ್ರಕರದಡಿ ಮಾವೋವಾದಿಗಳೊಂದಿಗೆ ನಂಟು ಹೊಂದಿದ ಆರೋಪದಡಿ ಬಂಧನಕ್ಕೊಳಗಾಗಿ ಮಧ್ಯಂತರ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ ತೆಲುಗು ಕವಿ, ಸಾಹಿತಿ ವರವರ ರಾವ್ ಅವರ್ ಜಾಮೀನು ಅವಧಿಯನ್ನು ಬಾಂಬೆ ಹೈಕೋರ್ಟ್ ವಿಸ್ತರಿಸಿದೆ.
ಇದನ್ನೂ ಓದಿ: ಎಲ್ಗಾರ್ ಪರಿಷತ್ ಪ್ರಕರಣ: ಆರೋಗ್ಯದ ನೆಲೆಗಟ್ಟಿನಲ್ಲಿ ವರವರ ರಾವ್ ಗೆ ಮಧ್ಯಂತರ ಜಾಮೀನು
ತಲೋಜಾ ಜೈಲಿನಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ ರಾವ್ ಅವರಿಗೆ ಫೆಬ್ರವರಿ 22ರಂದು ಜಾಮೀನು ದೊರೆತಿತ್ತು. ಅದರಂತೆ ಸೆಪ್ಟೆಂಬರ್ 5ರಂದು ಅವರ ಜಾಮೀನು ಅವಧಿ ಕೊನೆಗೊಳ್ಳಲಿತ್ತು.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರ ವರವರ ರಾವ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಇದೀಗ ಜಾಮೀನು ಅವಧಿಯನ್ನು ನವೆಂಬರ್ 18ರ ತನಕ ವಿಸ್ತರಿಸಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ. 82 ವರ್ಷದ ರಾವ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಆಧಾರದ ಮೇರೆಗೆ ಜಾಮೀನು ನೀಡಲಾಗಿತ್ತು.