ಹಣದುಬ್ಬರ, ನಿರುದ್ಯೋಗ ವಿರುದ್ಧ ಹೋರಾಟ ಮುಂದುವರಿಕೆ: ಬಿಜೆಪಿ ಸಂಸದ ವರುಣ್ ಗಾಂಧಿ

ಹಣದುಬ್ಬರ ಹಾಗೂ ನಿರುದ್ಯೋಗ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
ವರುಣ್ ಗಾಂಧಿ
ವರುಣ್ ಗಾಂಧಿ
Updated on

ಪಿಲಿಭಿತ್: ಹಣದುಬ್ಬರ ಹಾಗೂ ನಿರುದ್ಯೋಗ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ಭಾರತದಲ್ಲಿನ ಮಕ್ಕಳು ಹಾಗೂ ಯುವ ಜನತೆ ಗೌರವ ಪಡೆಯಲು ಕೆಲಸ ಮಾಡುತ್ತೇನೆ. ಇಲ್ಲಿ ಯಾರೂ ಕೂಡಾ ಸಹಾಯಕ್ಕಾಗಿ ಬೇರೆಯವರ ಮುಂದೆ ತಲೆ ತಗ್ಗಿಸಬಾರದು ಎಂದು ಹೇಳುವ ಮೂಲಕ ತನ್ನದೇ ಪಕ್ಷದ ವಿರುದ್ಧ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ನಿರುದ್ಯೋಗ ದೇಶದಲ್ಲಿ ನಿರ್ಮೂಲನೆಯಾಗುವವರೆಗೂ, ನಿಮ್ಮ ಮಕ್ಕಳು ಉದ್ಯೋಗ ಪಡೆಯುವುದಿಲ್ಲ, ನನ್ನ ಸಂಘರ್ಷ ಮುಂದುವರೆಯಲಿದೆ. ಭ್ರಷ್ಟಾಚಾರದ ವಿರುದ್ಧವೂ ನಾವು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು. 

ನಮ್ಮ ಪೂರ್ವಿಕರ ತ್ಯಾಗ, ಬಲಿದಾನ ವ್ಯರ್ಥವಾಗಲು ಅವಕಾಶ ನೀಡುವಿಲ್ಲ, ಮೂಲ ಸಮಸ್ಯೆಗಳು, ಅನ್ಯಾಯ ಮತ್ತು ಭ್ರಷ್ಟಾಚಾರ ವಿರುದ್ಧ ಜನರು ಧ್ವನಿ ಎತ್ತುವ ಕಾಲ ಬರಲಿದೆ ಎಂದು ಅವರು ಗುಡುಗಿದರು. ಪಿಲಿಭಿತ್ ಪ್ರವಾಸದ ವೇಳೆಯಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ವರುಣ್ ಗಾಂಧಿ, ನಗರ ಸ್ಥಳೀಯ ಸಂಸ್ಥೆ ಸದಸ್ಯರೊಂದಿಗೆ ಸಂವಾದ ನಡೆಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com