ನಾಳೆ ಭಗವಂತ್ ಮಾನ್ ಮದುವೆ: ಪಂಜಾಬ್ ಸಿಎಂ ಕೈಹಿಡಿಯುತ್ತಿರುವ ಅದೃಷ್ಟವಂತೆ ಯಾರು ಗೊತ್ತ?

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಚ್ಛೇದನವಾದ 6 ವರ್ಷಗಳ ನಂತರ ಜುಲೈ 7ರಂದು ಎರಡನೇ ಮದುವೆಯಾಗುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.
ಗುರ್ಪ್ರೀತ್ ಕೌರ್-ಭಗವಂತ್ ಮಾನ್
ಗುರ್ಪ್ರೀತ್ ಕೌರ್-ಭಗವಂತ್ ಮಾನ್

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಚ್ಛೇದನವಾದ 6 ವರ್ಷಗಳ ನಂತರ ಜುಲೈ 7ರಂದು ಎರಡನೇ ಮದುವೆಯಾಗುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.

ಸಿಎಂ ತಮ್ಮ ಅಧಿಕೃತ ನಿವಾಸದಲ್ಲಿ ವಿವಾಹವಾಗಲಿದ್ದು, ಸಮಾರಂಭದಲ್ಲಿ ಆಪ್ತರು ಹಾಗೂ ಸಂಬಂಧಿಕರು ಮಾತ್ರ ಭಾಗವಹಿಸಲಿದ್ದಾರೆ. ಪಂಜಾಬ್ ಸಿಎಂ ವಿವಾಹವಾಗುತ್ತಿರುವ ವಧು ಡಾ. ಗುರುಪ್ರೀತ್ ಕೌರ್ ಎಂಬಿಬಿಎಸ್ ಮಾಡಿದ್ದಾರೆ.

ಭಗವಂತ್ ಮನ್ ಆರು ವರ್ಷಗಳ ಹಿಂದೆ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ ರಿಂದ ವಿಚ್ಛೇದನ ಪಡೆದಿದ್ದರು. ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಾನ್ ಮಕ್ಕಳಿಬ್ಬರೂ ತಂದೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದರು.

ವರದಿಯ ಪ್ರಕಾರ, ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ ವಧುವನ್ನು ಆಯ್ಕೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com