ಗಾಜಿಯಾಬಾದ್‌: 'ಧರ್ಮ ಸಂಸದ್' ನಡೆಸುವುದನ್ನು ವಿರೋಧಿಸಿ ಯತಿ ನರಸಿಂಹಾನಂದ್‌ಗೆ ಪೊಲೀಸ್ ನೋಟಿಸ್

ಘಾಜಿಯಾಬಾದ್‌ನ ದಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರಿಗೆ ಉತ್ತರ ಪ್ರದೇಶ ಪೊಲೀಸರು ಗುರುವಾರ ನೋಟಿಸ್ ಜಾರಿ ಮಾಡಿದೆ.
ಯತಿ ನರಸಿಂಹನಂದ್
ಯತಿ ನರಸಿಂಹನಂದ್
Updated on

ಗಾಜಿಯಾಬಾದ್(ಉತ್ತರಪ್ರದೇಶ): ಘಾಜಿಯಾಬಾದ್‌ನ ದಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರಿಗೆ ಉತ್ತರ ಪ್ರದೇಶ ಪೊಲೀಸರು ಗುರುವಾರ ನೋಟಿಸ್ ಜಾರಿ ಮಾಡಿದ್ದು, ಜಿಲ್ಲಾಡಳಿತದಿಂದ ಅನುಮತಿ ಪಡೆಯದ 'ಧರ್ಮ ಸಂಸದ್' ಮತ್ತು ಪೂರ್ವಸಿದ್ಧತಾ ಸಭೆಯನ್ನು ಆಯೋಜಿಸದಂತೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದರು.

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದ ಆಗಾಗ್ಗೆ ವಿವಾದವನ್ನು ಹುಟ್ಟುಹಾಕುವ ನರಸಿಂಹಾನಂದ್, ಬಿಜೆಪಿಯ ಮಾಜಿ ಸಂಸದ ಬೈಕುಂತ್ ಲಾಲ್ ಶರ್ಮಾ ಅವರ ಜನ್ಮದಿನವಾದ ಡಿಸೆಂಬರ್ 17ರಿಂದ ಮೂರು ದಿನಗಳ ಕಾಲ 'ಧರ್ಮ ಸಂಸದ್' ನಡೆಸಲು ಮುಂದಾಗಿದ್ದರು. ಮೂರು ದಿನಗಳ ಕಾರ್ಯಕ್ರಮದ ಯೋಜನೆಗಳನ್ನು ರೂಪಿಸಲು ಡಿಸೆಂಬರ್ 6ರಂದು ಪೂರ್ವಸಿದ್ಧತಾ ಸಭೆಯನ್ನು ಕರೆಯಲಾಗಿದೆ.

ಗಾಜಿಯಾಬಾದ್ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಇರಾಜ್ ರಾಜಾ, 'ಅನುಮತಿ ಇಲ್ಲದೆ, ನೂರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿರುವ ಮೂರು ದಿನಗಳ 'ಧರ್ಮ ಸಂಸದ್'ಗೆ ಪೊಲೀಸರು ಅನುಮತಿ ನೀಡುವುದಿಲ್ಲ. ಕಾರಣ ಅವರಿಗೆ ಭದ್ರತೆ ಒದಗಿಸುವುದು ಕಠಿಣ ಕೆಲಸವಾಗಿದೆ ಎಂದರು.

ಇದಲ್ಲದೆ, ನಾಗರಿಕ ಸಂಸ್ಥೆಗಳ ಚುನಾವಣೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಧರ್ಮ ಸಂಸದ್ ಮತ್ತು ಪೂರ್ವಸಿದ್ಧತಾ ಸಭೆ ಆಯೋಜಿಸದಂತೆ ಗುರುವಾರ ನರಸಿಂಹಾನಂದ ಅವರಿಗೆ ಪೊಲೀಸರು ಸೂಚನೆ ನೀಡಿದ್ದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅರ್ಚಕರು, 'ದೇವಸ್ಥಾನದ ಆವರಣದಲ್ಲಿ ಧರ್ಮ ಸಂಸದ್ ನಡೆಯಲಿದೆ. ಅದಕ್ಕಾಗಿ ಅನುಮತಿ ಬೇಕಿಲ್ಲ ಹಾಗೂ ಇದೇ ಮೊದಲ ಬಾರಿಗೆ ನಡೆಸುತ್ತಿಲ್ಲ. ಯಾವುದೇ ಬೆಲೆ ತೆತ್ತಾದರೂ ಆಯೋಜಿಸುತ್ತೇವೆ. ಪೊಲೀಸರು ಮತ್ತು ಆಡಳಿತವು ಅಡಚಣೆಯನ್ನು ಸೃಷ್ಟಿಸುತ್ತದೆ. ದರ್ಶಕರು ತಮ್ಮ ಪ್ರತಿಭಟನೆಯನ್ನು ಸಲ್ಲಿಸುತ್ತಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com