ಇಂತಹ ರಾಜಕೀಯ ದ್ವೇಷವನ್ನು ನಾವೆಂದೂ ನೋಡಿರಲಿಲ್ಲ: ಸಂಜಯ್ ರಾವತ್

ಭೂಹಗರಣದಿಂದ ಜೈಲು ಸೇರಿದ್ದ ಶಿವಸೇನಾ ಮುಖಂಡ ಸಂಜಯ್ ರಾವತ್ ನಿನ್ನೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ರಾಜಕೀಯ ದ್ವೇಷವನ್ನು ನಾವೆಂದೂ ನೋಡಿರಲಿಲ್ಲ ಎಂದರು.
ಸಂಜಯ್ ರಾವತ್
ಸಂಜಯ್ ರಾವತ್
Updated on

ಮುಂಬೈ:  ಭೂಹಗರಣದಿಂದ ಜೈಲು ಸೇರಿದ್ದ ಶಿವಸೇನಾ ಮುಖಂಡ ಸಂಜಯ್ ರಾವತ್ ನಿನ್ನೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ರಾಜಕೀಯ ದ್ವೇಷವನ್ನು ನಾವೆಂದೂ ನೋಡಿರಲಿಲ್ಲ ಎಂದರು.

ಇಂದು ಉದ್ಧವ್ ಠಾಕ್ರೆ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತೇನೆ. ಯಾರ ಮೇಲೆ ಯಾವುದೇ ದೂರು ಇಲ್ಲ. ಆದರೆ, ಇಂತಹ ರಾಜಕೀಯ ದ್ವೇಷವನ್ನು ನಾವೆಂದೂ ನೋಡಿರಲಿಲ್ಲ. ಯಾವುದೇ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ದೂಷಿಸುವುದಿಲ್ಲ ಎಂದು ಅವರು ಹೇಳಿದರು. 

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಅವರ ಕೆಲವೊಂದು ಒಳ್ಳೆಯ ನಿರ್ಧಾರಗಳನ್ನು ಸ್ವಾಗತಿಸುತ್ತೇನೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೆಲವೊಂದು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರಿಂದಲೇ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ ಅಂತಾ ಅನ್ನಿಸುತ್ತಿದೆ. ಫಡ್ನವೀಸ್ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಎಂದರು. 

ಪತ್ರಾ ಚಾಲ್ ಮರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೇ ಆಗಸ್ಟ್ 1 ರಂದು ಇಡಿಯಿಂದ ಬಂಧನಕ್ಕೊಳಗಾಗಿ ಅರ್ಥರ್ ಜೈಲಿನಲ್ಲಿದ್ದ ಸಂಜಯ್ ರಾವತ್ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಜಾಮೀನು ನೀಡಿದ ನಂತರ ಅವರು ಜೈಲಿನಿಂದ ಹೊರಗೆ ಬಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com