ಗ್ರೆನೇಡ್ ಎಸೆದು ಇಬ್ಬರು ಕಾರ್ಮಿಕರ ಹತ್ಯೆ ಮಾಡಿದ್ದ ಉಗ್ರನ ಸದೆಬಡಿದ ಸೇನಾಪಡೆ

ಗ್ರೆನೇಡ್​ ಎಸೆದು ಇಬ್ಬರು ಕಾರ್ಮಿಕರ ಹತ್ಯೆಗೈದಿದ್ದ ಹೈಬ್ರಿಡ್​ ಉಗ್ರನನ್ನು ಭಾರತೀಯ ಸೇನಾಪಡೆ ಬುಧವಾರ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಗ್ರೆನೇಡ್​ ಎಸೆದು ಇಬ್ಬರು ಕಾರ್ಮಿಕರ ಹತ್ಯೆಗೈದಿದ್ದ ಹೈಬ್ರಿಡ್​ ಉಗ್ರನನ್ನು ಭಾರತೀಯ ಸೇನಾಪಡೆ ಬುಧವಾರ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. 

ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್ ಇ ತೊಯ್ಬಾ (ಎಲ್ಇಟಿ)ಗೆ ಸೇರಿದ ಹೈಬ್ರಿಡ್ ಉಗ್ರನನ್ನು ಭಾರತೀಯ ಸೇನಾಪಡೆ ಇಂದು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಶೋಪಿಯಾನ್ ಜಿಲ್ಲೆಯ ಹೆರ್ಮೈನ್ ಪ್ರದೇಶದಲ್ಲಿ ಉತ್ತರಪ್ರದೇಶದ ಇಬ್ಬರು ಕಾರ್ಮಿಕರ ಮೇಲೆ ಗ್ರೆನೇಡ್​ ಎಸೆದು ಹತ್ಯೆ ಮಾಡಿದ್ದ ಆರೋಪದಡಿ ಬಂಧಿಸಲ್ಪಟ್ಟಿದ್ದ ಇಮ್ರಾನ್ ಬಶೀರ್ ಗನೈ ಎನ್ಕೌಂಟರ್ ನಲ್ಲಿ ಹತನಾಗಿದ್ದಾನೆ.

ಬಂಧಿತ ಹೈಬ್ರಿಡ್ ಭಯೋತ್ಪಾದಕ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸ್ ಮತ್ತು ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆ ಮುಂದುವರೆಸಿದವು. ಈ ವೇಳೆ ಇಮ್ರಾನ್ ಬಶೀರ್ ಗನೈ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com