ಬಾಯ್ ಫ್ರೆಂಡ್ ಬಗ್ಗೆ ಆಕ್ಷೇಪಿಸಿದ್ದಕ್ಕೆ ತಮ್ಮನನ್ನೇ ಹತ್ಯೆ ಮಾಡಿದ ಅಕ್ಕ!

ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ತನ್ನ ಸಹೋದರನನ್ನು ಕೊಂದ ಆರೋಪದ ಮೇಲೆ 25 ವರ್ಷದ ಯುವತಿ ಮತ್ತು ಆಕೆಯ ಗೆಳೆಯನನ್ನು ಸೋಮವಾರ ಬಂಧಿಸಲಾಗಿದೆ.
ಪೊಲೀಸ್ ವಾಹನಗಳ ಚಿತ್ರ
ಪೊಲೀಸ್ ವಾಹನಗಳ ಚಿತ್ರ
Updated on

ರಾಮಗಢ: ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ತನ್ನ ಸಹೋದರನನ್ನು ಕೊಂದ ಆರೋಪದ ಮೇಲೆ 25 ವರ್ಷದ ಯುವತಿ ಮತ್ತು ಆಕೆಯ ಗೆಳೆಯನನ್ನು ಸೋಮವಾರ ಬಂಧಿಸಲಾಗಿದೆ. 21 ವರ್ಷದ ರೋಹಿತ್ ಕುಮಾರ್ ಶವವನ್ನು ಯುವತಿ ಒಂಟಿಯಾಗಿ ವಾಸಿಸುತ್ತಿದ್ದ ಪತ್ರಾಟು ಥರ್ಮಲ್ ಪವರ್ ಸ್ಟೇಷನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಭಾನುವಾರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಕುಮಾರ್‌ನ ದೇಹವನ್ನು ಪೊಲೀಸರು ಹೊರತೆಗೆದರು.

ತನ್ನ ಕಿರಿಯ ಸಹೋದರ ರೋಹಿತ್ ಕುಮಾರ್ (21) ಅವರ ದೇಹವನ್ನು ಪಿಟಿಪಿಎಸ್ ಕ್ವಾರ್ಟರ್‌ನಿಂದ ಹೊರತೆಗೆದ ನಂತರ ಚಂಚಲಾ ಕುಮಾರಿ ಮತ್ತು ಆಕೆಯ ಸ್ನೇಹಿತ ಸೋನು ಅನ್ಸಾರಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ಸಮುದಾಯದ ಯುವಕನೊಂದಿಗೆ ತನ್ನ ಸಹೋದರಿಯ ಸಂಬಂಧವನ್ನು ವಿರೋಧಿಸಿದ್ದ ರೋಹಿತ್ ಕುಮಾರ್ ನನ್ನ ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂಚಲಾ ಕುಮಾರಿ ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆಯ ತಂದೆ ನರೇಶ್ ಮಹ್ತೋ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪತ್ರಾಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಟಿಪಿಎಸ್ ಉದ್ಯೋಗಿ ಮಹ್ತೋ ರಾಂಚಿಗೆ ವರ್ಗಾವಣೆಗೊಂಡ ನಂತರ ಸೋನು ಅನ್ಸಾರಿ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅವರ ಮಗಳು ತನ್ನ ಸಹೋದರನನ್ನು ಕೊಂದು ಶವವನ್ನು ಹೂತು ಹಾಕಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ರಾಂಚಿಯ ಚುಟಿಯಾದಲ್ಲಿ ವಾಸಿಸುತ್ತಿದ್ದ ತನ್ನ ಮಗನನ್ನು ಜೂನ್ 30, 2022 ರಂದು ರಾಮಗಢಕ್ಕೆ ಕರೆದಳು ಮತ್ತು ನಂತರ ಅವನು ನಾಪತ್ತೆಯಾಗಿದ್ದನು. ಅದರಂತೆ ಕುಟುಂಬದವರು ಚುಟಿಯಾ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು ಎಂದು ಮಹ್ತೋ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚುಟಿಯಾ ಪೊಲೀಸರು ಪತ್ರಾಟುಗೆ ಭೇಟಿ ನೀಡಿ ಚಂಚಲಾ ಕುಮಾರಿಯನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ಪ್ರಾರಂಭಿಸಿದರು ಜಂಟಿ ತನಿಖೆಯ ಸಮಯದಲ್ಲಿ ಅವರು ಕೊಲೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡರು ಮತ್ತು ಶವದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com