social_icon

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮಲ್ಲಿಕಾರ್ಜುನ ಖರ್ಗೆಗೆ ಸಮನ್ಸ್ ನೀಡಿದ್ದ ಇ.ಡಿ ವಿರುದ್ಧ ಕಾಂಗ್ರೆಸ್ ಕಿಡಿ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದು ಸಂಸತ್ತಿಗೆ ಮತ್ತು ಸಂಸದರಿಗೆ ಮಾಡಿರುವ 'ಅವಮಾನ' ಎಂದಿರುವ ಕಾಂಗ್ರೆಸ್, ಇದು ಮರುಕಳಿಸದಂತೆ ನೋಡಿಕೊಳ್ಳಲು ಉಭಯ ಸದನಗಳ ಅಧ್ಯಕ್ಷರು ಇದು ಸೂಕ್ತ ಸಮಯ ಎಂದು ಸೋಮವಾರ ಹೇಳಿದೆ.

Published: 08th August 2022 02:03 PM  |   Last Updated: 08th August 2022 02:15 PM   |  A+A-


Mallikarjun Kharge

ಮಲ್ಲಿಕಾರ್ಜುನ್ ಖರ್ಗೆ

Posted By : ramya
Source : Online Desk

ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದು ಸಂಸತ್ತಿಗೆ ಮತ್ತು ಸಂಸದರಿಗೆ ಮಾಡಿರುವ 'ಅವಮಾನ' ಎಂದಿರುವ ಕಾಂಗ್ರೆಸ್, ಇದು ಮರುಕಳಿಸದಂತೆ ನೋಡಿಕೊಳ್ಳಲು ಉಭಯ ಸದನಗಳ ಅಧ್ಯಕ್ಷರು ಇದು ಸೂಕ್ತ ಸಮಯ ಎಂದು ಸೋಮವಾರ ಹೇಳಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖರ್ಗೆ ಅವರು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಗುರುವಾರ ಹೇಳಿತ್ತು.

'ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಇ.ಡಿ ಖರ್ಗೆ ಅವರಿಗೆ ಸಮನ್ಸ್ ನೀಡಿರುವುದು ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಮತ್ತು ಕಾಂಗ್ರೆಸ್‌ಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಮಾಡಲಾಗಿದೆ. ಯಂಗ್ ಇಂಡಿಯನ್‌ನ ಕಛೇರಿಯಲ್ಲಿ ಇ.ಡಿಯಿಂದ ಹುಡುಕಾಟ ನಡೆಸುವ ಈ ಕಸರತ್ತನ್ನು ವಿರೋಧ ಪಕ್ಷದ ನಾಯಕರನ ಅಧಿಕೃತ ವಕೀಲರ ಉಪಸ್ಥಿತಿಯಲ್ಲಿ ಉತ್ತಮವಾಗಿ ನಡೆಸಬಹುದಿತ್ತು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ದುರಂತ ನಾಯಕ ಖರ್ಗೆ ದಲಿತ ಎಂಬ ಕಾರಣಕ್ಕಾಗಿ ಇಷ್ಟೊಂದು ನಿಕೃಷ್ಟವೇ? ಕಾಂಗ್ರೆಸ್ ಮೌನವನ್ನು ಪ್ರಶ್ನಿಸಿದ ಬಿಜೆಪಿ!

ಆದರೆ, ಇ.ಡಿ ಈ ಮನವಿಗೆ ಸಮ್ಮತಿಸಲಿಲ್ಲ ಮತ್ತು ಅವರ ಉಪಸ್ಥಿತಿಗೆ ಒತ್ತಾಯಿಸಿತು. ಸದನವು ಅಧಿವೇಶನದಲ್ಲಿದ್ದರೂ, ಖರ್ಗೆ ಅವರು ಸಮನ್ಸ್‌ಗೆ ಬದ್ಧರಾಗಿದ್ದರು ಮತ್ತು ಅದರ ಪ್ರಕಾರ ಯಂಗ್ ಇಂಡಿಯನ್ ಕಚೇರಿಗೆ ಹೋದರು ಎಂದು ರಮೇಶ್ ಹೇಳಿದರು.

'ಈ ಸಂಗತಿಯನ್ನು ಹೊರತಾಗಿಸಿಯೂ, ಸಂಸತ್ತಿನ ಅಧಿವೇಶನ ನಡೆಯುತ್ತಿರುವ ವೇಳೆ ಪ್ರತಿಪಕ್ಷದ ನಾಯಕ ಅಥವಾ ಇತರೆ ಸಂಸದರಿಗೆ ಇ.ಡಿ ಅಥವಾ ಯಾವುದೇ ಕಾನೂನು ಜಾರಿ ಸಂಸ್ಥೆಗಳು ಸಮನ್ಸ್ ನೀಡುವುದು ಪವಿತ್ರ ಸಂಸ್ಥೆ ಸಂಸತ್ತಿನ ಮತ್ತು ಸಂಸದರಿಗೆ ಮಾಡುವ ಸಂಪೂರ್ಣ ಅವಮಾನವಾಗಿದೆ' ಎಂದು ಅವರು ಹೇಳಿದರು. .

'ಇಂತಹ ಸಂದರ್ಭದಲ್ಲಿ, ಸಂಸತ್ತಿನ ಮತ್ತು ಸಂಸದರ ಪಾವಿತ್ರ್ಯತೆ ಮತ್ತು ಅದರ ಸಮಯ-ಗೌರವಕ್ಕೆ ಅನುಗುಣವಾಗಿ, ಉಭಯ ಸದನಗಳ ಸಭಾಪತಿಗಳು ಈ ಬಗ್ಗೆ ಚರ್ಚಿಸಿ ಸಂಸತ್ತು ಮತ್ತು ಸಂಸದರ ಮೇಲೆ ನಡೆಯುವ ಇಂತಹ ಘೋರ ಅವಮಾನಗಳು ಮರುಕಳಿಸದಂತೆ ನೋಡಿಕೊಳ್ಳಲು ಇದು ಸಕಾಲವಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ತನಿಖೆ: 8 ಗಂಟೆ ಇಡಿಯಿಂದ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ

ಕ್ರಿಮಿನಲ್ ಪ್ರಕರಣಗಳಲ್ಲಿ ಈ ರೀತಿಯ ನಡೆಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಲ್ಒಪಿ ಆರೋಪಿಯಲ್ಲ ಎಂದ ಅವರು, ಲೋಕಸಭೆಯಲ್ಲಿನ ನಿಯಮ 229 ಮತ್ತು ರಾಜ್ಯಸಭೆಯಲ್ಲಿನ ನಿಯಮ 222A ನ ಗಮನ ಸೆಳೆದರು. ಇವುಗಳ ಪ್ರಕಾರ, ಸಂಸತ್ ಸದಸ್ಯನನ್ನು ಕ್ರಿಮಿನಲ್ ಆರೋಪದ ಮೇಲೆ ಬಂಧಿಸಿದಾಗ ಅಥವಾ ಕ್ರಿಮಿನಲ್ ಅಪರಾಧಕ್ಕಾಗಿ ಅಥವಾ ಜೈಲು ಶಿಕ್ಷೆಗೆ ಒಳಗಾದ ಅಥವಾ ಕಾರ್ಯನಿರ್ವಾಹಕ ಆದೇಶದಡಿಯಲ್ಲಿ ಬಂಧಿಸಲ್ಪಟ್ಟಾಗ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಅಥವಾ ಕಾರ್ಯನಿರ್ವಾಹಕ ಪ್ರಾಧಿಕಾರವು ತಕ್ಷಣವೇ ಲೋಕಸಭೆ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರಿಗೆ ಸಂದರ್ಭಾನುಸಾರ ಮಾಹಿತಿ ಕಳುಹಿಸಬೇಕು' ಎಂದು ರಮೇಶ್ ತಿಳಿಸಿದ್ದಾರೆ.


Stay up to date on all the latest ದೇಶ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp