ಗೃಹಬಂಧನದಲ್ಲಿ ಇರಿಸಲಾಗಿದೆ ಎಂದ ಮೆಹಬೂಬಾ ಮುಫ್ತಿ; ಯಾವುದೇ ನಿರ್ಬಂಧಗಳಿಲ್ಲ ಎಂದ ಪೊಲೀಸರು
ತನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬುಧವಾರ ಆರೋಪಿಸಿದ್ದಾರೆ. ಆದರೆ, ಪೊಲೀಸರು ಆಕೆಯ ಆರೋಪಗಳನ್ನು ನಿರಾಕರಿಸಿದ್ದು, ಆಕೆಯ ಚಲನೆಗೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ ಎಂದು ಹೇಳಿದ್ದಾರೆ.
Published: 05th October 2022 01:08 PM | Last Updated: 05th October 2022 01:11 PM | A+A A-

ಮೆಹಬೂಬಾ ಮುಫ್ತಿ
ಶ್ರೀನಗರ: ತನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬುಧವಾರ ಆರೋಪಿಸಿದ್ದಾರೆ. ಆದರೆ, ಪೊಲೀಸರು ಆಕೆಯ ಆರೋಪಗಳನ್ನು ನಿರಾಕರಿಸಿದ್ದು, ಆಕೆಯ ಚಲನೆಗೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ ಎಂದು ಹೇಳಿದ್ದಾರೆ.
'ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದಲ್ಲಿ ಸಹಜತೆಯಿಂದಲೇ ಡೋಲುಗಳನ್ನು ಬಾರಿಸುತ್ತಿರುವಾಗ, ಕೆಲಸಗಾರೊಬ್ಬರ ಮದುವೆಗಾಗಿ ಪಟ್ಟಾನ್ಗೆ ಭೇಟಿ ನೀಡಲು ಬಯಸಿದ್ದಕ್ಕಾಗಿ ನಾನು ಗೃಹಬಂಧನದಲ್ಲಿದ್ದೇನೆ. ಮಾಜಿ ಸಿಎಂನ ಮೂಲಭೂತ ಹಕ್ಕುಗಳನ್ನು ಅಷ್ಟು ಸುಲಭವಾಗಿ ಅಮಾನತುಗೊಳಿಸಿದರೆ, ಯಾರೊಬ್ಬರೂ ಈ ದುರದೃಷ್ಟವನ್ನು ಊಹಿಸಲು ಸಹ ಸಾಧ್ಯವಿಲ್ಲ' ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
I was informed last night by SP Baramulla @bhatray that I wouldn’t be allowed to travel to Pattan. Today @JmuKmrPolice have themselves locked my gates from inside & are now lying through their teeth. Sad that law enforcement agencies are brazenly trying to cover up their tracks. https://t.co/1giIjfy0eE
— Mehbooba Mufti (@MehboobaMufti) October 5, 2022
2019ರ ಆಗಸ್ಟ್ 5 ರಂದು ಆರ್ಟಿಕಲ್ 370 ರದ್ದತಿಯ ನಂತರ ಬಂಧಿಸಲಾದ ಮತ್ತು ಕಟ್ಟುನಿಟ್ಟಾದ ಪಿಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾದ ಮೂವರು ಮಾಜಿ ಮುಖ್ಯಮಂತ್ರಿಗಳು ಮತ್ತು ಮುಖ್ಯವಾಹಿನಿಯ ನಾಯಕರಲ್ಲಿ ಮೆಹಬೂಬಾ ಕೂಡ ಸೇರಿದ್ದಾರೆ. ನಂತರ ಅವರನ್ನು ಅಕ್ಟೋಬರ್ 2020 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅವರ ಬಿಡುಗಡೆಯ ನಂತರ, ಅವರನ್ನು ಕೆಲವು ಸಂದರ್ಭಗಳಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: 'ಗೃಹ ಬಂಧನದಲ್ಲಿಡಲಾಗಿದೆ': ಮೆಹಬೂಬಾ ಮುಫ್ತಿ ಆರೋಪ, ಮನೆ ಗೇಟ್ಗೆ ಬೀಗ ಹಾಕಿರುವ ಫೋಟೊ ಟ್ವೀಟ್
ಆದಾಗ್ಯೂ, ಉತ್ತರ ಕಾಶ್ಮೀರದ ಪಟ್ಟಾನ್ಗೆ ಪ್ರಯಾಣಿಸಲು ಅನುಮತಿ ನಿರಾಕರಿಸಲಾಗಿದೆ ಮತ್ತು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಮೆಹಬೂಬಾ ಅವರ ಆರೋಪವನ್ನು ಪೊಲೀಸರು ನಿರಾಕರಿಸಿದರು.
ಮಧ್ಯಾಹ್ನ 1 ಗಂಟೆಗೆ ಪಟ್ಟಾನ್ಗೆ ಪ್ರಯಾಣ ಬೆಳೆಸುವುದಾಗಿ ನಮಗೆ ತಿಳಿಸಲಾಗಿದೆ. ಆದರೆ ಪಟ್ಟಾನ್ಗೆ ಪ್ರಯಾಣಿಸಲು ಯಾವುದೇ ರೀತಿಯ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅವರು ಟ್ವೀಟ್ ಮಾಡಿದ ಚಿತ್ರವು ಬಂಗ್ಲೆಯಲ್ಲಿ ವಾಸಿಸುವ ನಿವಾಸಿಗಳೇ ಸ್ವಂತ ಬೀಗವನ್ನು ಹೊಂದಿರುವ ಗೇಟ್ನ ಒಳಭಾಗವಾಗಿದೆ. ಯಾವುದೇ ಬೀಗ ಅಥವಾ ಯಾವುದೇ ನಿರ್ಬಂಧಗಳಿಲ್ಲ. ಅವರು ಪ್ರಯಾಣಿಸಲು ಸ್ವತಂತ್ರರು" ಎಂದು ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಮೆಹಬೂಬಾ ನಿವಾಸದ ಮುಖ್ಯ ದ್ವಾರದ ಚಿತ್ರಗಳನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಮೆಹಬೂಬಾ ಅವರ ನಿವಾಸದ ಮುಖ್ಯ ದ್ವಾರದಲ್ಲಿ ಯಾವುದೇ ಶಸ್ತ್ರಸಜ್ಜಿತ ವಾಹನಗಳನ್ನು ಇರಿಸಲಾಗಿಲ್ಲ.