ತ್ರಿಶೂರ್: ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಭಾನುವಾರ ತ್ರಿಶೂರ್ನಿಂದ ವೆಲಂಕಣಿ ಚರ್ಚ್ಗೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಮಗು ಸೇರಿದಂತೆ ನಾಲ್ವರು ಯಾತ್ರಿಕರು ಸಾವಿಗೀಡಾಗಿದ್ದಾರೆ.
ಮೂಲಗಳ ಪ್ರಕಾರ, ಶನಿವಾರ ಸಂಜೆ 7 ಗಂಟೆಗೆ ತ್ರಿಶೂರ್ನ ಒಲ್ಲೂರ್ನಿಂದ ಪ್ರಯಾಣ ಆರಂಭಿಸಿದ ಬಸ್ನಲ್ಲಿ ಮಕ್ಕಳು ಸೇರಿದಂತೆ 51 ಯಾತ್ರಾರ್ಥಿಗಳ ತಂಡವಿತ್ತು. ಅವರು ಪ್ರಸಿದ್ಧ ವೆಲಂಕಣಿ ಚರ್ಚ್ನಲ್ಲಿ ಪಾಮ್ ಸಂಡೆ ಪ್ರಾರ್ಥನೆಯಲ್ಲಿ ಭಾಗವಹಿಸಲು ಯೋಜಿಸಿದ್ದರು. ವರದಿಗಳ ಪ್ರಕಾರ, ಅಪಘಾತದಲ್ಲಿ ನಲವತ್ತು ಜನರು ಗಾಯಗೊಂಡಿದ್ದಾರೆ.
ಮೃತ ನಾಲ್ವರಲ್ಲಿ ಇಬ್ಬರನ್ನು ಗುರುತಿಸಲಾಗಿದ್ದು, ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕೆವಿ ಟ್ರಾವೆಲ್ಸ್ ಬಸ್ ಚಾಲಕ ನಿದ್ದೆಗೆ ಜಾರಿದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ.
ಬಸ್ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತ್ರಿಶೂರ್ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
Advertisement