ವೇಗದ ಚಾಲನೆಗೆ ಇಬ್ಬರ ಸಾವು: ಕೇರಳ ಸಂಸದನ ಪುತ್ರನ ಬಂಧನ

ವೇಗದ ಚಾಲನೆಯಲ್ಲಿ ಇಬ್ಬರ ಸವಿಗೆ ಕಾರಣನಾಗಿದ್ದ ಕೇರಳ ಸಂಸದನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ತಿರುವನಂತಪುರಂ: ವೇಗದ ಚಾಲನೆಯಲ್ಲಿ ಇಬ್ಬರ ಸವಿಗೆ ಕಾರಣನಾಗಿದ್ದ ಕೇರಳ ಸಂಸದನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಕಾಂಗ್ರೆಸ್-ಎಂ ನಾಯಕ ಹಾಗೂ ರಾಜ್ಯಸಭಾ ಸಂಸದ ಜೋಸ್ ಕೆ ಮಣಿ ಅವರ 19 ವರ್ಷದ ಪುತ್ರ ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದು, ಮಣಿಮಲದಲ್ಲಿ ಅತಿ ವೇಗದ ಚಾಲನೆಯಿಂದಾಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು.
  
ಪೊಲೀಸರ ಪ್ರಕಾರ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ವಾಹನವನ್ನು ಮಣಿಮಾಲಾ-ಮುವಾಟ್ಟುಪುಳ ರಸ್ತೆಯಲ್ಲಿ ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದಾಗ ಏಕಾ ಏಕಿ ಬ್ರೇಕ್ ಹಾಕಿದ ಪರಿಣಾಮ, ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಇಬ್ಬರು ಸವಾರರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸವಾರರು ಸಾವನ್ನಪ್ಪಿದ್ದಾರೆ. ಬಂಧಿತ ವ್ಯಕ್ತಿಯನ್ನು ಬೇಲ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com