ಅಸಾದುದ್ದೀನ್ ಓವೈಸಿ
ದೇಶ
2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಅಸಾದುದ್ದೀನ್ ಓವೈಸಿ ಭವಿಷ್ಯ
ಉತ್ತರ ಪ್ರದೇಶ ಸರ್ಕಾರ ಬುಲ್ಡೋಜರ್ನಿಂದ ಆಡಳಿತ ನಡೆಸುತ್ತಿದೆಯೇ ಹೊರತು ಸಂವಿಧಾನಾತ್ಮಕವಾಗಿ ಅಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಗುರುವಾರ ಆರೋಪಿಸಿದ್ದಾರೆ.
ಹೈದರಾಬಾದ್: ಉತ್ತರ ಪ್ರದೇಶ ಸರ್ಕಾರ ಬುಲ್ಡೋಜರ್ನಿಂದ ಆಡಳಿತ ನಡೆಸುತ್ತಿದೆಯೇ ಹೊರತು ಸಂವಿಧಾನಾತ್ಮಕವಾಗಿ ಅಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಗುರುವಾರ ಆರೋಪಿಸಿದ್ದಾರೆ.
"ಯುಪಿಯಲ್ಲಿ 'ಬುಲ್ಡೋಜರ್ ರಾಜಕೀಯ' ಮಾಡುತ್ತಿರುವವರು ತಾಯಿ-ಮಗಳ ಜೀವವನ್ನು ತೆಗೆದುಕೊಂಡಿದ್ದಾರೆ, ಅವರು ಬುಲ್ಡೋಜರ್ನಿಂದ ಸರ್ಕಾರವನ್ನು ನಡೆಸಲು ಬಯಸುತ್ತಾರೆ, ಸಂವಿಧಾನವಾತ್ಮಕವಲ್ಲ. ಇಷ್ಟೆಲ್ಲ ಮಾಡುವುದರಿಂದ ಅವರು ರಾಜಕೀಯವಾಗಿ ಏನನ್ನೂ ಪಡೆಯುವುದಿಲ್ಲ ಎಂದುತಿಳಿಸಿದ್ದಾರೆ.
ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರ ತಾಜ್ ಮಹಲ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಅವರು, "ತೆಲಂಗಾಣ ವಿಧಾನಸಭೆಯಲ್ಲಿ ಬಿಜೆಪಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ