ಹಿಂದೂಸ್ಥಾನ ಹಿಂದೂಸ್ಥಾನವಾಗಿ ಉಳಿಯಬೇಕು, ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೆ ತೊಂದರೆಯಿಲ್ಲ, ಆದರೆ...ಮೋಹನ್ ಭಾಗವತ್

ಹಿಂದೂಸ್ಥಾನವು ಹಿಂದೂಸ್ಥಾನವಾಗಿಯೇ ಉಳಿಯಬೇಕು. ಇಂದು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೆ ಯಾವುದೇ ಹಾನಿ ಇಲ್ಲ. ಇಸ್ಲಾಂ ಧರ್ಮ ಭಯ ಪಡಬೇಕಾಗಿಲ್ಲ.
ಮೋಹನ್ ಭಾಗವತ್
ಮೋಹನ್ ಭಾಗವತ್
Updated on

ನವದೆಹಲಿ: ಹಿಂದೂಸ್ಥಾನವು ಹಿಂದೂಸ್ಥಾನವಾಗಿಯೇ ಉಳಿಯಬೇಕು. ಇಂದು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೆ ಯಾವುದೇ ಹಾನಿ ಇಲ್ಲ. ಇಸ್ಲಾಂ ಧರ್ಮ ಭಯ ಪಡಬೇಕಾಗಿಲ್ಲ. ಆದರೆ ಅದೇ ಸಮಯದಲ್ಲಿ, ಮುಸ್ಲಿಮರು ತಮ್ಮ ಅಬ್ಬರದ ವಾಕ್ಚಾತುರ್ಯವನ್ನು ತ್ಯಜಿಸಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಪಾಂಚಜನ್ಯ ಮತ್ತು ಆರ್ಗನೈಸರ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಎಲ್ ಜಿಬಿಟಿ ಸಮುದಾಯದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕೂಡ ತಮ್ಮದೇ ಆದ ಖಾಸಗಿ ಅವಕಾಶ ಹೊಂದಿರಬೇಕು. ಸಂಘವು ಈ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ಮಾನವರು ಇರುವವರೆಗೂ ಇಂತಹ ವೈವಿಧ್ಯತೆ ಹೊಂದಿರುವ ಜನರು ಇರುತ್ತಾರೆ,  ಇದು ಜೈವಿಕ ಜೀವನ ವಿಧಾನವಾಗಿದೆ. ಅವರು ತಮ್ಮದೇ ಆದ ಖಾಸಗಿ ಅವಕಾಶವನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೆ. ಅವರು ಕೂಡ ಸಮಾಜ ಭಾಗವಾಗಿದ್ದಾರೆ ಎಂದು ಭಾವಿಸುತ್ತೇವೆ. ಇದು ತುಂಬಾ ಸರಳವಾದ ಸಮಸ್ಯೆಯಾಗಿದೆ, ಇದನ್ನು ಪರಿಹರಿಸಲು ಮಾಡುವ ಎಲ್ಲಾ ಪ್ರಯತ್ನಗಳು ವ್ಯರ್ಥ ಎಂದಿದ್ದಾರೆ.

1,000 ವರ್ಷಗಳಿಂದ ಯುದ್ಧದಲ್ಲಿರುವ ಸಮಾಜದಲ್ಲಿನ ಜಾಗೃತಿಯಿಂದಾಗಿ ಪ್ರಪಂಚದಾದ್ಯಂತ ಇರುವ ಹಿಂದೂಗಳಲ್ಲಿ ಹೊಸ ಆಕ್ರಮಣಶೀಲತೆ ಕಂಡು ಬಂದಿದೆ,  ಈ ಹೋರಾಟವು ವಿದೇಶಿ ಆಕ್ರಮಣಗಳು, ವಿದೇಶಿ ಪ್ರಭಾವಗಳು ಮತ್ತು ವಿದೇಶಿ ಪಿತೂರಿಗಳ ವಿರುದ್ಧ ನಡೆಯುತ್ತಿದೆ. ಈ ಕಾರಣಕ್ಕೆ ಸಂಘವು ತನ್ನ ಬೆಂಬಲವನ್ನು ನೀಡಿದೆ ಎಂದರು. ಅದರ ಬಗ್ಗೆ ಮಾತನಾಡಿದವರು ಹಲವರಿದ್ದಾರೆ,  ಇವೆಲ್ಲವುಗಳಿಂದಾಗಿ ಹಿಂದೂ ಸಮಾಜವು ಜಾಗೃತಗೊಂಡಿದೆ. ಯುದ್ಧದಲ್ಲಿರುವವರು ಆಕ್ರಮಣಕಾರಿಯಾಗುವುದು ಸಹಜ," ಭಾಗವತ್ ಹೇಳಿದರು.

"ಹಿಂದೂ ನಮ್ಮ ಗುರುತು, ನಮ್ಮ ರಾಷ್ಟ್ರೀಯತೆ, ನಮ್ಮ ನಾಗರಿಕತೆಯ ಲಕ್ಷಣ, ಎಲ್ಲರನ್ನೂ ನಮ್ಮವರೆಂದು ಪರಿಗಣಿಸುತ್ತದೆ. ಅದು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತದೆ.  ನನ್ನದು ಮಾತ್ರ ನಿಜ, ನಿಮ್ಮದು ಸುಳ್ಳು. ನೀವು ನಿಮ್ಮ ಸ್ಥಳದಲ್ಲಿಯೇ ಇದ್ದೀರಿ, ನಾನು ಸರಿ ನನ್ನದು ಸರಿ ಎಂದು ಹೇಳುವುದಿಲ್ಲ,  ನಾವು ಒಟ್ಟಾಗಿ ಸಾಗೋಣ,  ಇದು ಹಿಂದುತ್ವ ಮೋಹನ್ ಭಾಗವತ್ ಹೇಳಿದರು.

ಸರಳ ಸತ್ಯ ಇದು, ಹಿಂದೂಸ್ಥಾನ ಹಿಂದೂಸ್ಥಾನವಾಗಿ ಉಳಿಯಬೇಕು. ಇಂದು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೆ ಯಾವುದೇ ಹಾನಿ ಇಲ್ಲ... ಇಸ್ಲಾಂ ಧರ್ಮ ಭಯಪಡುವ ಅಗತ್ಯವಿಲ್ಲ. ಆದರೆ ಅದೇ ಸಮಯದಲ್ಲಿ, ಮುಸ್ಲಿಮರು ತಮ್ಮ ಶ್ರೇಷ್ಠತೆಯ ಅಬ್ಬರದ ವಾಕ್ಚಾತುರ್ಯವನ್ನು ತ್ಯಜಿಸಬೇಕು. ನಾವು ಉತ್ಕೃಷ್ಟ ಜನಾಂಗದವರು, ನಾವು ಒಮ್ಮೆ ಈ ಭೂಮಿಯನ್ನು ಆಳಿದ್ದೇವೆ , ಅದನ್ನು ಮತ್ತೊಮ್ಮೆ ಆಳುತ್ತೇವೆ. ನಮ್ಮ ದಾರಿ ಮಾತ್ರ ಸರಿ, ಉಳಿದವರೆಲ್ಲರೂ ತಪ್ಪು, ನಾವು ವಿಭಿನ್ನವಾಗಿದ್ದೇವೆ, ಆದ್ದರಿಂದ ನಾವು ಹಾಗೆ ಮುಂದುವರಿಯುತ್ತೇವೆ. ನಾವು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದನ್ನು ಮುಸ್ಲಿಮರು ತ್ಯಜಿಸಬೇಕು. ವಾಸ್ತವವಾಗಿ, ಇಲ್ಲಿ ವಾಸಿಸುವ ಎಲ್ಲರೂ -- ಹಿಂದೂ ಅಥವಾ ಕಮ್ಯುನಿಸ್ಟ್ -- ಈ ತರ್ಕವನ್ನು ಬಿಟ್ಟುಬಿಡಬೇಕು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com