ಇಂಡಿಯಾ ಎಂಬುದು, ವಸಾಹತುಶಾಹಿ ಗುಲಾಮಗಿರಿ ಸಂಕೇತ; ಭಾರತಕ್ಕೆ ಆ ಹೆಸರು ಬೇಡ: ಬಿಜೆಪಿ ಸಂಸದ

ಭಾರತ ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ, ಅದು ವಸಾಹತುಶಾಹಿ ಗುಲಾಮಗಿರಿ ಸಂಕೇತ, ಹೀಗಾಗಿ  ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಆಗ್ರಹಿಸಿದ್ದಾರೆ.
ನರೇಶ್ ಬನ್ಸಾಲ್
ನರೇಶ್ ಬನ್ಸಾಲ್
Updated on

ದೆಹಲಿ: ಭಾರತ ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ, ಅದು ವಸಾಹತುಶಾಹಿ ಗುಲಾಮಗಿರಿ ಸಂಕೇತ, ಹೀಗಾಗಿ  ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಆಗ್ರಹಿಸಿದ್ದಾರೆ.

ಶುಕ್ರವಾರ ರಾಜ್ಯಸಭೆ ಚರ್ಚೆಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಎಂಬುದು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಪ್ರಖರತೆ ಪಡೆದುಕೊಂಡು ಹೆಸರಾಗಿದೆ. ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಸಹಸ್ರಾರು ವರ್ಷಗಳಿಂದ ಇದೆ. ಇಂಡಿಯಾವನ್ನು ಅಧಿಕೃತವಾಗಿ ಭಾರತ ಎಂದು ಹೆಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನರೇಶ್‌ ಬನ್ಸಾಲ್ ಅವರು ಉತ್ತರಾಖಂಡ ರಾಜ್ಯದಿಂದ ರಾಜ್ಯಸಭೆ ಸಂಸದರಾಗಿದ್ದು, ಅಲ್ಲಿನ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಇಂಡಿಯಾ ಎಂಬ ಹೆಸರು ಗುಲಾಮಗಿರಿಯ ಸಂಕೇತವೇ ಹೊರತು ಮತ್ತೇನೂ ಎಲ್ಲ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂಡಿಯಾವನ್ನು ತೆಗೆದುಹಾಕಿ ಭಾರತ ಎಂದು ಪುನರ್‌ನಾಮಕರಣ ಮಾಡುವುದು ಮಹತ್ವದ ಮೈಲುಗಲ್ಲಾಗುತ್ತದೆ. ನಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ’ ಎಂದು ಬನ್ಸಾಲ್ ಹೇಳಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com