12 ದಂಗೆಕೋರರ ಬಿಡುಗಡೆಗೆ ಮಹಿಳಾ ಪಡೆಗಳ ನೇತೃತ್ವದಲ್ಲಿದ್ದ 1500 ಜನರ ಗುಂಪು ಒತ್ತಾಯ 

ಹಿಂಸಾಚಾರ ಪೀಡಿತ ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟ ನಿಷೇಧಿತ ಬಂಡುಕೋರರ ಗುಂಪಾದ ಕೆವೈಕೆಎಲ್‌ನ 12 ಮಂದಿಯನ್ನು ಬಿಡುಗಡೆ ಮಾಡುವಂತೆ ಮಹಿಳೆಯರ ನೇತೃತ್ವದ 1,200 ರಿಂದ 1,500 ಜನರ ಗುಂಪು ಒತ್ತಾಯಿಸಿದೆ ಎಂದು ಸೇನೆ ಭಾನುವಾರ ತಿಳಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟ ನಿಷೇಧಿತ ಬಂಡುಕೋರರ ಗುಂಪಾದ ಕೆವೈಕೆಎಲ್‌ನ 12 ಮಂದಿಯನ್ನು ಬಿಡುಗಡೆ ಮಾಡುವಂತೆ ಮಹಿಳೆಯರ ನೇತೃತ್ವದ 1,200 ರಿಂದ 1,500 ಜನರ ಗುಂಪು ಒತ್ತಾಯಿಸಿದೆ ಎಂದು ಸೇನೆ ಭಾನುವಾರ ತಿಳಿಸಿದೆ.

12 ದಂಗೆಕೋರರಲ್ಲಿ ಸ್ವಯಂ-ಘೋಷಿತ ಲೆಫ್ಟಿನೆಂಟ್ ಕರ್ನಲ್ ಮೊಯಿರಾಂಗ್ಥೆಮ್ ತುಂಬಾ ಅಲಿಯಾಸ್ ಉತ್ತಮ್ ಸೇರಿದ್ದಾರೆ. ಆತ 2015ರಲ್ಲಿ 6 ಡೋಗ್ರಾ ರೆಜಿಮೆಂಟ್‌ ಮೇಲೆ ನಡೆಸಿದ ಹೊಂಚುದಾಳಿಯ 'ಮಾಸ್ಟರ್ ಮೈಂಡ್' ಎಂದು ಸೇನೆ ಹೇಳಿದೆ.

ವಿಶೇಷ ಗುಪ್ತಚರ ಮಾಹಿತಿ ಆಧಾರದ ಮೇಲೆ ಸೇನೆಯು ಇಂಫಾಲ್ ಪೂರ್ವ ಜಿಲ್ಲೆಯ ಇಥಮ್ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ 12 ಸಿಬ್ಬಂದಿಗಳನ್ನು ಬಂಧಿಸಿತು. ಮಹಿಳೆಯರು ಮತ್ತು ಸ್ಥಳೀಯ ಮುಖಂಡರ ನೇತೃತ್ವದ 1,200- 1,500 ಜನರ ಗುಂಪು ತಕ್ಷಣವೇ ಈ ಪ್ರದೇಶವನ್ನು ಸುತ್ತುವರೆದಿದೆ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರಿಯುವುದನ್ನು ತಡೆಯಿತು.

'ಕಾರ್ಯಾಚರಣೆಯನ್ನು ಮುಂದುವರಿಸಲು ಭದ್ರತಾ ಪಡೆಗಳು ಮಾಡಿದ ಪುನರಾವರ್ತಿತ ಮನವಿಗಳು ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡಲಿಲ್ಲ. ಮಹಿಳೆಯರ ನೇತೃತ್ವದ ದೊಡ್ಡ ಜನಸಮೂಹದ ಸೂಕ್ಷ್ಮತೆ ಮತ್ತು ಅಂತಹ ಕ್ರಮದಿಂದ ಸಂಭವನೀಯ ಸಾವುನೋವುಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ 12 ಕಾರ್ಯಕರ್ತರನ್ನು ಸ್ಥಳೀಯ ನಾಯಕರಿಗೆ ಹಸ್ತಾಂತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದಂಗೆಕೋರರಿಂದ ವಶಪಡಿಸಿಕೊಳ್ಳಲಾಗಿದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಗುಂಪು ಆ ಪ್ರದೇಶವನ್ನು ತೊರೆದವು' ಎಂದು ಭಾನುವಾರ ಬೆಳಿಗ್ಗೆ ಸೇನೆಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

'ಶಾಂತಿ ಮತ್ತು ಸ್ಥಿರತೆಯನ್ನು ತರಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಭದ್ರತಾ ಪಡೆಗಳಿಗೆ ಸಹಾಯ ಮಾಡುವಂತೆ ಭಾರತೀಯ ಸೇನೆಯು ಮಣಿಪುರದ ಜನರಿಗೆ ಮನವಿ ಮಾಡುತ್ತದೆ' ಎಂದು ಹೇಳಿಕೆ ತಿಳಿಸಿದೆ.

ಕಾಂಗ್‌ಪೋಕ್ಪಿ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಗಡಿಯ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯು ಈ ಜನಸಮೂಹದ ಭಾಗವಾಗಿದ್ದ ಮಹಿಳೆಯರ ದೊಡ್ಡ ಗುಂಪನ್ನು ತಡೆದಿದೆ ಎಂದು ಸೇನೆ ಶುಕ್ರವಾರ ತಿಳಿಸಿದೆ. ಅಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಎರಡು ಗ್ರಾಮಗಳಲ್ಲಿ ಗುಂಡಿನ ದಾಳಿ ನಡೆಸಿದರು. ಇಂತಹ ಮಹಿಳೆಯರು ಈ ಹಿಂದೆ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಸೈನಿಕರ ಚಲನೆಯನ್ನು ತಡೆಯಲು ರಸ್ತೆಗಳನ್ನು ನಿರ್ಬಂಧಿಸಿದ್ದರು.

ಹಿಂಸಾಚಾರ ಪ್ರಾರಂಭವಾದ ಮೇ 3 ರಿಂದ ಮಣಿಪುರದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಅಂದಿನಿಂದ 115 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಶಾಂತಿ ಸ್ಥಾಪನೆಗಾಗಿ ಮನವಿ ಮಾಡಿದರೂ, ಹಿಂಸಾಚಾರದ ಘಟನೆಗಳು ಮುಂದುವರಿದಿದ್ದರಿಂದ ಸೇನೆ ಸೇರಿದಂತೆ ಭದ್ರತಾ ಪಡೆಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com