ಉದ್ಧವ್ ಠಾಕ್ರೆಗೆ ತೀವ್ರ ಹಿನ್ನಡೆ; ಮಹಾ ಸಿಎಂ ಶಿಂಧೆ ಬಣ ಸೇರಿದ ಮಾಜಿ ಸಚಿವ ದೀಪಕ್ ಸಾವಂತ್

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಮಾಜಿ ಆರೋಗ್ಯ ಸಚಿವ ದೀಪಕ್ ಸಾವಂತ್ ಅವರು ಬುಧವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದಾರೆ.
ಶಿಂಧೆ ಬಣ ಸೇರಿದ ಮಾಜಿ ಸಚಿವ ದೀಪಕ್ ಸಾವಂತ್
ಶಿಂಧೆ ಬಣ ಸೇರಿದ ಮಾಜಿ ಸಚಿವ ದೀಪಕ್ ಸಾವಂತ್
Updated on

ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಮಾಜಿ ಆರೋಗ್ಯ ಸಚಿವ ದೀಪಕ್ ಸಾವಂತ್ ಅವರು ಬುಧವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದಾರೆ.

ಮುಖ್ಯಮಂತ್ರಿ ಶಿಂಧೆ ಸಮ್ಮುಖದಲ್ಲಿ ಸಾವಂತ್ ಶಿವಸೇನೆಗೆ ಸೇರ್ಪಡೆಗೊಂಡರು.

ಸಾವಂತ್ ಅವರು ದೇವೇಂದ್ರ ಫಡನ್ವಿಸ್ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರದಲ್ಲಿ 2014 ರಿಂದ 2018 ರವರೆಗೆ ಆರೋಗ್ಯ ಸಚಿವರಾಗಿದ್ದರು.

ನಂತರ ಸಾವಂತ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು ಮತ್ತು 2018 ರಲ್ಲಿ ಉದ್ಧವ್ ಠಾಕ್ರೆ ಅವರು ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com