ಆಗಸ್ಟ್ 15 ಗಡುವಿನೊಳಗೆ ದೇಶಾದ್ಯಂತ 75 ವಂದೇ ಭಾರತ್ ರೈಲುಗಳ ಸಂಚಾರ ಕಷ್ಟಸಾಧ್ಯ!

ಶದ ವಿವಿಧ ಮಾರ್ಗಗಳಲ್ಲಿ ಈ ವರ್ಷದ ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳ ಸಂಚಾರ ರೈಲ್ವೆಗೆ ಕಷ್ಟಸಾಧ್ಯ ಎಂಬಂತೆ ತೋರುತ್ತಿದೆ. ಗಡುವು ಮುಗಿಯಲು ಕೇವಲ 3 ತಿಂಗಳುಗಳು ಉಳಿದಿದ್ದು, ಇದುವರೆಗೆ ಕೇವಲ 17 ವಂದೇ ಭಾರತ್ ರೈಲು ಓಡಿಸುವಲ್ಲಿ ರೈಲ್ವೆ ಯಶಸ್ವಿಯಾಗಿದೆ.
ಪ್ರಧಾನಿ ಮೋದಿ ಇತ್ತೀಚಿಗೆ ಕೇರಳದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು
ಪ್ರಧಾನಿ ಮೋದಿ ಇತ್ತೀಚಿಗೆ ಕೇರಳದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು
Updated on

ನವದೆಹಲಿ: ದೇಶದ ವಿವಿಧ ಮಾರ್ಗಗಳಲ್ಲಿ ಈ ವರ್ಷದ ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳ ಸಂಚಾರ ರೈಲ್ವೆಗೆ ಕಷ್ಟಸಾಧ್ಯ ಎಂಬಂತೆ ತೋರುತ್ತಿದೆ. ಗಡುವು ಮುಗಿಯಲು ಕೇವಲ 3 ತಿಂಗಳುಗಳು ಉಳಿದಿದ್ದು, ಇದುವರೆಗೆ ಕೇವಲ 17 ವಂದೇ ಭಾರತ್ ರೈಲು ಓಡಿಸುವಲ್ಲಿ ರೈಲ್ವೆ ಯಶಸ್ವಿಯಾಗಿದೆ.

ತಜ್ಞರ ಪ್ರಕಾರ, ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿ ತಲುಪಲು ರೈಲು ಉತ್ಪಾದನೆಯನ್ನು ತ್ವರಿತಗೊಳಿಸಬೇಕು ಮತ್ತು ಪ್ರತಿ ವಾರ ಕನಿಷ್ಠ ಮೂರು-ನಾಲ್ಕು ವಂದೇ ಭಾರತ್ ರೈಲುಗಳನ್ನು ಹೊರತರಬೇಕು. ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಓಡಿಸುವುದು ಸ್ವಲ್ಪ ಕಷ್ಟಕರವಾಗಿದೆ. ಗುರಿ ತಲುಪಲು, ರೈಲ್ವೆಯು ಪ್ರತಿ ವಾರ ಕನಿಷ್ಠ 3-4 ವಂದೇ ಭಾರತ್ ರೈಲುಗಳನ್ನು ಹೊರತರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ರೈಲ್ವೆ ಅದರ ಮೇಲೆ ಕೆಲಸ ಮಾಡಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೈಲ್ವೇ ಸಚಿವಾಲಯದ ಮೂಲಗಳ ಪ್ರಕಾರ, ಐಸಿಎಫ್ ಸೇರಿದಂತೆ ಉತ್ಪಾದನಾ ಘಟಕಗಳಿಂದ ಈ ವರ್ಷದ ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿಯನ್ನು ತಲುಪಲು ಸಾಕಾಗುವುದಿಲ್ಲ. ಆಗಸ್ಟ್ 15 ರೊಳಗೆ 30 ವಂದೇ ಭಾರತ್ ರೈಲುಗಳನ್ನು ಓಡಿಸಲು ರೈಲ್ವೆ ಯಶಸ್ವಿಯಾದರೂ ಒಳ್ಳೆಯದು ಎಂದು ಸುಧಾಂಶು ಮಣಿ ತಿಳಿಸಿದರು.

ಹಳಿಗಳ ನವೀಕರಣದ ಪ್ರಸ್ತುತ ಸನ್ನಿವೇಶದಲ್ಲಿ, ರೈಲುಗಳ ತಯಾರಿಕೆಯೊಂದಿಗೆ ಕೆಲಸದ ವೇಗವನ್ನು ಇಟ್ಟುಕೊಳ್ಳುವಂತಿಲ್ಲ. ಹೆಚ್ಚಿನ ರೈಲು ಉತ್ಪಾದನೆ ಮಾಡುವ ಹೆಚ್ಚುವರಿ ಒತ್ತಡವು ಅನಗತ್ಯವಾಗಿ ಇತ್ತೀಚಿನ ರೈಲುಗಳಲ್ಲಿ ವರದಿಯಾಗಿರುವಂತೆ ಗುಣಮಟ್ಟ ಕುಸಿಯುವ ಅಪಾಯವನ್ನು ಒದಗಿಸುತ್ತದೆ ಎಂದು ಸುಧಾಂಶು ಮಣಿ  ಹೇಳಿದ್ದಾರೆ.

ಪುರಿಯಿಂದ ಹೌರಾಕ್ಕೆ 17 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಜೂನ್ ವೇಳೆಗೆ ವಂದೇ ಭಾರತ್ ಎಲ್ಲಾ ರಾಜ್ಯಗಳನ್ನು ತಲುಪಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ಹೇಳಿದ್ದಾರೆ. 

2022 ರ ಕೇಂದ್ರ ಬಜೆಟ್‌ನ ಭಾಗವಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರ 400 ವಂದೇ ಭಾರತ್ ರೈಲುಗಳನ್ನು ತಯಾರಿಸಲಿದೆ ಎಂದು ಘೋಷಿಸಿದ್ದರು.

2019 ರ ಫೆಬ್ರವರಿಯಲ್ಲಿ  ನವದೆಹಲಿ ಮತ್ತು ವಾರಣಾಸಿ ನಡುವೆ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಯಿತು.
54.6 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿಮೀ ವೇಗ ವರ್ಧಕ ಶಕ್ತಿಯನ್ನು ವಂದೇ ಭಾರತ್‌ ರೈಲುಗಳು ಹೊಂದಿವೆ. 120 ಜಿಲ್ಲೆಗಳು ವಂದೇ ಭಾರತ್ ಮಾರ್ಗಗಳನ್ನು ಒಳಗೊಂಡಿವೆ. ಪ್ರಮುಖ ಮಾರ್ಗಗಳಲ್ಲಿ ನವದೆಹಲಿ-ವಾರಣಾಸಿ, ಗಾಂಧಿನಗರ-ಮುಂಬೈ, ಚೆನ್ನೈ-ಮೈಸೂರು, ನಾಗ್ಪುರ-ಬಿಲಾಸ್ಪುರ್, ಹೌರಾ-ಜಲ್ಪೈಗುರಿ ಮತ್ತು ಸಿಕಂದರಾಬಾದ್-ವಿಶಾಖಪಟ್ಟಣಂ ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com