ಸಿ ವೋಟರ್ ಸಮೀಕ್ಷೆ: ಮೋದಿ ಸರ್ಕಾರಕ್ಕೆ 9 ವರ್ಷ; ಹಿಂದುತ್ವ, ರಾಷ್ಟ್ರೀಯತೆಗೆ ಒತ್ತು; ಬಹುತೇಕ ಭಾರತೀಯರ ಅಭಿಪ್ರಾಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 9 ವರ್ಷಗಳ ಆಡಳಿತವು ಬಹುತೇಕ 'ಹಿಂದುತ್ವ' ಮತ್ತು 'ರಾಷ್ಟ್ರೀಯತೆ'ಗೆ ಸಂಬಂಧಿಸಿದೆ ಎಂದು ಪ್ರತಿ ಐದು ಭಾರತೀಯರಲ್ಲಿ ಮೂವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋದಿ ಆಡಳಿತ ಒಂಬತ್ತು ವರ್ಷಗಳನ್ನು ಪೂರೈಸಿದ್ದು, ಭಾರತದಾದ್ಯಂತ CVoter ನಡೆಸಿದ ವಿಶೇಷ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವೆದಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 9 ವರ್ಷಗಳ ಆಡಳಿತವು ಬಹುತೇಕ 'ಹಿಂದುತ್ವ' ಮತ್ತು 'ರಾಷ್ಟ್ರೀಯತೆ'ಗೆ ಸಂಬಂಧಿಸಿದೆ ಎಂದು ಪ್ರತಿ ಐದು ಭಾರತೀಯರಲ್ಲಿ ಮೂವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋದಿ ಆಡಳಿತ ಒಂಬತ್ತು ವರ್ಷಗಳನ್ನು ಪೂರೈಸಿದ್ದು, ಭಾರತದಾದ್ಯಂತ CVoter ನಡೆಸಿದ ವಿಶೇಷ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 282 ಸ್ಥಾನಗಳ ಐತಿಹಾಸಿಕ ಬಹುಮತ ಸಾಧಿಸಿದ ಬಳಿಕ ನರೇಂದ್ರ ಮೋದಿ ಅವರು 2014ರ ಮೇ 26 ರಂದು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2014ರ ಚುನಾವಣಾ ಪ್ರಚಾರದ ಸಮಯದಲ್ಲಿ, ನರೇಂದ್ರ ಮೋದಿ ಅವರು 'ಹಿಂದೂ' ಮತ್ತು ಯಾವುದೇ ಹಿಂಜರಿಕೆಯಿಲ್ಲದೆ 'ರಾಷ್ಟ್ರೀಯತೆ'ಯ ಬಲವಾದ ಪ್ರಜ್ಞೆಯನ್ನು ಪ್ರತಿಪಾದಿಸಿದ ನಾಯಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.

ಮೋದಿಯವರ ಈ ನಡೆಯು ಭಾರತೀಯ ರಾಜಕೀಯದ ಧ್ರುವೀಕರಣಕ್ಕೆ ಕಾರಣವಾಗಿದೆ ಮತ್ತು ಮೋದಿಯವರನ್ನು ಟೀಕಿಸುವ ಅನೇಕ ಟೀಕಾಕಾರರ ಹುಟ್ಟಿಗೆ ಕಾರಣವಾಯಿತು. 

ಮೋದಿ ಮತ್ತು ಅವರ ಆಡಳಿತದ ವೈಖರಿಯು ಭಾರತದಲ್ಲಿನ ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಇತರರಿಂದ ಯಾವುದೇ ಪ್ರಮುಖ ಭಿನ್ನಾಭಿಪ್ರಾಯಗಳನ್ನು ಎದುರಿಸಿಲ್ಲ. 

ಹಿಂದೂ ಧರ್ಮವನ್ನು ಗುರುತಿಸುವ ಅತ್ಯಂತ ಹಳೆಯ ಮತ್ತು ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾದ ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದಾಗಿನಿಂದ ರಾಷ್ಟ್ರೀಯತೆ ಮತ್ತು ಹಿಂದುತ್ವವು ಒಂದಕ್ಕೊಂಡು ಜೊತೆಯಾಗೇ ಸಾಗಿವೆ.

ಈ ವಿಚಾರವಾಗಿ ಬಹುಶಃ ಎನ್‌ಡಿಎ ಮತ್ತು ಯುಪಿಎ ಬೆಂಬಲಿಗರಲ್ಲಿ ಮಾತ್ರ ಪ್ರಮುಖ ಭಿನ್ನಾಭಿಪ್ರಾಯಗಳು ಕೇಳಿಬಂದಿವೆ.

ಶೇ 61ಕ್ಕಿಂತ ಹೆಚ್ಚು ಯುಪಿಎ ಬೆಂಬಲಿಗರು 'ನರೇಂದ್ರ ಮೋದಿ ಆಡಳಿತದ ರಾಜಕೀಯವು ಮುಖ್ಯವಾಗಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಸುತ್ತ ಸುತ್ತುತ್ತದೆ' ಎಂದು ಅಭಿಪ್ರಾಯಪಟ್ಟರೆ, ಸುಮಾರು ಶೇ 52 ರಷ್ಟು ಎನ್‌ಡಿಎ ಬೆಂಬಲಿಗರು ಅದೇ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ಎನ್‌ಡಿಎ ಬೆಂಬಲಿಗರು ಕಲ್ಯಾಣ ಯೋಜನೆಗಳನ್ನು ಕೂಡ ಮೋದಿ ಆಡಳಿತದ ಪ್ರಮುಖ ಕಾರ್ಯಸೂಚಿಯ ಭಾಗವಾಗಿ ಉಲ್ಲೇಖಿಸುತ್ತಾರೆ.

ಅದೇನೇ ಇದ್ದರೂ, ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಯಿತು. ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಬಿರುಸಿನಿಂದ ಪ್ರಾರಂಭವಾಯಿತು. ಕಾಶಿ ವಿಶ್ವನಾಥ ಕಾರಿಡಾರ್ ಪೂರ್ಣಗೊಂಡಿದೆ. ಉಜ್ಜಯಿನಿ ಮಹಾಕಾಲ ದೇವಾಲಯದ ನವೀಕರಣ ಕಾರ್ಯಗಳು ಪೂರ್ಣಗೊಂಡಿವೆ ಮತ್ತು ಹಲವಾರು ಧಾರ್ಮಿಕ ಪ್ರವಾಸೋದ್ಯಮ ಯಾತ್ರೆಗಳನ್ನು ಪ್ರಾರಂಭಿಸಲಾಗಿದೆ.

ಮೋದಿಯವರ ಆಳ್ವಿಕೆಯಲ್ಲಿ, ಪಶ್ಚಿಮ ಏಷ್ಯಾದ ಅನೇಕ ದೇಶಗಳಲ್ಲಿ ಹಿಂದೂ ದೇವಾಲಯಗಳನ್ನು ತೆರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com