22 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಐಎಂಬಿಎಲ್ ಉಲ್ಲಂಘಿಸಿದ ಆರೋಪದ ಮೇಲೆ ರಾಮನಾಥಪುರಂನ ಪಂಬನ್ ಪ್ರದೇಶದಿಂದ ಬಂದ ಎರಡು ದೋಣಿಗಳಲ್ಲಿದ್ದ 22 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಮುಂದಿನ ಕಾನೂನು ಕ್ರಮಗಳಿಗಾಗಿ ಬಂಧಿತ ಮೀನುಗಾರರನ್ನು ಮತ್ತು ಅವರ ವಶಪಡಿಸಿಕೊಂಡ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ರಾಮನಾಥಪುರಂ: ಐಎಂಬಿಎಲ್ ಉಲ್ಲಂಘಿಸಿದ ಆರೋಪದ ಮೇಲೆ ರಾಮನಾಥಪುರಂನ ಪಂಬನ್ ಪ್ರದೇಶದಿಂದ ಬಂದ ಎರಡು ದೋಣಿಗಳಲ್ಲಿದ್ದ 22 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. 

ಮುಂದಿನ ಕಾನೂನು ಕ್ರಮಗಳಿಗಾಗಿ ಬಂಧಿತ ಮೀನುಗಾರರನ್ನು ಮತ್ತು ಅವರ ವಶಪಡಿಸಿಕೊಂಡ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಚಂಡಮಾರುತದ ಎಚ್ಚರಿಕೆಯಿಂದಾಗಿ ಹಲವು ದಿನಗಳ ನಂತರ ಶನಿವಾರ ಮೀನುಗಾರರು ಸಮುದ್ರಕ್ಕೆ ಇಳಿದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ನವೆಂಬರ್ 15ರಂದು ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ದೋಣಿಗಳು ಐಎಂಬಿಎಲ್ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರಿದ್ದ ದೋಣಿಗಳನ್ನು ಅಲ್ಲಿಂದ ಓಡಿಸಿತು. ಆದರೆ, ಅವುಗಳ ಪೈಕಿ ಎರಡು ದೋಣಿಗಳು ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ಮುಂದುವರಿಸಿವೆ ಎಂದು ಆರೋಪಿಸಲಾಗಿದೆ.

ಇದರ ಪರಿಣಾಮವಾಗಿ, ಉತ್ತರ ನೌಕಾ ಕಮಾಂಡ್ ಪಾಯಿಂಟ್ ಪೆಡ್ರೊದ ಲಂಕಾದ ನೀರಿನಲ್ಲಿ ಮೀನುಗಾರಿಗೆ ಮಾಡಿದ ಆರೋಪದ ಮೇಲೆ 22 ಮೀನುಗಾರರನ್ನು ಬಂಧಿಸಿದೆ. ಒಂದು ದೋಣಿ 10 ಜನರನ್ನು ಹೊತ್ತೊಯ್ದರೆ, ಇನ್ನೊಂದು 12 ಜನರನ್ನು ಹೊತ್ತೊಯ್ದಿತ್ತು. ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ಮೀನುಗಾರರನ್ನು ಜಾಫ್ನಾ ಬಂದರಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಮುಂದಿನ ಕ್ರಮಗಳಿಗಾಗಿ ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಯಿತು.

ಈ ವರ್ಷ ದ್ವೀಪ ರಾಷ್ಟ್ರದಿಂದ ಸೆರೆ ಸಿಕ್ಕ ಭಾರತೀಯ ಮೀನುಗಾರರ ಸಂಖ್ಯೆ 196ಕ್ಕೆ ತಲುಪಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೀನುಗಾರರ ಬಿಡುಗಡೆಗೆ ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರ ಸಂಘಗಳು ಒತ್ತಾಯಿಸಿವೆ. 

ಶ್ರೀಲಂಕಾದ ನೌಕಾಪಡೆಯ ಹೇಳಿಕೆ ಪ್ರಕಾರ, ಮೀನುಗಾರರನ್ನು ಕಂಕಸಂತುರೆ ಬಂದರಿಗೆ ಕರೆತರಲಾಗಿದ್ದು, ಅವರನ್ನು ಮೈಲಾಡಿಯ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com