ಹರಿಯಾಣದ ಜನ ಶೀಘ್ರದಲ್ಲೇ ಎಎಪಿ ಉಚಿತ ಯೋಜನೆಗಳ ಲಾಭ ಪಡೆಯುತ್ತಾರೆ: ಖಟ್ಟರ್‌ಗೆ ಅರವಿಂದ ಕೇಜ್ರಿವಾಲ್ ತಿರುಗೇಟು

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹರಿಯಾಣದ ಮುಖ್ಯಮಂತ್ರಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ 'ಉಚಿತ' ಯೋಜನೆಗಳ ಕುರಿತ ಟೀಕೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ. 2024ರಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿದ ಸಿಎಂ ಕೇಜ್ರಿವಾಲ್, ಹರಿಯಾಣ ರಾಜ್ಯದ ಜನರಿಗೆ ಶೀಘ್ರವೇ ಉಚಿತ ಯೋಜನೆಗಳ ಲಾಭ ಸಿಗಲಿದೆ ಎಂದು ಹೇಳಿದ 
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹರಿಯಾಣದ ಮುಖ್ಯಮಂತ್ರಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ 'ಉಚಿತ' ಯೋಜನೆಗಳ ಕುರಿತ ಟೀಕೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

2024ರಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿದ ಸಿಎಂ ಕೇಜ್ರಿವಾಲ್, ಹರಿಯಾಣ ರಾಜ್ಯದ ಜನರಿಗೆ ಶೀಘ್ರವೇ ಉಚಿತ ಯೋಜನೆಗಳ ಲಾಭ ಸಿಗಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಖಟ್ಟರ್ ಸಾಬ್! ನಾವು ದೆಹಲಿಯಲ್ಲಿ ಉಚಿತವಾಗಿ ವಿಶ್ವ ದರ್ಜೆಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ನಾವು ದಿನವಿಡೀ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸುತ್ತೇವೆ. ನಾವು ಈ ಸೌಲಭ್ಯಗಳನ್ನು ಪಂಜಾಬ್‌ನಲ್ಲಿಯೂ ಸಹ ಪ್ರಾರಂಭಿಸಿದ್ದೇವೆ ಮತ್ತು ನಮ್ಮ ಈ ಯೋಜನೆಗಳಿಂದ ಸಾರ್ವಜನಿಕರು ಸಂತೋಷವಾಗಿದ್ದಾರೆ. ಶೀಘ್ರದಲ್ಲೇ, ಹರಿಯಾಣದ ಜನರು ಸಹ ಉಚಿತ ಯೋಜನೆಗಳ ಪ್ರಯೋಜನ ಪಡೆಯುತ್ತಾರೆ' ಎಂದಿದ್ದಾರೆ.

ಇದಕ್ಕೂ ಮುನ್ನ ಶನಿವಾರ ಹರಿಯಾಣದ ಸಿಎಂ ಖಟ್ಟರ್ ಅವರು ಸಿಎಂ ಪರಿವಾರ ಅಂತ್ಯೋದಯ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದು, ಯಾವಾಗಲೂ ‘ಇದನ್ನು ಉಚಿತವಾಗಿ ಪಡೆಯಿರಿ, ಅದನ್ನು ಉಚಿತವಾಗಿ ಪಡೆಯಿರಿ’ ಎಂಬ ಘೋಷಣೆ ಕೂಗುವ ಪಕ್ಷಗಳಿವೆ ಎಂದು ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.

'ಇದನ್ನು ಉಚಿತವಾಗಿ ಪಡೆಯಿರಿ, ಅದನ್ನು ಉಚಿತವಾಗಿ ಪಡೆಯಿರಿ' ಎಂಬ ಘೋಷಣೆಗಳನ್ನು ಎತ್ತುವ ಅನೇಕ ಪಕ್ಷಗಳಿವೆ... ಉಚಿತಗಳ ಅಭ್ಯಾಸವನ್ನು ಬೆಳೆಸುವ ಬದಲು, ದುಡಿಯುವ ವ್ಯಕ್ತಿಯ ಅಗತ್ಯಗಳನ್ನು ಪೂರೈಸುವುದು, ಅವನ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಅವನನ್ನು ಅಭಿವೃದ್ಧಿಪಡಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ' ಎಂದು ಸಿಎಂ ಖಟ್ಟರ್ ಹೇಳಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಬಿಜೆಪಿಯು ಆಮ್ ಆದ್ಮಿ ಪಕ್ಷವು 'ಉಚಿತ'ಗಳನ್ನು ಆಶ್ರಯಿಸಿದೆ ಎಂದು ಆರೋಪಿಸಿತು ಮತ್ತು ನಂತರ 'ರೇವ್ಡಿ ರಾಜಕೀಯ', (ಉಚಿತ ರಾಜಕೀಯ) ದಲ್ಲಿ ತೊಡಗಿದೆ ಎಂದು ದೂರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com