social_icon

ದೇಶದಲ್ಲೇ ಮೊದಲು: ಸಮುದ್ರದಡಿ ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ನಿಲ್ದಾಣ!

ದಿರ್ಘಾವಧಿ ಕಾಯುವಿಕೆ ನಂತರ, ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಬಹುನಿರೀಕ್ಷಿತ ಹೈಸ್ಪೀಡ್ ರೈಲು (ಬುಲೆಟ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ. 

Published: 10th February 2023 03:37 PM  |   Last Updated: 11th February 2023 07:04 PM   |  A+A-


Image used for representational purpose only. (Photo | PTI)

ಬುಲೆಟ್ ರೈಲು (ಸಂಗ್ರಹ ಚಿತ್ರ)

Posted By : Srinivas Rao BV
Source : The New Indian Express

ಮುಂಬೈ: ದಿರ್ಘಾವಧಿ ಕಾಯುವಿಕೆ ನಂತರ, ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಬಹುನಿರೀಕ್ಷಿತ ಹೈಸ್ಪೀಡ್ ರೈಲು (ಬುಲೆಟ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ. 

ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರ್ ನ ಭಾಗವಾಗಿ ಮಹಾರಾಷ್ಟ್ರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಹಾಗೂ ಶಿಲ್ಪಾತ ನಡುವಿನ ಡಬಲ್ ಲೈನ್ ಗಾಗಿ ಟನಲ್ ನಿರ್ಮಾಣ ಕಾಮಗಾರಿಗೆ ಫೆ.10 ರಂದು ಚಾಲನೆ ದೊರೆತಿದೆ.
  
ಒಟ್ಟು 508.17 ಕಿ.ಮೀ ನ ರೈಲು ಮಾರ್ಗದ ಪೈಕಿ 21 ಕಿ.ಮೀ ಟ್ರ್ಯಾಕ್ ನೆಲದಡಿಯಲ್ಲಿ (underground) ನಲ್ಲಿ ನಿರ್ಮಾಣ ವಾಗಲಿದ್ದು, ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ಏಕೈಕ ರೈಲು ಮಾರ್ಗ ಇದಾಗಿದ್ದು ಉಳಿದ ಮಾರ್ಗ ಎತ್ತರದಲ್ಲಿ ಹಾದುಹೋಗಲಿದೆ.
 
ಈ ಟನಲ್ ನಿರ್ಮಾಣವಾಗುವ ಸುತ್ತಮುತ್ತಲ ಪ್ರದೇಶ (ಥಾಣೆ ಕ್ರೀಕ್, ಅಥವಾ ಥಾಣೆ ತೊರೆ)ಯಲ್ಲಿ ಪಕ್ಷಿಧಾಮ ಹಾಗೂ ಮ್ಯಾಂಗ್ರೋವ್ಸ್ ಇರುವುದರಿಂದ ಅವುಗಳ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ರೈಲು ಮಾರ್ಗಕ್ಕೆ ನೈಸರ್ಗಿಕ ಬೆಳಕನ್ನು ಒದಗಿಸುವ ದೃಷ್ಟಿಯಿಂದ ಸ್ಕೈಲೈಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಈ ಯೋಜನೆಯನ್ನು ಸಾಕಾರಗೊಳಿಸುತ್ತಿರುವ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬುಲೆಟ್ ರೈಲು ಯೋಜನೆ ರಾಷ್ಟ್ರೀಯ ಮಹತ್ವದ್ದು: ಭೂಸ್ವಾಧೀನ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್ 

ಈ ಯೋಜನೆಯ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ, ಅದು ಸಮುದ್ರದ ಒಳಭಾಗದಲ್ಲಿ ಹಾದುಹೋಗಲಿರುವ ಟನಲ್ ಗಳು. ಈ ರೀತಿಯ 7 ಟನಲ್ ಗಳು ಬುಲೆಟ್ ರೈಲುಗಳ ಭಾಗವಾಗಿರಲಿದ್ದು, ಟನಲ್ ಬೋರಿಂಗ್ ಯಂತ್ರ (ಟಿಬಿಎಂ) ಹಾಗೂ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನವನ್ನು ಬಳಸಿ ಬಿಕೆಸಿ ಹಾಗೂ ಶಿಲ್ಪಾತ ನಡುವೆ ನಿರ್ಮಾಣವಾಗಲಿದೆ. 

ಈ 7 ಕಿ.ಮೀ ನ ಸಮುದ್ರದ ಸುರಂಗ ದೇಶದಲ್ಲೇ ಮೊದಲ ಸಮುದ್ರದ ಸುರಂಗವಾಗಿರಲಿದೆ ಎಂದು ರೈಲ್ವೆ ಮಾಹಿತಿ ನೀಡಿದೆ. 

ಈ ಟನಲ್ ಭೂಮಿಯ ಮಟ್ಟದಿಂದ 25-65 ಮೀಟರ್ ನಷ್ಟು ಆಳವಾಗಿರಲಿದ್ದು, ಶಿಲ್ಪಾತದ ಬಳಿ ಪಾರ್ಸಿಕ್ ಹಿಲ್ ನಲ್ಲಿ 114 ಮೀಟರ್ ಕೆಳಭಾಗದಲ್ಲಿ ನಿರ್ಮಾಣವಾಗುತ್ತಿರುವ ಟನಲ್ ಅತ್ಯಂತ ಆಳವಾದ ಟನಲ್ ಆಗಿರಲಿದೆ. ಟನಲ್ ನಿರ್ಮಾಣಕ್ಕೆ ಭಾರತ ಅತ್ಯಾಧುನಿಕ, ನ್ಯೂ ಆಸ್ಟ್ರಿಯನ್ ಸುರಂಗ ವಿಧಾನವನ್ನು ಅನುಸರಿಸುತ್ತಿದೆ. 

2022 ರ ಸೆಪ್ಟೆಂಬರ್ 23 ರಂದು ಇದಕ್ಕಾಗಿ ಟೆಂಡರ್ ಕರೆಯಲಾಗಿತ್ತು ಹಾಗೂ ಈ ಯೋಜನೆಗಾಗಿ ಶೇ.98.79 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಯೋಜನೆಯ ಮೇಲೆ ನಿಗಾ ವಹಿಸಿದ್ದಾರೆ.


Stay up to date on all the latest ದೇಶ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • DM YOGISHA

    Nice
    7 months ago reply
flipboard facebook twitter whatsapp