ಹೈದರಾಬಾದ್: 4 ವರ್ಷದ ಬಾಲಕಿಯ ಕತ್ತು ಸೀಳಿದ 'ನಿಷೇಧಿಸಲ್ಪಟ್ಟ' ಚೈನೀಸ್ ಮಾಂಜಾ

ಎಲ್‌ಬಿ ನಗರದಲ್ಲಿ ಶುಕ್ರವಾರ ಗಾಳಿಪಟದ ದಾರ (ನಿಷೇಧಿತ ಚೀನಾ ಮಾಂಜಾ) ಕತ್ತು ಸೀಳಿ ನಾಲ್ಕು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಅವರು ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದರಿಂದ ಬಾಲಕಿಯ ತಂದೆಗೂ ಗಾಯಗಳಾಗಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಹೈದರಾಬಾದ್: ಎಲ್‌ಬಿ ನಗರದಲ್ಲಿ ಶುಕ್ರವಾರ ಗಾಳಿಪಟದ ದಾರ (ನಿಷೇಧಿತ ಚೈನೀಸ್ ಮಾಂಜಾ) ಕತ್ತು ಸೀಳಿ ನಾಲ್ಕು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಅವರು ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದರಿಂದ ಬಾಲಕಿಯ ತಂದೆಗೂ ಗಾಯಗಳಾಗಿವೆ.

ಮೂಲಗಳ ಪ್ರಕಾರ, ವಿನಯ್ ಕುಮಾರ್ ಮತ್ತು ಅವರ ಪುತ್ರಿ ಕೀರ್ತಿ, ವನಸ್ಥಲಿಪುರಂನಿಂದ ಉಪ್ಪಲ್‌ಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ನಾಗೋಲ್ ಮೇಲ್ಸೇತುವೆ ತಲುಪಿದಾಗ ವಿದ್ಯುತ್ ಕಂಬಕ್ಕೆ ಸಿಲುಕಿದ್ದ ಮಾಂಜಾ ದಾರ ಬಾಲಕಿಯ ಕುತ್ತಿಗೆಯನ್ನು ಸೀಳಿದೆ. ಬಾಲಕಿಗೆ ತೀವ್ರ ಗಾಯವಾಗಿದ್ದು, ಆಕೆಯ ತಂದೆಯೂ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಬಳಿಕ ಇತರೆ ಬೈಕ್ ಸವಾರರು ಇಬ್ಬರನ್ನೂ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈಮಧ್ಯೆ, ಹೈದರಾಬಾದ್ ಪೊಲೀಸರು ಎಲ್ಲಾ ರಸ್ತೆಗಳಲ್ಲಿ ಮತ್ತು ಪೂಜಾ ಸ್ಥಳಗಳ ಬಳಿ ಗಾಳಿಪಠ ಹಾರಿಸುವುದನ್ನು ನಿಷೇಧಿಸಿದ್ದಾರೆ. ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಈ ಆದೇಶ ಹೊರಡಿಸಿದ್ದು, ಜನವರಿ 14 ರಿಂದ 16 ರವರೆಗೆ ಜಾರಿಯಲ್ಲಿರುತ್ತವೆ.

ಮಕ್ಕಳು ವಿದ್ಯುತ್ ಕಂಬಗಳು ಅಥವಾ ಕೇಬಲ್‌ಗಳಿಗೆ ಸಿಲುಕಿಕೊಂಡ ಗಾಳಿಪಟಗಳನ್ನು ಪಡೆಯಲು ಪ್ರಯತ್ನಿಸಿದರೆ ವಿದ್ಯುದಾಘಾತಕ್ಕೆ ಸಂಬಂಧಿಸಿದಂತೆ ದೋಷಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಿಪಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪೂರ್ವಾನುಮತಿ ಇಲ್ಲದೆ ಧ್ವನಿವರ್ಧಕಗಳು / ಡಿಜೆಗಳ ಬಳಕೆಯನ್ನು ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ. 'ಧ್ವನಿವರ್ಧಕಗಳಲ್ಲಿ ಯಾವುದೇ ಪ್ರಚೋದನಕಾರಿ ಭಾಷಣಗಳು ಅಥವಾ ಹಾಡುಗಳನ್ನು ಪ್ಲೇ ಮಾಡಬಾರದು. ಇದಲ್ಲದೆ, ಸ್ಪೀಕರ್‌ಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಗಳಿಂದ ಶಬ್ದ ಮಾಲಿನ್ಯದ ಮಟ್ಟವು ಅನುಮತಿಸುವ ಮಿತಿಗಳನ್ನು ಮೀರಬಾರದು' ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com