2 ತಿಂಗಳ ಹಿಂದೆ ಒಬ್ಬಳೆ ಮಗಳ ಕೊಲೆ: ದುಃಖ ಸಹಿಸಲಾಗದೇ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

ಎರಡು ತಿಂಗಳ ಹಿಂದೆ ವೃದ್ಧ ದಂಪತಿಯ ಒಬ್ಬಳೇ ಮಗಳು ಕೊಲೆಯಾಗಿದ್ದಳು. ಇದೀಗ ಆ ದಂಪತಿಯು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬರ್ಗಢ್(ಒಡಿಶಾ): ಎರಡು ತಿಂಗಳ ಹಿಂದೆ ವೃದ್ಧ ದಂಪತಿಯ ಒಬ್ಬಳೇ ಮಗಳು ಕೊಲೆಯಾಗಿದ್ದಳು. ಇದೀಗ ಆ ದಂಪತಿಯು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಮಗಳ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ದಂಪತಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ತನಿಖೆ ಇನ್ನೂ ಮುಂದುವರಿದಿದ್ದು, ಅದು ಪೂರ್ಣಗೊಂಡ ನಂತರವೇ ಸ್ಪಷ್ಟನೆ ನೀಡಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

55 ವರ್ಷದ ರಘು ಭುಯೆ ಮತ್ತು 50 ವರ್ಷದ ಪ್ರತಿಷ್ಠಾ ಭುಯೆ ಒಡಿಶಾದ ಬರ್ಗರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಇವರ ಒಬ್ಬಳೇ ಮಗಳು 24 ವರ್ಷದ ಸಸ್ಮಿತಾ ಕಳೆದ ವರ್ಷ ಡಿಸೆಂಬರ್ 2ರಂದು ಕೊಳವೆಬಾವಿಯಲ್ಲಿ ನೀರು ತರಲು ಹೋಗಿದ್ದ ವೇಳೆ ಅದೇ ಗ್ರಾಮದ ಯುವಕನೊಬ್ಬ ಆಕೆಯನ್ನು ಕೊಂದು ಹಾಕಿದ್ದನು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು ಸದ್ಯ ಜೈಲಿನಲ್ಲಿದ್ದಾನೆ.

ಮಗಳ ಸಾವಿನ ನಂತರ ದಂಪತಿಗಳು ತುಂಬಾ ದುಃಖಿತರಾಗಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದಂಪಿ ಅಪರೂಪವಾಗಿ ಮನೆಯಿಂದ ಹೊರಗೆ ಬರುತ್ತಿದ್ದರು. ಅಲ್ಲದೆ ನೆರೆಹೊರೆಯವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದನು.

ಮಗಳು ಸತ್ತ ನಂತರ ಅಣ್ಣ, ಅತ್ತಿಗೆ ನಿತ್ಯ ಅಳುತ್ತಿದ್ದರು ಎಂದು ರಘು ಅವರ ಕಿರಿಯ ಸಹೋದರ ನರೇಂದ್ರ ತಿಳಿಸಿದ್ದಾರೆ. ಬೆಳಿಗ್ಗೆ ಅವರ ಮನೆಯ ಬಾಗಿಲು ತೆರೆಯದಿದ್ದಾಗ ನಾವು ಬಾಗಿಲನ್ನು ಹೊಡೆದು ನೋಡಿದಾಗ ಒಳಗೆ ಇಬ್ಬರೂ ಸತ್ತು ಬಿದ್ದಿದ್ದರು.

ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಶವಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇಬ್ಬರ ಕಣ್ಣುಗಳನ್ನು ದಾನ ಮಾಡಲು ಸಂಬಂಧಿಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com