ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಜೂನ್ 28 ವರೆಗೆ ಜೈಲು

ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿನಿರ್ದೇಶನಲಾಯ ಬಂಧಿಸಿರುವ ತಮಿಳುನಾಡಿನ ಇಂಧನ, ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಚೆನ್ನೈ ನ ಸ್ಥಳೀಯ ನ್ಯಾಯಾಲಯ ಜೂ.28 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಸಚಿವ ಸೆಂಥಿಲ್ ಬಾಲಾಜಿ ಅಳುತ್ತಿರುವ ದೃಶ್ಯ
ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಸಚಿವ ಸೆಂಥಿಲ್ ಬಾಲಾಜಿ ಅಳುತ್ತಿರುವ ದೃಶ್ಯ

ಚೆನ್ನೈ: ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿನಿರ್ದೇಶನಲಾಯ ಬಂಧಿಸಿರುವ ತಮಿಳುನಾಡಿನ ಇಂಧನ, ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಚೆನ್ನೈ ನ ಸ್ಥಳೀಯ ನ್ಯಾಯಾಲಯ ಜೂ.28 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸೆಂಥಿಲ್ ಬಾಲಾಜಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಎಸ್ ಅಲ್ಲಿ ಆದೇಶ ಹೊರಡಿಸುವುದಕ್ಕೂ ಮುನ್ನ ಸ್ವತಃ ಆಸ್ಪತ್ರೆಗೆ ಆಗಮಿಸಿದ್ದರು.

ಬುಧವಾರದಂದು ಬೆಳಿಗ್ಗೆ 1.30 ಕ್ಕೆ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು. ಸಚಿವರನ್ನೊಳಗೊಂಡು ನಡೆದಿದ್ದ ಉದ್ಯೋಗಕ್ಕಾಗಿ ಹಣದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಕೆಲವು ತಿಂಗಳ ಹಿಂದೆ ಅನುಮತಿ ನೀಡಿತ್ತು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ತಮಿಳು ನಾಡು ಸಚಿವ ಸೆಂಥಿಲ್ ಬಾಲಾಜಿಗೆ ಬೈಪಾಸ್ ಸರ್ಜರಿ ಸಲಹೆ ನೀಡಿದ ವೈದ್ಯರು!
 
ಜಾರಿ ನಿರ್ದೇಶನಾಲಯದಿಂದ ಕ್ರಮ ಎದುರಿಸಿದ ಸಿಎಂ ಎಂಕೆ ಸ್ಟ್ಯಾಲಿನ್ ಅವರ ಸಂಪುಟದ ಮೊದಲ ಸಚಿವರು ಬಾಲಾಜಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com