ಆಂಧ್ರ ಪ್ರದೇಶ: ಗುಂಟೂರಿನಲ್ಲಿ ಗೋಡೆ ಕುಸಿದು, ಇಬ್ಬರು ಬಾಲಕರು ದುರ್ಮರಣ

ಆಟವಾಡುತ್ತಿದ್ದ ಬಾಲಕರು ಗೋಡೆಯ ಮೇಲೆ ಹತ್ತಿದ್ದಾರೆ. ಅದು ಶಿಥಿಲಾವಸ್ಥೆಯಲ್ಲಿದ್ದ ಗೋಡೆಯಿಂದ ಭಾರವಾದ ಸಿಮೆಂಟ್ ಕಲ್ಲುಗಳು ಅವರ ಮೇಲೆ ಬಿದ್ದಿದ್ದು, ತಲೆಗೆ ತೀವ್ರ ಗಾಯಗಳಾಗಿವೆ. ತಕ್ಷಣ ಬಾಲಕರನ್ನು ಪೇದಕಕಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಆಂಧ್ರಪ್ರದೇಶ: ಗುಂಟೂರಿನ ಪೆಡಕಾಕನಿ ಗ್ರಾಮದಲ್ಲಿ ಶುಕ್ರವಾರ ನಡೆದ ದಾರುಣ ಘಟನೆಯೊಂದರಲ್ಲಿ ಪಕ್ಕದ ಮನೆಯ ಐದು ಅಡಿ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಮೃತರನ್ನು ಪೆಡಕಕಾನಿಯ ಲೂಥರ್ ಗಿರಿ ನಗರದ ಪಿ ಕಾರ್ತಿಕ್ (12) ಮತ್ತು ಪಿ ಸಿದ್ಧಾರ್ಥ್ (12) ಎಂದು ಗುರುತಿಸಲಾಗಿದೆ.

ಸ್ಥಳೀಯ ಪೊಲೀಸರ ಪ್ರಕಾರ, ಆಟವಾಡುತ್ತಿದ್ದ ಬಾಲಕರು ಗೋಡೆಯ ಮೇಲೆ ಹತ್ತಿದ್ದಾರೆ. ಅದು ಶಿಥಿಲಾವಸ್ಥೆಯಲ್ಲಿದ್ದ ಗೋಡೆಯಿಂದ ಭಾರವಾದ ಸಿಮೆಂಟ್ ಕಲ್ಲುಗಳು ಅವರ ಮೇಲೆ ಬಿದ್ದಿದ್ದು, ತಲೆಗೆ ತೀವ್ರ ಗಾಯಗಳಾಗಿವೆ. ತಕ್ಷಣ ಬಾಲಕರನ್ನು ಪೇದಕಕಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಂಗಳೂರು ಮಳೆ: ಧರೆಗುರುಳಿದ ಮರ, ಆಟೋ ರಿಕ್ಷಾ ಚಾಲಕನ ಬಲಿ!

ಈ ಘಟನೆಯು ಮೃತರ ಕುಟುಂಬಗಳು ಮತ್ತು ಸಂಬಂಧಿಕರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯ ಗ್ರಾಮ ಕಂದಾಯ ಅಧಿಕಾರಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com