ನೇಪಾಳದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ 25 ಪ್ರವಾಸಿಗರ ಪಾರ್ಥಿವ ಶರೀರ ಜಲಗಾಂವ್‌ಗೆ ಆಗಮನ

ಕಠ್ಮಂಡುವಿನಿಂದ 115 ಕಿಲೋಮೀಟರ್ ದೂರದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ 27 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದರು. ಉಳಿದ ಇಬ್ಬರ ಮೃತದೇಹಗಳನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ಗೆ ಕೊಂಡೊಯ್ಯಲಾಗಿದೆ.
ಪಾರ್ಥಿವ ಶರೀರ
ಪಾರ್ಥಿವ ಶರೀರ
Updated on

ಜಲಗಾಂವ್‌: ನೇಪಾಳದಲ್ಲಿ 40 ಭಾರತೀಯ ಪ್ರಯಾಣಿಕರಿದ್ದ ಬಸ್ ನದಿಗೆ ಉರುಳಿಬಿದ್ದು ಸಂಭವಿಸಿದ ದುರಂತದಲ್ಲಿ ಮಹಾರಾಷ್ಟ್ರದ 25 ಜನರು ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಶನಿವಾರ ತಡರಾತ್ರಿ ಜಲಗಾಂವ್ ಗೆ ತರಲಾಯಿತು.

ಭಾರತೀಯ ವಾಯುಪಡೆಯ ವಿಮಾನದ ಮೂಲಕ ನೇಪಾಳದ ಭರತ್ ಪುರದಿಂದ ಜಲಾಗಾಂವ್ ಗೆ ಪಾರ್ಥಿವ ಶರೀರಗಳನ್ನು ಏರ್ ಲಿಫ್ಟ್ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್, ಎಲ್ಲಾರ ಮೃತದೇಹಗಳನ್ನು ತರಲಾಗಿದೆ. ಶೀಘ್ರದಲ್ಲೇ ಅವರ ನಿವಾಸಗಳಿಗೆ ಕೊಂಡೊಯ್ಯಲಾಗುವುದು. ಗಾಯಗೊಂಡವರು ಇನ್ನೂ ನೇಮಪಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಐಸಿಯುನಲ್ಲಿದ್ದಾರೆ ಎಂದು ತಿಳಿಸಿದರು.

ಪಾರ್ಥಿವ ಶರೀರ
ನೇಪಾಳದಲ್ಲಿ ನದಿಗೆ ಉರುಳಿದ ಬಸ್: ಮಹಾರಾಷ್ಟ್ರದ 26 ಪ್ರವಾಸಿಗರು ದುರ್ಮರಣ, ಹಲವರಿಗೆ ಗಾಯ

ಕಠ್ಮಂಡುವಿನಿಂದ 115 ಕಿಲೋಮೀಟರ್ ದೂರದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ 27 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದರು. ಉಳಿದ ಇಬ್ಬರ ಮೃತದೇಹಗಳನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ಗೆ ಕೊಂಡೊಯ್ಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com