ಕೇಂದ್ರ ಸರ್ಕಾರ ನಮ್ಮ ವಿರುದ್ಧ ರಬ್ಬರ್ ಗುಂಡು, ಹೊಗೆ ಶೆಲ್ ಗಳನ್ನು ಬಳಸುತ್ತಿದೆ: ರೈತರು

ಸರ್ವಾನ್ ಸಿಂಗ್ ಪಂಧೇರ್
ಸರ್ವಾನ್ ಸಿಂಗ್ ಪಂಧೇರ್

ನವದೆಹಲಿ: ಧರಣಿ ನಿರತ ರೈತರ ವಿರುದ್ಧ ಪೊಲೀಸರು ಮಿಲಿಟರಿ ಬಳಸುವ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಅವರು ಗುರುವಾರ ಆರೋಪಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಧೇರ್ ಅವರು, ಹೊಗೆ ಶೆಲ್ ಗಳು ಮತ್ತು ರಬ್ಬರ್ ಬುಲೆಟ್‌ಗಳಂತೆಯೇ ಕೆಲವು ಮದ್ದುಗುಂಡುಗಳನ್ನು ಪ್ರದರ್ಶಿಸಿದರು ಮತ್ತು ಅವುಗಳನ್ನು ಮಿಲಿಟರಿ ಮಾತ್ರ ಬಳಸುತ್ತದೆ ಎಂದು ಉಲ್ಲೇಖಿಸಿದ್ದಾರೆ.

"ನಾವು ಸೇನೆ ಮಾತ್ರ ಬಳಸುತ್ತಿರುವುದನ್ನು ತೋರಿಸುತ್ತಿದ್ದೇವೆ. ಒಂದು ಅಶ್ರುವಾಯು, ಇನ್ನೊಂದು ಹೊಗೆ ಶೆಲ್ ಏರ್ ಸ್ಫೋಟ ಮತ್ತು ನೆಲದ ಮೇಲೆ ಹೊಗೆ ಶೆಲ್ ಸ್ಫೋಟ. ಈ ಮದ್ದುಗುಂಡುಗಳು ಗಾಯಗಳಿಗೆ ಕಾರಣವಾಗುತ್ತವೆ. ಇದನ್ನು ಮಿಲಿಟರಿ ಮಾತ್ರ ಬಳಸುತ್ತದೆ ಮತ್ತು ಪೊಲೀಸರು ಬಳಸುವುದಿಲ್ಲ. ಆದರೆ ಇಲ್ಲಿ ಪೊಲೀಸರು ಅಧಿಕ ಸ್ಫೋಟಕ ಮದ್ದುಗುಂಡುಗಳನ್ನು ಬಳಸುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ಅವಧಿ ಮೀರಿದ ಮದ್ದುಗುಂಡುಗಳನ್ನು ಬಳಸಲಾಗುತ್ತಿರುವುದು ಪತ್ತೆಯಾಗಿದೆ. ಎಸ್‌ಎಲ್‌ಆರ್ ಬುಲೆಟ್‌ಗಳನ್ನು ಹಾರಿಸಲಾಗುತ್ತಿದೆ. ಇದನ್ನು ಖಾಸಗಿಯಾಗಿ ಖರೀದಿಸಲಾಗಿದೆ" ಎಂದು ಪಂಧೇರ್ ಆರೋಪಿಸಿದ್ದಾರೆ.

ಸರ್ವಾನ್ ಸಿಂಗ್ ಪಂಧೇರ್
3 ನೇ ದಿನಕ್ಕೆ ಕಾಲಿಟ್ಟ ರೈತರ ದೆಹಲಿ ಚಲೋ ಪ್ರತಿಭಟನೆ

"ಇಡೀ ದೇಶದಲ್ಲಿ ರೈತರು ತಮ್ಮ ಮನೆಗಳಿಂದ ಹೊರಗೆ ಬರಲು ಬಿಡುತ್ತಿಲ್ಲ. ಪ್ರತಿಭಟನೆಗೆ ಬರುವ ರೈತರನ್ನು ಬಂಧಿಸಲಾಗುತ್ತಿದೆ" ಎಂದು ಪಂಧೇರ್ ಹೇಳಿದ್ದಾರೆ.

ಗೃಹ ಸಚಿವಾಲಯದ ಆದೇಶದ ಮೇರೆಗೆ ಪಂಜಾಬ್‌ನ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಫೆಬ್ರವರಿ 16 ರವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ರೈತರ ‘ದೆಹಲಿ ಚಲೋ’ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ ಎಂದು ಅವರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com