Nirmala Sitharaman
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

GSTಗೆ ಇಂಧನ; ಕೇಂದ್ರದ ಅಭ್ಯಂತರವಿಲ್ಲ.. ರಾಜ್ಯಗಳಿಗೇ ನಿರ್ಧಾರ, ''ವಿತ್ತೀಯ ಮಿತಿ ನಿಗದಿ, ಕೆಲ ಉತ್ಪನ್ನ-ಸೇವೆಗಳ ದರಗಳ ಬದಲಾವಣೆ'': Nirmala Sitharaman

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಅಭ್ಯಂತರವಿಲ್ಲ. ಆದರೆ, ಈ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಸ್ಪಷ್ಟಪಡಿಸಿದ್ದಾರೆ.
Published on

ನವದೆಹಲಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಅಭ್ಯಂತರವಿಲ್ಲ. ಆದರೆ, ಈ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಎಂಟು ತಿಂಗಳ ಬಳಿಕ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 53ನೇ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ''ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿ ಇದಕ್ಕೆ ಅವಕಾಶ ಕಲ್ಪಿಸಿದ್ದಾರೆ.

ರಾಜ್ಯಗಳು ಪರಸ್ಪರ ಚರ್ಚಿಸಬೇಕಿದೆ. ರಾಜ್ಯಗಳು ಒಪ್ಪಿಗೆ ನೀಡಿದ ತಕ್ಷಣವೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ವಿಷಯ ಮಂಡಿಸಲಾಗುವುದು. ಬಳಿಕ ಯಾವ ಹಂತದ ತೆರಿಗೆ ವ್ಯಾಪ್ತಿಗೆ ಸೇರಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದರು.

Nirmala Sitharaman
ಹಣಕಾಸು ಖಾತೆ ಉಸ್ತುವಾರಿ ವಹಿಸಿಕೊಂಡ ಸಚಿವೆ ನಿರ್ಮಲಾ ಸೀತಾರಾಮನ್: ಮುಂದಿನ ತಿಂಗಳು ಪೂರ್ಣ ಬಜೆಟ್ ಮಂಡನೆ

ಜಿಎಸ್‌ಟಿ ಕೌನ್ಸಿಲ್ ಶಿಕ್ಷಣ ಸಂಸ್ಥೆಗಳ ಹೊರಗಿನ ಹಾಸ್ಟೆಲ್ ಸೌಕರ್ಯಗಳ ಮೂಲಕ ಪ್ರತಿ ವ್ಯಕ್ತಿಗೆ ತಿಂಗಳಿಗೆ ₹ 20,000 ವರೆಗೆ ವಿನಾಯಿತಿ ನೀಡುತ್ತದೆ. ಆದಾಗ್ಯೂ, ವಿದ್ಯಾರ್ಥಿಯು ನಿರಂತರವಾಗಿ 90 ದಿನಗಳ ಕಾಲ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿರಬೇಕು ಎಂಬ ಷರತ್ತು ಇರುತ್ತದೆ. ವಿನಾಯಿತಿಯ ಲಾಭವನ್ನು ಹೋಟೆಲ್‌ಗಳು ಪಡೆಯುವುದನ್ನು ತಡೆಯಲು ಇದನ್ನು ಜಾರಿಗೆ ತರಲಾಗಿದೆ.

ರೈಲ್ವೇ ಟಿಕೆಟ್‌ಗಳ ಖರೀದಿ, ವೇಟಿಂಗ್ ರೂಮ್ ಮತ್ತು ಕ್ಲೋಕ್ ರೂಮ್ ಶುಲ್ಕಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿ, ಬ್ಯಾಟರಿ ಚಾಲಿತ ವಾಹನಗಳು ಮತ್ತು ಇಂಟ್ರಾ-ರೈಲ್ವೆ ಸೇವೆಗಳಂತಹ ಸೇವೆಗಳಿಗೆ ಯಾವುದೇ ಜಿಎಸ್‌ಟಿ ವಿಧಿಸಲಾಗುವುದಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಅಲ್ಲದೆ ತೆರಿಗೆ ಬೇಡಿಕೆಯ ಸೂಚನೆಯ ಮೇಲೆ ಪೆನಾಲ್ಟಿಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಶಿಫಾರಸು ಮಾಡುತ್ತದೆ. ಹಾಲಿನ ಕ್ಯಾನ್‌ಗಳ ಮೇಲೆ ಏಕರೂಪದ ದರ ಶೇ12 ವಿಧಿಸಲು ನಿರ್ಧರಿಸಲಾಗಿದೆ. ಪೂರ್ವ ಬಜೆಟ್ ಸಭೆಯಲ್ಲಿ, ನಿರ್ಮಲಾ ಸೀತಾರಾಮನ್ ಬೆಳವಣಿಗೆಯನ್ನು ಹೆಚ್ಚಿಸಲು ಸಕಾಲಿಕ ತೆರಿಗೆ ಹಂಚಿಕೆ ಮತ್ತು ಜಿಎಸ್‌ಟಿ ಪರಿಹಾರದ ಬಾಕಿಗಳ ಮೂಲಕ ರಾಜ್ಯಗಳಿಗೆ ಕೇಂದ್ರದ ಬೆಂಬಲ ನೀಡಲಿದೆ.

ನಿರ್ದಿಷ್ಟ ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರವು 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ನೀಡುವ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಕೇಳಿದ್ದಾರೆ ಎಂದು ಹೇಳಿದರು.

ಸಭೆಯ ಮಹತ್ವದ ಅಂಶಗಳು

  • ರೈಲ್ವೆ ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌ ನಿರೀಕ್ಷಣಾ ಕೊಠಡಿ ಸೇವೆ, ವಿದ್ಯುತ್‌ಚಾಲಿತ ವಾಹನಗಳು ಮತ್ತು ಇಂಟ್ರಾ ರೈಲ್ವೆ ಸೇವೆಗೆ ವಿನಾಯಿತಿ ನೀಡಲಾಗಿದೆ.

  • ಶಿಕ್ಷಣ ಸಂಸ್ಥೆಗಳು ಹೊರಭಾಗದಲ್ಲಿ ಕಲ್ಪಿಸುವ ಹಾಸ್ಟೆಲ್ ಸೌಕರ್ಯ ಪಡೆಯುವ ಪ್ರತಿ ವಿದ್ಯಾರ್ಥಿಗೆ ಮಾಸಿಕ 20 ಸಾವಿರ ರೂವರೆಗೆ ವಿನಾಯಿತಿ ಸಿಗಲಿದೆ.

  • ಆದರೆ ಇದಕ್ಕೆ ವಿದ್ಯಾರ್ಥಿಯು 90 ದಿನಗಳ ಕಾಲ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ.

  • ರಟ್ಟಿನ ಪೆಟ್ಟಿಗೆಗಳಿಗೆ ನಿಗದಿಪಡಿಸಿದ್ದ ತೆರಿಗೆಯನ್ನು ಶೇ 18ರಷ್ಟು ಶೇ 12ಕ್ಕೆ ಇಳಿಸಲಾಗಿದೆ.

  • ಹಾಲಿನ ಕ್ಯಾನ್‌ಗಳ ಮೇಲೆ ವಿಧಿಸುವ ತೆರಿಗೆಯಲ್ಲಿ ಏಕರೂಪತೆ ಕಾಯ್ದುಕೊಳ್ಳಲು ನಿರ್ಧರಿಸಲಾಗಿದ್ದು ಶೇ 12ರಷ್ಟು ತೆರಿಗೆ ನಿಗದಿಪಡಿಸಲಾಗಿದೆ.

  • ನಕಲಿ ಇನ್‌ವಾಯ್ಸ್‌ಗಳ ಪ್ರಮಾಣ ಕಡಿಮೆಗೊಳಿಸಲು ಸೂಕ್ತ ಕ್ರಮಕ್ಕೆ ಮಂಡಳಿ ನಿರ್ಧಾರ, ಬಯಮೆಟ್ರಿಕ್ ವ್ಯವಸ್ಥೆ ಅಳವಡಿಕೆಗೆ ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com