ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೇರಿಕಾ ಹೇಳಿಕೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ ಹೀಗಿದೆ...

ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೇರಿಕಾ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ರಣಧೀರ್ ಜೈಸ್ವಾಲ್
ರಣಧೀರ್ ಜೈಸ್ವಾಲ್
Updated on

ನವದೆಹಲಿ: ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೇರಿಕಾ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅಮೇರಿಕಾದ ಹೇಳಿಕೆ ಅನಗತ್ಯ ಹಾಗೂ ಸ್ವೀಕಾರಾರ್ಹವಲ್ಲದ್ದಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಕಾನೂನಿನ ನಿಯಮಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು, ದೇಶದಲ್ಲಿ ಕಾನೂನು ಪ್ರಕ್ರಿಯೆಗಳು ಈ ತತ್ವವಾಗಿ ನಡೆಸಲ್ಪಡುತ್ತವೆ ಎಂದು ಪ್ರತಿಪಾದಿಸಿದರು. "ಒಂದೇ ರೀತಿಯ ನೀತಿಯನ್ನು ಹಂಚಿಕೊಳ್ಳುವ ಯಾರಾದರೂ, ವಿಶೇಷವಾಗಿ ಸಹವರ್ತಿ ಪ್ರಜಾಪ್ರಭುತ್ವಗಳು, ಈ ಸತ್ಯವನ್ನು ಶ್ಲಾಘಿಸಲು ಯಾವುದೇ ತೊಂದರೆ ಹೊಂದಿರಬಾರದು" ಎಂದು ಅವರು ಹೇಳಿದ್ದಾರೆ.

ತನ್ನ ಸ್ವತಂತ್ರ ಮತ್ತು ದೃಢವಾದ ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಭಾರತದ ಹೆಮ್ಮೆಯನ್ನು ಎತ್ತಿ ಹಿಡಿದ ಜೈಸ್ವಾಲ್, ಯಾವುದೇ ಅನಗತ್ಯ ಬಾಹ್ಯ ಪ್ರಭಾವಗಳಿಂದ ಭಾರತದ ಹೆಮ್ಮೆಯನ್ನು ರಕ್ಷಿಸುವ ದೇಶದ ಸಂಕಲ್ಪವನ್ನು ಪುನರುಚ್ಚರಿಸಿದರು.

ರಣಧೀರ್ ಜೈಸ್ವಾಲ್
ಕೇಜ್ರಿವಾಲ್ ಬಂಧನ ವಿಷಯದ ಬಳಿಕ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತದ ಬಗ್ಗೆ ಅಮೇರಿಕಾ ಮಾತು; ಪ್ರತಿಕ್ರಿಯೆ ಹೀಗಿದೆ...

“ನಿನ್ನೆ ಭಾರತವು ವಿದೇಶಾಂಗ ಇಲಾಖೆ ಅಮೇರಿಕಾ ಹೇಳಿಕೆ ಕುರಿತಂತೆ ಯುಎಸ್ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗೆ ತನ್ನ ತೀವ್ರ ಆಕ್ಷೇಪಣೆ ಮತ್ತು ಪ್ರತಿಭಟನೆಯ ಸಂದೇಶವನ್ನು ರವಾನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com