ಭಾರತದ ಲೋಕಸಭಾ ಚುನಾವಣೆಯಲ್ಲಿ ಅಮೇರಿಕಾ ಹಸ್ತಕ್ಷೇಪ; ರಷ್ಯಾ ಗಂಭೀರ ಆರೋಪ

ಅಮೇರಿಕಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ಯತ್ನದ ಆರೋಪದಲ್ಲಿ ಅಮೇರಿಕಾ ಭಾರತದ ವಿರುದ್ಧ ಸಮರ್ಪಕ ಸಾಕ್ಷ್ಯಾಧಾರಗಳನ್ನು ನೀಡಿಲ್ಲ ಎಂದಿರುವ ರಷ್ಯಾ ಭಾರತದ ಆಂತರಿಕ ವಿಷಯಗಳಲ್ಲಿ ಅಮೇರಿಕಾ ಹಸ್ತಕ್ಷೇಪ ಮಾಡುತ್ತಿದೆ ಎಂದು ಹೇಳಿದೆ.
ಮೋದಿ-ಬೈಡನ್
ಮೋದಿ-ಬೈಡನ್online desk

ನವದೆಹಲಿ: ಅಮೇರಿಕಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ಯತ್ನದ ಆರೋಪದಲ್ಲಿ ಅಮೇರಿಕಾ ಭಾರತದ ವಿರುದ್ಧ ಸಮರ್ಪಕ ಸಾಕ್ಷ್ಯಾಧಾರಗಳನ್ನು ನೀಡಿಲ್ಲ ಎಂದಿರುವ ರಷ್ಯಾ ಭಾರತದ ಆಂತರಿಕ ವಿಷಯಗಳಲ್ಲಿ ಅಮೇರಿಕಾ ಹಸ್ತಕ್ಷೇಪ ಮಾಡುತ್ತಿದೆ ಎಂದು ಹೇಳಿದೆ.

ಈಗ ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿಯೂ ಅಮೇರಿಕಾ ಹಸ್ತಕ್ಷೇಪ ಮಾಡುತ್ತಿದೆ ಎಂದು ರಷ್ಯಾ ಹೇಳಿದೆ. ಅಮೇರಿಕಾ ಭಾರತದ ರಾಷ್ಟ್ರೀಯ ಮನೋಧರ್ಮ ಹಾಗೂ ಇತಿಹಾಸವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಅಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದೆ.

"ನವದೆಹಲಿಯ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಆಗಾಗ್ಗೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಭಾರತವನ್ನು ಮಾತ್ರವಲ್ಲದೆ ಇತರ ಹಲವು ದೇಶಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿದೆ ಎಂದು ಆಧಾರರಹಿತವಾಗಿ ಆರೋಪಿಸುವುದನ್ನು ನಾವು ನೋಡುತ್ತೇವೆ. ಇದು ರಾಷ್ಟ್ರೀಯ ಮನಸ್ಥಿತಿಯ ಯುನೈಟೆಡ್ ಸ್ಟೇಟ್ಸ್ ನ ತಪ್ಪು ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಷ್ಯಾ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಮೋದಿ-ಬೈಡನ್
ಪನ್ನುನ್ ಹತ್ಯೆಯತ್ನದ ಆರೋಪದಲ್ಲಿ ಭಾರತದ ಕೈವಾಡಕ್ಕೆ ಆಧಾರಗಳಿಲ್ಲ: ಮಿತ್ರನ ಬೆನ್ನಿಗೆ ನಿಂತ ರಷ್ಯಾ

ಅಮೇರಿಕಾ ಭಾರತದ 2024 ರ ಲೋಕಸಭಾ ಚುನಾವಣೆ ಜಟಿಲಗೊಳಿಸುತ್ತಿದೆ. ಈಗ ನಡೆಯುತ್ತಿರುವ ಸಾರ್ವತ್ರಿಕ ಸಂಸತ್ತಿನ ಚುನಾವಣೆಗಳನ್ನು ಸಂಕೀರ್ಣಗೊಳಿಸುವ ಸಲುವಾಗಿ ಅಮೇರಿಕಾ ಭಾರತದ ಆಂತರಿಕ ರಾಜಕೀಯ ಪರಿಸ್ಥಿತಿಯನ್ನು ಅಸಮತೋಲನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಷ್ಯಾ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com