ಮಾಧ್ಯಮಗಳು ತಟಸ್ಥವಾಗಿಲ್ಲ, ಅದಕ್ಕಾಗಿಯೇ ಪತ್ರಿಕಾ ಗೋಷ್ಠಿ ನಡೆಸುತ್ತಿಲ್ಲ: ಪ್ರಧಾನಿ ಮೋದಿ

ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಟೀಕಾಕಾರರು ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದಾರೆ. ಇದಕ್ಕೆ ಪ್ರಧಾನಿಯೇ ಉತ್ತರ ನೀಡಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಟೀಕಾಕಾರರು ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದಾರೆ. ಇದಕ್ಕೆ ಪ್ರಧಾನಿಯೇ ಉತ್ತರ ನೀಡಿದ್ದಾರೆ.

ಪತ್ರಿಕಾಗೋಷ್ಠಿ ನಡೆಸದ ತಮ್ಮ ನಿರ್ಧಾರವನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳ ಸ್ವರೂಪ ಬದಲಾಗಿದೆ. ಅದು ಮೊದಲಿನಂತೆ ತಟಸ್ಥವಾಗಿಲ್ಲ. ಪತ್ರಕರ್ತರು ತಮ್ಮ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾರೆ. ನಾನು ಸಂಸತ್ತಿಗೆ ಜವಾಬ್ದಾರನಾಗಿದ್ದೇನೆ. ಇಂದು ಪತ್ರಕರ್ತರು ತಮ್ಮದೇ ಆದ ಆದ್ಯತೆಗಳಿಂದ ಗುರುತಿಸಲ್ಪಟ್ಟಿದ್ದು ಮಾಧ್ಯಮವು ಪಕ್ಷಾತೀತವಾಗಿ ಉಳಿದಿಲ್ಲ ಎಂದು ಹೇಳಿದರು.

ಆಜ್ ತಕ್‌ಗೆ ನೀಡಿದ ಸಂದರ್ಶನದ ವೇಳೆ, ಜನರು ಈಗ ಮಾಧ್ಯಮ ಸಿದ್ದಾಂತಗಳ ಬಗ್ಗೆಯೂ ತಿಳಿದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಹಿಂದೆ ಮಾಧ್ಯಮಗಳು ಮುಖರಹಿತವಾಗಿದ್ದವು. ಮಾಧ್ಯಮಗಳಲ್ಲಿ ಯಾರು ಏನು ಬರೆಯುತ್ತಿದ್ದಾರೆ ಮತ್ತು ಅವರ ಸಿದ್ಧಾಂತ ಏನು ಎಂದು ಮೊದಲು ಯಾರೂ ಚಿಂತಿಸುತ್ತಿರಲಿಲ್ಲ. ಈಗ ಪರಿಸ್ಥಿತಿ ಮೊದಲಿನಂತಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ
ಎಲ್ಲಿ ಬುಲ್ಡೋಜರ್ ಓಡಿಸಬೇಕೆಂದು ಯೋಗಿ ಆದಿತ್ಯನಾಥ್ ಬಳಿ ಟ್ಯೂಷನ್ ಪಡೆಯಿರಿ: ಇಂಡಿಯಾ ಒಕ್ಕೂಟಕ್ಕೆ PM ಮೋದಿ

ರಾಜಕೀಯದಲ್ಲಿ ಹೊಸ ಸಂಸ್ಕೃತಿ ಬೆಳೆದಿದೆ. ಇದು ಕಾರ್ಯಕ್ಷಮತೆಯ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚಾಗಿ ಮಾಧ್ಯಮವನ್ನು ನಿರ್ವಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನಾನು ಆ ಮಾರ್ಗವನ್ನು ಅನುಸರಿಸುವುದನ್ನು ನಂಬುವುದಿಲ್ಲ ಎಂದು ಮೋದಿ ಹೇಳಿದರು. ಕಷ್ಟಪಟ್ಟು ದುಡಿದು ಬಡವರ ಮನೆ ಮನೆ ತಲುಪಬೇಕು. ವಿಜ್ಞಾನ ಭವನದಲ್ಲಿ ರಿಬ್ಬನ್ ಕತ್ತರಿಸುವಾಗ ನಾನು ಫೋಟೋ ತೆಗೆಯಬಹುದು. ಆದರೆ, ನಾನು ಒಂದು ಸಣ್ಣ ಯೋಜನೆಗಾಗಿ ಜಾರ್ಖಂಡ್‌ನ ಸಣ್ಣ ಜಿಲ್ಲೆಗೆ ಹೋಗುತ್ತೇನೆ. ನಾನು ಹೊಸ ಕೆಲಸದ ಸಂಸ್ಕೃತಿಯನ್ನು ತಂದಿದ್ದೇನೆ. ಅದನ್ನು ಬೆಂಬಲಿಸುತ್ತದೆಯೇ ಅಥವಾ ಬೇಡವೇ ಎಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com