ಅಧಿಕಾರಿಗಳು ನಮ್ ಮಾತು ಕೇಳ್ತಿಲ್ಲ, AAP ಮಾತು ಕೇಳುತ್ತಿದ್ದಾರೆ: ಗುಜರಾತ್ ಸರ್ಕಾರದ ವಿರುದ್ಧ BJP ಶಾಸಕರ ಅಸಮಾಧಾನ!

ಲೋಕಸಭಾ ಚುನಾವಣೆ ಬಳಿಕ ಗುಜರಾತ್ ನಲ್ಲಿ ಬಿಜೆಪಿ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಕ್ಷದ ಶಾಸಕರು ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬರತೊಡಗಿದೆ.
Gujarat BJP Chief CR Patil
ಗುಜರಾತ್ ಬಿಜೆಪಿ ಅಧ್ಯಕ್ಷ CR Patilonline desk
Updated on

ಅಹ್ಮದಾಬಾದ್: ಲೋಕಸಭಾ ಚುನಾವಣೆ ಬಳಿಕ ಗುಜರಾತ್ ನಲ್ಲಿ ಬಿಜೆಪಿ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಕ್ಷದ ಶಾಸಕರು ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬರತೊಡಗಿದೆ.

ಇನ್ನೂ ಕೆಲವು ಶಾಸಕರು ಸರ್ಕಾರದ ವ್ಯವಸ್ಥೆಯನ್ನು ಬಹಿರಂಗ ಪತ್ರಗಳ ಮೂಲಕ ಟೀಕಿಸಿದ್ದಾರೆ. ಮೂಲಗಳ ಪ್ರಕಾರ, ಪಕ್ಷ ಇಂತಹ ಶಾಸಕರಿಗೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಕೆಲಸಗಳ ಬಗ್ಗೆ ಪತ್ರಗಳನ್ನು ಬರೆಯಬಹುದು ಆದರೆ ಅವರು ಯಾವುದೇ ಪತ್ರ ಬರೆದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡದಂತೆ ಸೂಚನೆ ನೀಡಿದೆ.

ಕಳೆದ 15 ದಿನಗಳಲ್ಲಿ ಸರ್ಕಾರದ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮೂವರು ಬಿಜೆಪಿ ಶಾಸಕರು ಹಾಗೂ ಓರ್ವ ನಗರ ಅಧ್ಯಕ್ಷ ಪತ್ರ ಬರೆದಿದ್ದಾರೆ. ಈ ಬೆಳವಣಿಗೆ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ತೀವ್ರಗೊಳ್ಳುತ್ತಿದ್ದು, ತಮ್ಮದೇ ಆಡಳಿತದ ವಿರುದ್ಧ ಬಿಜೆಪಿಯಲ್ಲಿರುವ ಜನಪ್ರತಿನಿಧಿಗಳು ಪ್ರಶ್ನೆ ಮಾಡುತ್ತಿದ್ದಾರೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

Gujarat BJP Chief CR Patil
ಮೋದಿ ತವರಿನಲ್ಲಿ ಬಿಜೆಪಿಗೆ ಆಂತರಿಕ ಭಿನ್ನಮತದ ಬೇಗೆ: ಅಮಿತ್ ಶಾ ಆಪ್ತನಿಗೆ ಸೋಲು!

ಸೂರತ್‌ನ ವರಚ ಶಾಸಕ ಕುಮಾರ್ ಕನಾನಿ, ಜಾತಿ ಪ್ರಮಾಣ ಪತ್ರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಜೆಂಟರು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಏತನ್ಮಧ್ಯೆ, ಜುನಾಗಢ ಶಾಸಕ ಸಂಜಯ್ ಕೊರ್ಡಿಯಾ ಅವರು ಸ್ಥಳೀಯ ಕೆರೆಯ ಸೌಂದರ್ಯ ಹೆಚ್ಚಿಸುವ ಕೆಲಸದಲ್ಲಿ ಸರ್ಕಾರಿ ಅಧಿಕಾರಿಗಳು ತಮ್ಮ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ತಾಲೂಕಾ ಅಭಿವೃದ್ಧಿ ಅಧಿಕಾರಿ ಪ್ರಾಥಮಿಕ ಶಾಲೆಗೆ ಕಡಿಮೆ ಗುಣಮಟ್ಟದ ವಾಟರ್ ಕೂಲರ್‌ಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಿದ್ದಾರೆ, ಅವ್ಯವಹಾರ ನಡೆಸಿದ್ದಾರೆ ಎಂದು ಮಹದುದ ಶಾಸಕ ಸಂಜಯ ಸಿಂಗ್ ಮಹಿದಾ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಮುಖ್ಯ ಅಧಿಕಾರಿ ಮತ್ತು ಪುರಸಭೆಯ ಅಧಿಕಾರಿಗಳು ಆಮ್ ಆದ್ಮಿ ಪಕ್ಷದ ಶಾಸಕರ ಮಾತನ್ನು ಮಾತ್ರ ಕೇಳುತ್ತಿದ್ದಾರೆ ಎಂದು ಭಾವನಗರ ಜಿಲ್ಲೆಯ ಗರಿಯಾಧರ್ ಪಟ್ಟಣದ ಬಿಜೆಪಿ ಅಧ್ಯಕ್ಷರು ಪತ್ರ ಬರೆದಿದ್ದಾರೆ.

Gujarat BJP Chief CR Patil
ಗುಜರಾತ್ ಲೋಕಸಭೆ ಚುನಾವಣೆ: ಕೇಸರಿ ಭದ್ರಕೋಟೆ ಉಳಿಸಿಕೊಳ್ಳಲು ಬಿಜೆಪಿ ಸಜ್ಜು!

ಸರ್ಕಾರಿ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯ ಮತ್ತು ಭ್ರಷ್ಟ ಅಧಿಕಾರಿಗಳ ಬಗ್ಗೆ ಬಿಜೆಪಿ ಶಾಸಕರು ಮತ್ತು ಮುಖಂಡರ ಪತ್ರಗಳಿಂದ ಆಡಳಿತಾರೂಢ ಬಿಜೆಪಿ ಸರ್ಕಾರದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಮೂಲಗಳು ಹೇಳುತ್ತವೆ. ಪರಿಣಾಮವಾಗಿ, ಬಿಜೆಪಿ ಶಾಸಕರು ಜಾಗರೂಕರಾಗಿರಲು ಒತ್ತಾಯಿಸಲಾಗಿದೆ, ಅವರು ಸಲ್ಲಿಕೆಗಳನ್ನು ಮಾಡುವಾಗ, ಅವರು ತಮ್ಮ ಪತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗದಂತೆ ನೋಡಿಕೊಳ್ಳಬೇಕೆಂದು ಪಕ್ಷ ಸೂಚಿಸಿದೆ. ಬನಸ್ಕಾಂತ, ವಡೋದರಾ, ಪೋರಬಂದರ್, ಪಟಾನ್, ಅಮ್ರೇಲಿ, ಆನಂದ್ ಮತ್ತು ಸಬರ್ಕಾಂತದಲ್ಲಿ ಬಿಜೆಪಿ ನಾಯಕರು ಪಕ್ಷದ ವಿರುದ್ಧವೇ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com