
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನೇಪಾಳದ ದೇವಸ್ಥಾನವೊಂದಕ್ಕೆ ಉಡುಗೊರೆಯಾಗಿ ನೀಡಿದ್ದ ಕಿರೀಟ ಕಳ್ಳತನವಾಗಿರುವ ಬಗ್ಗೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಕಳವಳ ವ್ಯಕ್ತಪಡಿಸಿದೆ.
2021 ರಲ್ಲಿ ಪ್ರಧಾನಿ ಮೋದಿಯವರು ತಮ್ಮ ಢಾಕಾ ಭೇಟಿಯ ಸಂದರ್ಭದಲ್ಲಿ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ (ಸತ್ಖಿರಾ) ಉಡುಗೊರೆಯಾಗಿ ನೀಡಿದ್ದ ಕಿರೀಟದ ಕಳ್ಳತನವಾಗಿದೆ ಎಂಬ ವಿಷಯ ಕೇಳಿ ತೀವ್ರ ಬೇಸರವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ದುಷ್ಕರ್ಮಿಗಳನ್ನು ಪತ್ತೆಹಚ್ಚುವಂತೆ ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಿಳಿ ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ದೇವಸ್ಥಾನದೊಳಗೆ ಕಾಲಿಟ್ಟಿದ್ದು, ತನ್ನ ಟಿ ಶರ್ಟ್ನಲ್ಲಿ ಸಿಕ್ಕಿಸಿಕೊಂಡಿದ್ದ ಕಿರೀಟವನ್ನು ತೆಗೆದ ನಂತರ ಗರ್ಭಗುಡಿಯಿಂದ ದೇವಾಲಯ ಆವರಣ ಮೂಲಕ ಹೊರನಡೆದಿದ್ದಾನೆ. ಮೊನ್ನೆ ಅಕ್ಟೋಬರ್ 10 ರಂದು ಕಳ್ಳತನ ನಡೆದಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಅವರು ಮಾರ್ಚ್ 26-27, 2021 ರಂದು ಬಾಂಗ್ಲಾದೇಶಕ್ಕೆ ತಮ್ಮ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಅವರು ಕಾಳಿ ದೇವಿಗೆ ಸಮರ್ಪಿತವಾದ ದೇವಾಲಯ ಮತ್ತು ಪುರಾಣ ಸಂಪ್ರದಾಯದ 51 ಶಕ್ತಿಪೀಠಗಳಲ್ಲಿ ಒಂದಾದ ಸತ್ಖಿರಾದಲ್ಲಿನ ಶತಮಾನಗಳಷ್ಟು ಹಳೆಯದಾದ ಜೆಶೋರೇಶ್ವರಿ ಕಾಳಿ ಶಕ್ತಿಪೀಠದಲ್ಲಿ ಪೂಜೆ ಸಲ್ಲಿಸಿದ್ದರು.
ಪಿಎಂ ಮೋದಿ ಅವರು ಇದೇ ವೇಳೆ ಕೈಯಿಂದ ಮಾಡಿದ ಕಿರೀಟ ಅಥವಾ ಬೆಳ್ಳಿಯ ಮುಕುಟವನ್ನು ಚಿನ್ನದ ಲೇಪನವನ್ನು ದೇವಿಯ ಬಳಿ ಇರಿಸಿದ್ದರು, ಇದನ್ನು ಸ್ಥಳೀಯ ಕುಶಲಕರ್ಮಿಗಳು ಮೂರು ವಾರಗಳಲ್ಲಿ ವಿಗ್ರಹದ ಮೇಲೆ ರಚಿಸಿದ್ದರು.
ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ದೇವಾಲಯದ ಸಂಕೀರ್ಣದಲ್ಲಿ ಸಮುದಾಯ ಭವನ ಮತ್ತು ಚಂಡಮಾರುತದಿಂದ ಕಾಪಾಡುವ ಆಶ್ರಯ ನೆಲೆಯನ್ನು ನಿರ್ಮಿಸಲು ಅನುದಾನವನ್ನು ಘೋಷಿಸಿದ್ದರು. ಈ ಆಶ್ರಯವು ಹವಾಮಾನ ಪ್ರತಿಕೂಲತೆಯ ವಿರುದ್ಧ ಹೋರಾಡುತ್ತದೆ ಮತ್ತು ಪೂಜಾ ಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತದೆ.
Advertisement