ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024: ಜನತೆಗೆ ಸಿಎಂ ಶಿಂಧೆ ಬಂಪರ್ ಗಿಫ್ಟ್; ಮುಂಬೈ ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಶುಲ್ಕ ಫ್ರೀ..!

ಇಂದು ನಡೆದ ಕೊನೆಯ ಸಚಿವ ಸಂಪುಟದಲ್ಲಿ ಸಿಎಂ ಏಕನಾಥ್​ ಶಿಂಧೆ ಅವರು ಇಂತಹದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ದಹಿಸಾರ್​, ಮುಳುನಾಡ್​, ವಾಶಿ, ಐರೋಲಿ ಮತ್ತು ತಿನ್ಹತ್ ನಾಕಾ ಈ ಐದು ಟೋಲ್​ಗಳಲ್ಲಿ ಇನ್ನು ಮುಂದೆ ಯಾವುದೇ ಟೋಲ್​ ಶುಲ್ಕವನ್ನು ಕಟ್ಟಬೇಕಾಗಿಲ್ಲ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
Updated on

ಮುಂಬೈ: ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಥೆಯವರು ಜನರಿಗೆ ಬಂಪರ್ ಉಡುಗೊರೆಯೊಂದನ್ನು ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಮುಂಬೈ ಪ್ರವೇಶಿಸುವ ಲಘು ವಾಹನಗಳು ಯಾವುದೇ ಟೋಲ್ ಶುಲ್ಕ ಕಟ್ಟಬೇಕಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಇಂದು ನಡೆದ ಕೊನೆಯ ಸಚಿವ ಸಂಪುಟದಲ್ಲಿ ಸಿಎಂ ಏಕನಾಥ್​ ಶಿಂಧೆ ಅವರು ಇಂತಹದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ದಹಿಸಾರ್​, ಮುಳುನಾಡ್​, ವಾಶಿ, ಐರೋಲಿ ಮತ್ತು ತಿನ್ಹತ್ ನಾಕಾ ಈ ಐದು ಟೋಲ್​ಗಳಲ್ಲಿ ಇನ್ನು ಮುಂದೆ ಯಾವುದೇ ಟೋಲ್​ ಶುಲ್ಕವನ್ನು ಕಟ್ಟಬೇಕಾಗಿಲ್ಲ. ಇಂದು ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಇದಲ್ಲದೆ, ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ದಿವಂಗತ ರತನ್ ಟಾಟಾ ಹೆಸರಿಡುವ ಪ್ರಸ್ತಾವನೆಗೂ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಥಾಣೆ, ರಾಯಗಡ್ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ಮೀನುಗಾರಿಕೆ, ಉಪ್ಪು ತಯಾರಿಕೆ ಮತ್ತು ಭತ್ತದ ಕೃಷಿಯಲ್ಲಿ ತೊಡಗಿರುವ ಕೃಷಿ ಸಮುದಾಯಕ್ಕಾಗಿ ನಿಗಮವನ್ನು ಸ್ಥಾಪಿಸಲು ಕೂಡ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಖ್ಯಾತ ನಟ ಸಯಾಜಿ ಶಿಂಧೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆ

ಸಮಾಜ ಕಾರ್ಯ ಕಾಲೇಜುಗಳ ಶಿಕ್ಷಕರಿಗೆ ವೃತ್ತಿ ಪ್ರಗತಿ ಯೋಜನೆ, ದಮನ ಗಂಗಾ ಏಕಮುಖ ಗೋದಾವರಿ ನದಿ ಜೋಡಣೆ ಯೋಜನೆ, ಅಷ್ಟಿ ಏತ ನೀರಾವರಿ ಯೋಜನೆಗೆ ಪರಿಷ್ಕೃತ ಅನುಮೋದನೆ, ವೈಜಾಪುರದ ಶನಿದೇವಗಾಂವ್ ಬ್ಯಾರೇಜ್ ಗೆ ಆಡಳಿತಾತ್ಮಕ ಅನುಮೋದನೆ,

ರಾಜ್ಯ ಕೃಷಿ ನಿಗಮದ ಭೂಮಿಯನ್ನು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸುವುದು, ಥಾಣೆ ಮಹಾನಗರ ಪಾಲಿಕೆಯ ಆಡಳಿತಾತ್ಮಕ ಕಟ್ಟಡಕ್ಕಾಗಿ ಪಂಚಪಖಾಡಿ ಪ್ರದೇಶದಲ್ಲಿ ಭೂಮಿ ಮತ್ತು ಕಿಡ್ಕಾಲಿಯಲ್ಲಿ ಹೈಬ್ರಿಡ್ ಸ್ಕಿಲ್ ಯೂನಿವರ್ಸಿಟಿಗೆ ಉಚಿತವಾಗಿ ಭೂಮಿ ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿದೆ.

ಮಹಾರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯನ್ನು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದಿಸಲಾಗಿದೆ. ಪುಣೆ ಮೆಟ್ರೋ ರೈಲು ಎರಡನೇ ಹಂತದ ರೈಲು ಮಾರ್ಗದ ಕಾಮಗಾರಿಗಳು, ಲಾತೂರ್ ಜಿಲ್ಲೆಯ ಕಿಲ್ಲಾರಿಯ ರೈತರ ಸಹಕಾರಿ ಅಂಶದ ಬಡ್ಡಿಯೊಂದಿಗೆ ಸಾಲ ಮನ್ನಾ ಮತ್ತು ತೊಂದರೆಗೀಡಾದ ಸಹಕಾರಿ ಜೀವನಾಧಾರ ನೀರಾವರಿ ಯೋಜನೆಗಳ ಬಾಕಿಯನ್ನು ಮನ್ನಾ ಮಾಡಲು ಸಂಪುಟ ಅನುಮೋದನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com