ಕೋಲ್ಕತ್ತಾ ಪೊಲೀಸ್ ಹೆಡ್ ಕ್ವಾರ್ಟರ್ಸ್ ಬಳಿ ಧರಣಿ ಮುಂದುವರಿಸಿದ ಕಿರಿಯ ವೈದ್ಯರು: ಆಯುಕ್ತರ ರಾಜೀನಾಮೆಗೆ ಒತ್ತಾಯ

ಕಿರಿಯ ವೈದ್ಯರು ಬ್ಯಾರಿಕೇಡ್‌ನಲ್ಲಿ ಪ್ರತಿಕೃತಿಯನ್ನು ಇರಿಸಿದ್ದರು. ನಾಗರಿಕರನ್ನು ರಕ್ಷಿಸುವ ಪೊಲೀಸ್ ಪಡೆಯ ಕರ್ತವ್ಯವನ್ನು ಒತ್ತಿಹೇಳುವುದು ಪ್ರತಿಕೃತಿಯ ಸಂಕೇತವಾಗಿದೆ ಎಂದರು.
ಕಿರಿಯ ವೈದ್ಯರ ಪ್ರತಿಭಟನೆ
ಕಿರಿಯ ವೈದ್ಯರ ಪ್ರತಿಭಟನೆ
Updated on

ಕೋಲ್ಕತ್ತಾ: ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರ ರಾಜೀನಾಮೆಗೆ ಆಗ್ರಹಿಸಿ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿ ಲಾಲ್ಬಜಾರ್‌ಗೆ ರ್ಯಾಲಿ ನಡೆಸಿದ ವಿವಿಧ ವೈದ್ಯಕೀಯ ಕಾಲೇಜುಗಳ ಕಿರಿಯ ವೈದ್ಯರು ಕಳೆದ ರಾತ್ರಿಯಿಂದ ಇಂದು ಮಂಗಳವಾರ ಬೆಳಗಿನವರೆಗೆ 12 ಗಂಟೆಗಳಿಗೂ ಹೆಚ್ಚು ಕಾಲ ಮೆರವಣಿಗೆಯನ್ನು ನಿಲ್ಲಿಸಿ ಸಮೀಪದ ಬಿಬಿ ಗಂಗೂಲಿ ಸ್ಟ್ರೀಟ್‌ನಲ್ಲಿಯೇ ಇದ್ದರು.

ಕಿರಿಯ ವೈದ್ಯರ ಜೊತೆ ಪ್ರತಿಭಟನೆಯಲ್ಲಿ ಹಲವು ಸಾಮಾನ್ಯರು ಮತ್ತು ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನಿನ್ನೆ ರಾತ್ರಿಯಿಡೀ ಲಾಲ್‌ಬಜಾರ್‌ನಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಬಿಬಿ ಗಂಗೂಲಿ ಸ್ಟ್ರೀಟ್‌ನಲ್ಲಿ ಕಳೆದರು, ಅವರನ್ನು ಮುಂದೆ ಸಾಗದಂತೆ ತಡೆಯಲಾಯಿತು.

ಕಿರಿಯ ವೈದ್ಯರು ಬ್ಯಾರಿಕೇಡ್‌ನಲ್ಲಿ ಪ್ರತಿಕೃತಿಯನ್ನು ಇರಿಸಿದ್ದರು. ನಾಗರಿಕರನ್ನು ರಕ್ಷಿಸುವ ಪೊಲೀಸ್ ಪಡೆಯ ಕರ್ತವ್ಯವನ್ನು ಒತ್ತಿಹೇಳುವುದು ಪ್ರತಿಕೃತಿಯ ಸಂಕೇತವಾಗಿದೆ ಎಂದರು.

ವೈದ್ಯರು ಸೇರಿದಂತೆ ಎಲ್ಲರಿಗೂ ನ್ಯಾಯ ಮತ್ತು ರಕ್ಷಣೆ ಕೋರಿ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ವೈದ್ಯರು ಲಾಲ್ಬಜಾರ್ ಕಡೆಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು, ಅದರಲ್ಲಿ ಗೋಯಲ್ ಅವರ ರಾಜೀನಾಮೆಗೆ ಕರೆ ನೀಡುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಬಿಬಿ ಗಂಗೂಲಿ ಬೀದಿಯಲ್ಲಿ ಅವರನ್ನು ತಡೆದ ನಂತರ ಅವರು ಪೊಲೀಸ್ ಆಯುಕ್ತರ ಪ್ರತಿಕೃತಿಯನ್ನು ದಹಿಸಿದರು.

ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಕೋರಿ ಘೋಷಣೆಗಳನ್ನು ಕೂಗಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com