ಕೋಲ್ಕತ್ತಾ ವೈದ್ಯೆಯ ಹತ್ಯೆ ಪ್ರಕರಣ: ಸರ್ಕಾರಕ್ಕೆ ಕಿರಿಯ ವೈದ್ಯರ ಪತ್ರ, ಸಭೆಯಲ್ಲಿ ಭಾಗಿಯಾಗುವಂತೆ ಸಿಎಂ ಗೆ ಮನವಿ

ಬುಧವಾರ ಸಂಜೆ 6 ಗಂಟೆಗೆ ಸಭೆಗೆ ಆಹ್ವಾನಿಸಿದ್ದ ಮುಖ್ಯ ಕಾರ್ಯದರ್ಶಿಗಳಿಗೆ ಪ್ರತಿಕ್ರಿಯೆ ನೀಡಿದ ವೈದ್ಯರು, ಸಭೆ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಅದನ್ನು ನೇರ ಪ್ರಸಾರ ಮಾಡಬೇಕೆಂದು ಮನವಿ ಮಾಡಿದ್ದಾರೆ.
Doctors stage a protest march against the rape and murder of a trainee doctor in Kolkata
ಪ್ರತಿಭಟನಾ ನಿರತ ವೈದ್ಯರುonline desk
Updated on

ಕೋಲ್ಕತ್ತಾ: ಕೋಲ್ಕತ್ತಾ ವೈದ್ಯೆಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ಸರ್ಕಾರಕ್ಕೆ ಪತ್ರ ಬರೆದಿದ್ದು, ಆರ್‌ಜಿ ಕರ್ ಆಸ್ಪತ್ರೆ ಬಿಕ್ಕಟ್ಟು ಪರಿಹರಿಸುವ ಸಭೆಗೆ 30 ಸದಸ್ಯರ ನಿಯೋಗಕ್ಕೆ ಅವಕಾಶ ನೀಡಬೇಕು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಈ ಸಭೆ ನಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಬುಧವಾರ ಸಂಜೆ 6 ಗಂಟೆಗೆ ಸಭೆಗೆ ಆಹ್ವಾನಿಸಿದ್ದ ಮುಖ್ಯ ಕಾರ್ಯದರ್ಶಿಗಳಿಗೆ ಪ್ರತಿಕ್ರಿಯೆ ನೀಡಿದ ವೈದ್ಯರು, ಸಭೆ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಅದನ್ನು ನೇರ ಪ್ರಸಾರ ಮಾಡಬೇಕೆಂದು ಮನವಿ ಮಾಡಿದ್ದಾರೆ.

"ನಾಬನ್ನಾದಲ್ಲಿ ಇಂದು ಸಂಜೆ 6 ಗಂಟೆಗೆ ಅಂದರೆ 11.09.2024 ಕ್ಕೆ ನಮ್ಮೊಂದಿಗೆ ಚರ್ಚೆಗೆ ಸೇರಲು 12-15 ಸಹೋದ್ಯೋಗಿಗಳನ್ನು ಒಳಗೊಂಡಿರುವ ನಿಮ್ಮ ನಿಯೋಗವನ್ನು ನಾವು ಆಹ್ವಾನಿಸುತ್ತೇವೆ. ನಿಮ್ಮ ನಿಯೋಗದ ಸದಸ್ಯರ ಪಟ್ಟಿಯನ್ನು ದಯವಿಟ್ಟು ಇಮೇಲ್ ಮೂಲಕ ತಿಳಿಸಬಹುದು. ನಾವು ಎದುರುನೋಡುತ್ತೇವೆ ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಫಲಪ್ರದ ಸಂವಾದದ ಭರವಸೆ ಇದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಪತ್ರದಲ್ಲಿ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ, ಪ್ರತಿಭಟನಾನಿರತ ವೈದ್ಯರು ಮಾತುಕತೆಗೆ ಆಹ್ವಾನವನ್ನು "ಸೂಕ್ತ ವೇದಿಕೆ" ಮೂಲಕ ಕಳುಹಿಸಲು ಕರೆ ನೀಡಿದ್ದರು. ರಾಜ್ಯ ಸರ್ಕಾರದ ಪ್ರಸ್ತುತ ಸಂವಹನ ವಿಧಾನಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಸೂಕ್ತ ವಿಧಾನದಲ್ಲಿ ಮಾತುಕತೆ ನಡೆಯುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ವೈದ್ಯರು ಹೇಳಿದ್ದರು.

Doctors stage a protest march against the rape and murder of a trainee doctor in Kolkata
ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಪ್ರತಿಭಟನೆ ಮುಂದುವರಿಸಿದ ಕಿರಿಯ ವೈದ್ಯರು; ಸ್ವಾಸ್ಥ್ಯ ಭವನದ ಮುಂದೆ ಧರಣಿ

ಆದಾಗ್ಯೂ, ಪ್ರತಿಭಟನಾ ನಿರತ 10 ಸದಸ್ಯರ ನಿಯೋಗದ ಸರ್ಕಾರಿ ಸಲಹೆಯನ್ನು ತಿರಸ್ಕರಿಸಿದ್ದಾರೆ, ಬದಲಿಗೆ 25-35 ಪ್ರತಿನಿಧಿಗಳನ್ನು ಒಳಗೊಂಡ ನಿಯೋಗಕ್ಕೆ ಒತ್ತಾಯಿಸಿದ್ದಾರೆ.

ಬ್ಯಾನರ್ಜಿ ಅವರಿಗೆ ಕಳಿಸಿರುವ ತಮ್ಮ ಮೇಲ್‌ನಲ್ಲಿ ವೈದ್ಯರು "ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ" ಸಭೆಗೆ ಮುಕ್ತರಾಗಿರುವುದಾಗಿ ತಿಳಿಸಿದ್ದು, ಸಂಪೂರ್ಣ ಚರ್ಚೆಯನ್ನು ಲೈವ್ ಸ್ಟ್ರೀಮ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮೃತ ವೈದ್ಯರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಮಂಗಳವಾರದಂದು ವೈದ್ಯರು ಕೆಲಸಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಧಿಕ್ಕರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com