ಕೂಚ್ಬೆಹಾರ್: 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಪಶ್ಚಿಮ ಬಂಗಾಳ ಪ್ರವೇಶಿಸಿದ ನಂತರ ಎರಡು ದಿನಗಳ ವಿರಾಮ ತೆಗೆದುಕೊಂಡಿದ್ದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಮಧ್ಯಾಹ್ನ ನವದೆಹಲಿಗೆ ತೆರಳಿದರು.
ಜನವರಿ 14 ರಂದು ಮಣಿಪುರದಿಂದ ಪ್ರಾರಂಭವಾದ ರಾಹುಲ್ ಗಾಂಧಿ ನೇತೃತ್ವದ ಈ ಯಾತ್ರೆಯು ಇಂದು ಬೆಳಗ್ಗೆ ಅಸ್ಸಾಂನಿಂದ ಪಶ್ಚಿಮ ಬಂಗಾಳದ ಕೂಚ್ಬೆಹಾರ್ ಜಿಲ್ಲೆಯನ್ನು ಪ್ರವೇಶಿಸಿತು.
ರಾಹುಲ್ ಗಾಂಧಿ ಅವರು ಕೂಚ್ಬೆಹಾರ್ನಲ್ಲಿ ರೋಡ್ಶೋ ನಡೆಸಿದ ನಂತರ ಯಾತ್ರೆಗೆ ಎರಡು ದಿನಗಳ ವಿರಾಮ ನೀಡಿದ್ದಾರೆ. ಅಲಿಪುರ್ದೌರ್ನ ಫಲಕಟಾದಲ್ಲಿ ಯಾತ್ರೆ ಸ್ಥಗಿತಗೊಂಡಿದೆ.
"ರಾಹುಲ್ ಗಾಂಧಿ ಅವರು ಅಲಿಪುರ್ದೌರ್ನಲ್ಲಿರುವ ಹಸಿಮಾರಾ ವಾಯುನೆಲೆಯಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಿದರು. ಅವರಿಗೆ ಕೆಲವು ತುರ್ತು ಕೆಲಸಗಳಿವೆ" ಎಂದು ರಾಜ್ಯ ಕಾಂಗ್ರೆಸ್ ನಾಯಕ ಸುಭಾಂಕರ್ ಸರ್ಕಾರ್ ಅವರು ಹೇಳಿದ್ದಾರೆ.
"ಜನವರಿ 28 ರಂದು ಯಾತ್ರೆ ಪುನರಾರಂಭಗೊಳ್ಳಲಿದೆ. ರಾಹುಲ್ ಗಾಂಧಿ ವಾಪಸು ಬಂದು ಯಾತ್ರೆ ಮುನ್ನೆಡೆಸಲಿದ್ದಾರೆ" ಎಂದು ಸರ್ಕಾರ ತಿಳಿಸಿದ್ದಾರೆ.
Advertisement