79ನೇ ಸ್ವಾತಂತ್ರ್ಯೋತ್ಸವ: ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ, Operation Sindoor ಕೊಂಡಾಡಿದ ಮೋದಿ

ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
PM modi
ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ
Updated on

ನವದೆಹಲಿ: ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.

ಪ್ರಧಾನಿ ಮೋದಿಯವರು ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಸತತ 12ನೇ ಭಾಷಣ ಮಾಡುತ್ತಿದ್ದಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಥೀಮ್ 'ನಯಾ ಭಾರತ್​' ಆಗಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ದೇಶವನ್ನು ಮುನ್ನಡೆಸುವ ಗುರಿ ಹೊಂದಲಾಗಿದೆ.

ಪ್ರಧಾನಿ ಮೋದಿಯವರನ್ನು ಹಿರಿಯ ಸರ್ಕಾರ ಮತ್ತು ಸೇನಾ ಅಧಿಕಾರಿಗಳು ಬರಮಾಡಿಕೊಳ್ಳುವುದರೊಂದಿಗೆ ಸಮಾರಂಭ ಪ್ರಾರಂಭವಾಗಿದೆ. ಬಳಿಕ ಸೇನಾ ಗೌರವ ವಂದನೆ ಸ್ವೀಕಾರ ನಡೆಯಿತು. ನಂತರ ಧ್ವಜಾರೋಹಣ ನೆರೇರಿಸಿದ ಮೋದಿಯವರು ದೇಶದ ಜನತೆಯನ್ನುದ್ದೇಶಿಸಿ ಸತತ 12ನೇ ಬಾರಿಗೆ ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಿದ್ದಾರೆ.

ನನ್ನ ಪ್ರೀತಿಯ ದೇಶದ ಪ್ರಜೆಗಳೇ ಈ ಸ್ವಾತಂತ್ರ್ಯೋತ್ಸವವು 140 ಕೋಟಿ ಜನರ ನಿರ್ಣಯಗಳ ಹಬ್ಬ. ಇದು ಹೆಮ್ಮೆ ಮತ್ತು ಸಂತೋಷದಿಂದ ತುಂಬಿದ ಸಾಮೂಹಿಕ ಸಾಧನೆಗಳ ಕ್ಷಣವಾಗಿದೆ. ರಾಷ್ಟ್ರವು ನಿರಂತರವಾಗಿ ಏಕತೆಯ ಮನೋಭಾವವನ್ನು ಬಲಪಡಿಸುತ್ತಿದೆ. ಇಂದು, 140 ಕೋಟಿ ನಾಗರಿಕರು ತಿರಂಗದ ಬಣ್ಣಗಳಲ್ಲಿ ಮುಳುಗಿದ್ದಾರೆ. 75 ವರ್ಷಗಳಿಂದ, ಭಾರತದ ಸಂವಿಧಾನವು ದೀಪಸ್ತಂಭದಂತೆ ನಮಗೆ ದಾರಿ ತೋರಿಸುತ್ತಿದೆ.

ಇಂದು ಕೆಂಪು ಕೋಟೆಯಿಂದ ದೇಶಕ್ಕೆ ಮಾರ್ಗದರ್ಶನ ನೀಡುವ ಮತ್ತು ದೇಶಕ್ಕೆ ನಿರ್ದೇಶನ ನೀಡುವ ಸಂವಿಧಾನದ ನಿರ್ಮಾತೃಗಳಿಗೆ ನಾನು ನನ್ನ ಗೌರವಯುತ ಗೌರವವನ್ನು ಸಲ್ಲಿಸುತ್ತೇನೆ. ಇಂದು ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125 ನೇ ಜನ್ಮ ದಿನಾಚರಣೆಯನ್ನೂ ಕೂಡ ಆಚರಿಸುತ್ತಿದ್ದೇವೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಭಾರತದ ಸಂವಿಧಾನಕ್ಕಾಗಿ ತ್ಯಾಗ ಮಾಡಿದ ದೇಶದ ಮೊದಲ ಮಹಾನ್ ವ್ಯಕ್ತಿ. ಸಂವಿಧಾನಕ್ಕಾಗಿ ತ್ಯಾಗ ಮಾಡಿದ್ದಾರೆ.

PM modi
79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

370ನೇ ವಿಧಿಯ ಗೋಡೆಯನ್ನು ಕೆಡವಿ ಒಂದು ದೇಶ, ಒಂದು ಸಂವಿಧಾನದ ಮಂತ್ರವನ್ನು ಜೀವಂತಗೊಳಿಸಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ನಿಜವಾದ ಗೌರವ ಸಲ್ಲಿಸಿದ್ದೇವೆ. ಇಂದು ಕೆಂಪು ಕೋಟೆಯಲ್ಲಿ ಅನೇಕ ವಿಶೇಷ ಗಣ್ಯರು ಇದ್ದಾರೆ. ದೂರದ ಹಳ್ಳಿಗಳ ಪಂಚಾಯತ್ ಸದಸ್ಯರು, ಪ್ರತಿನಿಧಿಗಳು, ಕ್ರೀಡಾ ಕ್ಷೇತ್ರದ ಜನರು, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳು ಇಲ್ಲಿದ್ದಾರೆ. ಇಂದು, ಕೆಂಪು ಕೋಟೆಯು ತಂತ್ರಜ್ಞಾನದ ಮೂಲಕ ಭಾರತದೊಂದಿಗೆ ಸಂಪರ್ಕ ಹೊಂದಿದೆ.

ಕೆಲವು ದಿನಗಳಲ್ಲಿ, ನಾವು ನೈಸರ್ಗಿಕ ವಿಕೋಪಗಳು, ಭೂಕುಸಿತಗಳು, ಮೋಡ ಸ್ಫೋಟಗಳು ಮತ್ತು ಇತರ ಅನೇಕ ವಿಪತ್ತುಗಳನ್ನು ಎದುರಿಸುತ್ತಿದ್ದೇವೆ. ಸಂತ್ರಸ್ತ ಜನರೊಂದಿಗೆ ನಮ್ಮ ಸಹಾನುಭೂತಿ ಇದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯಾಚರಣೆಗಳು, ಪರಿಹಾರ ಪ್ರಯತ್ನಗಳು ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಪೂರ್ಣ ಶಕ್ತಿಯಿಂದ ಒಟ್ಟಾಗಿ ಕೆಲಸ ಮಾಡುತ್ತಿವೆ. ಇಂದು, ಕೆಂಪು ಕೋಟೆಯ ಕೋಟೆಯಿಂದ, ಆಪರೇಷನ್ ಸಿಂಧೂರ್‌ನ ಧೈರ್ಯಶಾಲಿ ಸೈನಿಕರಿಗೆ ನಮನ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದೆ ಎಂದು ಹೇಳಿದರು.

ಏಪ್ರಿಲ್ 22 ರಂದು, ಗಡಿಯಾಚೆಯಿಂದ ಬಂದಭಯೋತ್ಪಾದಕರು ಪಹಲ್ಗಮ್‌ಗೆ ಬಂದು ಅವರ ಧರ್ಮವನ್ನು ಕೇಳಿದ ನಂತರ ಜನರನ್ನು ಕೊಂದರು. ಪಹಲ್ಗಾಮ್ ಹತ್ಯಾಕಾಂಡದಿಂದ ಇಡೀ ವಿಶ್ವವೇ ಆಘಾತಕ್ಕೊಳಗಾಯಿತು. ಆಪರೇಷನ್ ಸಿಂಧೂರ್ ಮೂಲಕ ಆಕ್ರೋಶ ಹೊರಹಾಕಲಾಯಿತು. ಪಾಕಿಸ್ತಾನದಲ್ಲಿ ನಾವು ನಡೆಸಿದ ಆಪರೇಷನ್ ಸಿಂಧೂರ್ ದೊಡ್ಡ ವಿನಾಶವನ್ನೇ ತಂದಿದೆ. ಇದರ ಬಳಿಕ ಪ್ರತೀ ನಿತ್ಯ ಹೊಸ ಬೆಳವಣಿಗೆಗಳು ಕಂಡು ಬರುತ್ತಿವೆ. ಈ ಕೆಂಪು ಕೋಟೆಯಿಂದ, ಆಪರೇಷನ್ ಸಿಂದೂರ್‌ನ ವೀರರಿಗೆ ನಮಸ್ಕರಿಸಲು ನನಗೆ ಅವಕಾಶ ಸಿಗುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ.

ನಮ್ಮ ವೀರ ಯೋಧರು ಶತ್ರುವನ್ನು ಅವನ ಕಲ್ಪನೆಗೂ ಮೀರಿ ಶಿಕ್ಷಿಸಿದರು. ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತವನ್ನು ನೀಡಿದ್ದೇವೆ. ದೇಶದ ಮೇಲೆ ಕೆಂಗಣ್ಣು ಬೀರುವವರ ವಿರುದ್ಧ ತಂತ್ರ, ಗುರಿ ಮತ್ತು ಸಮಯವನ್ನು ಸೇನೆಯೇ ನಿರ್ಧರಿಸುತ್ತದೆ. ನಮ್ಮ ಸೇನಾ ಪಡೆಗಳು ಹಲವಾರು ದಶಕಗಳಿಂದ ಎಂದಿಗೂ ಮಾಡದ ಕೆಲಸವನ್ನು ಮಾಡಿದರು. ನಾವು ಶತ್ರುಗಳ ನೆಲಕ್ಕೆ ನೂರಾರು ಕಿಲೋಮೀಟರ್ ಪ್ರವೇಶಿಸಿ ಉಗ್ರರ ನೆಲೆಗಳನ್ನು ನೆಲಸಮಗೊಳಿಸಿದ್ದೇವೆ... ಪಾಕಿಸ್ತಾನದಲ್ಲಿ ಎಷ್ಟು ಮಟ್ಟದಲ್ಲಿ ವಿನಾಶ ಎದುರಾಗಿದೆ ಎಂದರೆ ಪ್ರತಿದಿನ ಹೊಸ ಹೊಸ ಮಾಹಿತಿಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com