
ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಗುರುವಾರ ಮಧ್ಯಾಹ್ನದವರೆಗೆ ಸುಮಾರು 600 ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.
10 ದಿನಗಳ ಉತ್ಸವದಲ್ಲಿ ಒಂದೂವರೆ ದಿನ ನಂತರ ಐದು ಹಾಗೂ ಏಳನೇ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಗಣೇಶ ಮೂರ್ತಿಗಳನ್ನು ವಿಸರ್ಜಿಸುತ್ತಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಇದುವರೆಗೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಉತ್ಸವದ ಎರಡನೇ ದಿನವಾದ ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು 583 ' ಗಣಪತಿ ಮೂರ್ತಿಗಳನ್ನು ಸಮುದ್ರ, ಕೆರೆ ಮತ್ತಿತರ ಕಡೆಗಳಲ್ಲಿ ವಿಸರ್ಜಿಸಲಾಗಿದೆ. ಇವುಗಳಲ್ಲಿ 575 ಮನೆಗಳಲ್ಲಿ ಇಡಲಾದ ಗಣಪತಿ ಮೂರ್ತಿಗಳು ಮತ್ತು ಮೂರು ಸಾರ್ವಜನಿಕ ಗಣೇಶೋತ್ಸವದ ಗಣಪತಿ ಮೂರ್ತಿಗಳು ಸೇರಿವೆ.
583 ಗಣಪತಿ ಮೂರ್ತಿಗಳ ಪೈಕಿ ಮನೆಯಲಲಿ ಇಟ್ಟಿದ್ದ 321 ಮೂರ್ತಿಗಳು, ಎರಡು ಸಾರ್ವಜನಿಕ ಗಣೇಶೋತ್ಸವದ ಮೂರ್ತಿಗಳು ಸೇರಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ BMC ಈ ವರ್ಷ 70 ಜಲಮೂಲಗಳು ಮತ್ತು 288 ಕೃತಕ ಕೊಳಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಹಬ್ಬವು ಗಣೇಶ ಚತುರ್ಥಿಯಂದು (ಆಗಸ್ಟ್ 27) ಪ್ರಾರಂಭವಾಯಿತು. ಅನಂತ ಚತುರ್ದಶಿ (ಸೆಪ್ಟೆಂಬರ್ 6) ರಂದು ಕೊನೆಗೊಳ್ಳುತ್ತದೆ.
ಪರಿಸರವನ್ನು ಸಂರಕ್ಷಿಸುವ ಕ್ರಮಗಳ ಭಾಗವಾಗಿ, ನಾಗರಿಕರು ತಮ್ಮ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಡ್ರಮ್ ಅಥವಾ ಬಕೆಟ್ಗಳಲ್ಲಿ ವಿಸರ್ಜಿಸುವಂತೆ ನಾಗರಿಕ ಸಂಸ್ಥೆ ಸೂಚಿಸಿದೆ. ಆದರೆ 6 ಅಡಿಗಿಂತ ಕಡಿಮೆ ಎತ್ತರದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳನ್ನು ಕೃತಕ ಕೊಳಗಳಲ್ಲಿ ವಿಸರ್ಜಿಸಬೇಕು ಎಂದು ಹೇಳಿದೆ.
Advertisement