40 ಅಡಿ ಆಳದ ಬಾವಿಗೆ ಬಿದ್ದ ಗಂಡನ ರಕ್ಷಿಸಿದ 56 ವರ್ಷದ ಮಹಿಳೆ!

ಕೇರಳದ ಎರ್ನಾಕುಲಂ ಜಿಲ್ಲೆಯ ಪಿರವೋಮ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯ ಹಿಂದಿನ ಬಾವಿಗೆ ಬಿದ್ದಿದ್ದ ಗಂಡನನ್ನು ರಕ್ಷಿಸಿಲು ಮಹಿಳೆಗೆ ಕೂಡ ಬಾವಿಗೆ ಇಳಿದು ಅತ್ಯಂತ ಚಾಕಚಕ್ಯತೆಯಿಂದ ಗಂಡನನ್ನು ರಕ್ಷಿಸಿದ್ದಾರೆ.
The woman who climbed into a well and saved her husband
ಬಾವಿಗೆ ಬಿದ್ದ ವೃದ್ದ ದಂಪತಿ ರಕ್ಷಣೆ (ಸಾಂದರ್ಭಿಕ ಚಿತ್ರ)
Updated on

ಕೊಚ್ಚಿನ್: ಬಾವಿಗೆ ಬಿದ್ದ ಗಂಡನ ಪ್ರಾಣ ಉಳಿಸಲು ತಾನೂ ಕೂಡ ಬಾವಿಗೆ ಬಿದ್ದು ಕೇರಳದ ಮಹಿಳೆಯೊಬ್ಬರು ಸಾಹಸ ಪ್ರದರ್ಶಿಸಿವ ಘಟನೆ ವರದಿಯಾಗಿದೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಪಿರವೋಮ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯ ಹಿಂದಿನ ಬಾವಿಗೆ ಬಿದ್ದಿದ್ದ ಗಂಡನನ್ನು ರಕ್ಷಿಸಿಲು ಮಹಿಳೆಗೆ ಕೂಡ ಬಾವಿಗೆ ಇಳಿದು ಅತ್ಯಂತ ಚಾಕಚಕ್ಯತೆಯಿಂದ ಗಂಡನನ್ನು ರಕ್ಷಿಸಿದ್ದಾರೆ.

ಕಾಳು ಮೆಣಸು ಕೀಳುವಾಗ ಮನೆಯ ಹಿಂದಿನ ಬಾವಿಗೆ ಬಿದ್ದಿದ್ದ ತನ್ನ ಗಂಡನನ್ನು 56 ವರ್ಷದ ಮಹಿಳೆಯೊಬ್ಬರು ಬಾವಿಗಿಳಿದು ರಕ್ಷಿಸಿದ್ದಾರೆ. 64 ವರ್ಷದ ರಮೇಶ್ ಎಂದು ಗುರುತಿಸಲಾದ ವ್ಯಕ್ತಿಯು ಬಳ್ಳಿಗಳಿಂದ ಕರಿಮೆಣಸು ಕೀಳುವಲ್ಲಿ ನಿರತರಾಗಿದ್ದರು. ಈ ವೇಳೆ ಅವರು ನಿಂತಿದ್ದ ಏಣಿ ಜಾರಿ ಬಿದ್ದಿದ್ದು, ಮರ ಬಾವಿಯ ಹತ್ತಿರ ಇದ್ದುದರಿಂದ ರಮೇಶ್ ಬಾವಿಯೊಳಗೆ ಬಿದ್ದಿದ್ದಾರೆ. ಬಾವಿಗೆ ಬೀಳುತ್ತಲೇ ಗಂಡ ರಮೇಶ್ ಕೂಗಿ ಕೊಂಡಿದ್ದು, ಗಂಡನ ಕೂಗು ಕೇಳಿದ ಪತ್ನಿ ಗಾಬರಿಯಿಂದ ಓಡಿ ಬಂದು ಗಂಡ ಬಾವಿಗೆ ಬಿದ್ದಿದ್ದನ್ನು ಗಮನಿಸಿದ್ದಾರೆ.

ಸ್ವತಃ ಬಾವಿಗಿಳಿದ ಪತ್ನಿ

ಇನ್ನು ಗಂಡ ಬಾವಿಗೆ ಬಿದ್ದಿರುವುದನ್ನು ಕಂಡ ಪತ್ನಿ ಆತನನ್ನು ರಕ್ಷಿಸಲೇಬೇಕು ಎಂದು ಪಣತೊಟ್ಟು ಕೂಗುತ್ತಾ ಕೂಗುತ್ತಾ, ಪದ್ಮಾ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಹಗ್ಗವನ್ನು ಬಳಸಿ ಬಾವಿಯೊಳಗೆ ಪ್ರವೇಶಿಸಿದರು. ಸುಮಾರು ಐದು ಅಡಿ ನೀರಿದ್ದ ಬಾವಿಯ ತಳವನ್ನು ತಲುಪಿದ ನಂತರ, ಅವರು ರಮೇಶ ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಆ ಹೊತ್ತಿಗಾಗಲೇ ಸ್ಥಳೀಯರು ಕೂಡ ಓಡಿ ಬಂದಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಅಗ್ನಿಶಾಮಕ ದಳ ಆಗಮಿಸಿ ಬಾವಿಯಲ್ಲಿದ್ದ ರಮೇಶ್ ಮತ್ತು ಅವರ ಪತ್ನಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ.

The woman who climbed into a well and saved her husband
ವಿದ್ಯಾರ್ಥಿ ಜೊತೆ 'ತರಗತಿಯಲ್ಲೇ ಮದುವೆ' ವಿಡಿಯೋ ವೈರಲ್ ಬೆನ್ನಲ್ಲೇ ರಾಜೀನಾಮೆಗೆ ಮುಂದಾದ ಪಶ್ಚಿಮ ಬಂಗಾಳದ ಪ್ರಾಧ್ಯಾಪಕಿ!

ಅಗ್ನಿಶಾಮಕ ದಳದ ಸ್ಥಳೀಯ ಅಧಿಕಾರಿ ಪ್ರಫುಲ್, ಬಾವಿಯಲ್ಲಿದ್ದ ಪದ್ಮಾ ಅವರನ್ನು ಕರೆದು ಎಲ್ಲವೂ ಸರಿಯಾಗಿದೆಯೇ ಎಂದು ಕೇಳಿದರು. ಅಂತೆಯೇ ಯಾರೂ ಕೆಳಗೆ ಇಳಿಯುವ ಅಗತ್ಯವಿಲ್ಲ, ಬದಲಾಗಿ ಬಲೆ ಕಳುಹಿಸಬೇಕೆಂದು ಆಕೆ ನಮಗೆ ಹೇಳಿದರು. ಆದ್ದರಿಂದ, ನಾವು ಬಲೆ ಇಳಿಸಿದೆವು; ಅವರು ಮೊದಲು ತಮ್ಮ ಪತಿ ರಮೇಶ ಅವರನ್ನು ಬಲೆಯೊಳಗೆ ಸೇರಿಸಿ ಮೇಲೆತ್ತುವಂತೆ ಸೂಚಿಸಿದರು. ಅದರಂತೆ ಅಗ್ನಿಶಾಮಕ ಸಿಬ್ಬಂದಿ ನಂತರ, ನಾವು ಅವನನ್ನು ಮೇಲಕ್ಕೆ ಎಳೆದೆವು. ನಂತರ ಆಕೆ ಮೇಲಕ್ಕೆ ಬಂದತು. ಹಗ್ಗದ ಮೇಲೆ 40 ಅಡಿ ಬಾವಿಗೆ ಇಳಿದ ಕಾರಣ ಆಕೆಯ ಕೈಗಳು ಸಂಪೂರ್ಣವಾಗಿ ಗಾಯಗೊಂಡಿದ್ದವು.

ರಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅವರು ಚೆನ್ನಾಗಿದ್ದಾನೆ. ಆದರೆ, ಪದ್ಮಾ ಅವರ ಧೈರ್ಯಶಾಲಿ ಕೃತ್ಯವನ್ನು ಸಂಪೂರ್ಣವಾಗಿ ಪ್ರಶಂಸಿಸಬೇಕು ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಗ್ನಿಶಾಮಕ ದಳದ ಅಧಿಕಾರಿ ಪ್ರಫುಲ್ ಹೇಳಿದರು.

ಅವರು ಸುಮಾರು 40 ನಿಮಿಷಗಳಲ್ಲಿ ಸ್ಥಳವನ್ನು ತಲುಪಿದರು, ಇಬ್ಬರೂ ಸುಮಾರು 20 ನಿಮಿಷಗಳ ಕಾಲ ಒಳಗೆ ಕಾಯಬೇಕಾಯಿತು ಎಂದು ಪ್ರಫುಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com