ತಮಿಳುನಾಡಿನಲ್ಲಿ ಕೊನೆಯ ನಕ್ಸಲ್ ಸಂತೋಷ್‌ ಬಂಧನ; ಕೇರಳದಲ್ಲಿ ಕೆಂಪು ಉಗ್ರರ ಯುಗಾಂತ್ಯ!

ಸಂತೋಷ್ ಕಳೆದ ಹಲವು ವರ್ಷಗಳಿಂದ ಮಾವೋವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಕಳೆದ ವರ್ಷ ವಿವಿಧ ಸ್ಥಳಗಳಿಂದ ಎಟಿಎಸ್‌ನಿಂದ ಬಂಧನಕ್ಕೊಳಗಾಗಿದ್ದ ನಕ್ಸಲ್ ಮುಖಂಡರಾದ ಸಿಪಿ ಮೊಯ್ದೀನ್, ಸೋಮನ್ ಮತ್ತು ಮನೋಜ್ ಅವರ ನಿಕಟ ಸಹಚರರಾಗಿದ್ದರು.
Casual images
ಸಾಂದರ್ಭಿಕ ಚಿತ್ರ
Updated on

ಕೊಚ್ಚಿ: ಭಯೋತ್ಪಾದನಾ ನಿಗ್ರಹ ದಳವು ತಮಿಳುನಾಡಿನಲ್ಲಿ ಕೊನೆಯ ನಕ್ಸಲೈಟ್ ಸಂತೋಷ್‌ನನ್ನು ಬಂಧಿಸಿರುವುದರಿಂದ ಕೇರಳದಲ್ಲಿ ಕೆಂಪು ಉಗ್ರರ ಯುಗಾಂತ್ಯವಾದ್ದಂತಿದೆ. ಕೊಯಮತ್ತೂರು ಮೂಲದ ಈತನನ್ನು ಶುಕ್ರವಾರ ಹೊಸೂರು ಬಳಿಯ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ.

ಸಂತೋಷ್ ಕಳೆದ ಹಲವು ವರ್ಷಗಳಿಂದ ಮಾವೋವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಕಳೆದ ವರ್ಷ ವಿವಿಧ ಸ್ಥಳಗಳಿಂದ ಎಟಿಎಸ್‌ನಿಂದ ಬಂಧನಕ್ಕೊಳಗಾಗಿದ್ದ ನಕ್ಸಲ್ ಮುಖಂಡರಾದ ಸಿಪಿ ಮೊಯ್ದೀನ್, ಸೋಮನ್ ಮತ್ತು ಮನೋಜ್ ಅವರ ನಿಕಟ ಸಹಚರರಾಗಿದ್ದರು.

ಕೇರಳದ ಹಲವು ನಕ್ಸಲ್ ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಎಸ್ ಐಟಿ ತಂಡ ಹೊಸೂರಿನಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದೆ.

ಸಂತೋಷ್‌ನನ್ನು ಶನಿವಾರ ಎರ್ನಾಕುಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರನ್ನು ಸಶಸ್ತ್ರ ಪೊಲೀಸ್ ತಂಡವು ನ್ಯಾಯಾಲಯಕ್ಕೆ ಕರೆದೊಯ್ಯಿತು. ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು. ಆತನ ಕಸ್ಟಡಿಗೆ ಕೋರಿ ಎಟಿಎಸ್ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ.

Casual images
ವಿಕ್ರಂ ಗೌಡ ಎನ್‌ಕೌಂಟರ್ ವೇಳೆ ನಾಪತ್ತೆಯಾಗಿದ್ದ ನಕ್ಸಲ್ ಕೋಟೆ ಹೊಂಡ ರವಿ ಶರಣಾಗತಿ

ಸಂತೋಷ್ ವಯನಾಡ್ ಅರಣ್ಯದಲ್ಲಿ ಸಕ್ರಿಯವಾಗಿದ್ದ ಕಬನಿದಳಂನ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (PLGA) ಭಾಗವಾಗಿದ್ದರು. ಸಂತೋಷ್ ಬಂಧನದೊಂದಿಗೆ, ಕೇರಳದಲ್ಲಿ ಕಾರ್ಯಾಚರಣೆ ನಡೆಸಿದ ಎಲ್ಲಾ ನಕ್ಸಲ್ ಕಾರ್ಯಕರ್ತರನ್ನು ಪೊಲೀಸರು ಮತ್ತು ಇತರ ಸಂಸ್ಥೆಗಳು ಬಂಧಿಸಿವೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೆಲವು ನಕ್ಸಲೀಯರು ಹತರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com