Uttar Pradesh: ರಾಜ್ಯಾದ್ಯಂತ ದೇವಾಲಯಗಳ ನವೀಕರಣ, ಜೀರ್ಣೋದ್ಧಾರಕ್ಕೆ ಸರ್ಕಾರ ಯೋಜನೆ

ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಾದ್ಯಂತ ದೇವಾಲಯಗಳು, ಭೃಗು ಮತ್ತು ದೂರ್ವಾಸರ ಆಶ್ರಮಗಳು ಮತ್ತು ಜೈನ ದೇವಾಲಯವನ್ನು ನವೀಕರಿಸುವ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.
plans to renovate temples across state
ದೇವಾಲಯಗಳ ನವೀಕರಣ ಯೋಜನೆ (ಸಂಗ್ರಹ ಚಿತ್ರ)
Updated on

ಲಖನೌ: ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಇರುವ ದೇವಾಲಯಗಳನ್ನು ನವೀಕರಿಸುವ ಮತ್ತು ಜೀರ್ಣೋದ್ಧಾರ ಮಾಡುವ ಯೋಜನೆಯನ್ನು ಪ್ರಕಟಿಸಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಾದ್ಯಂತ ದೇವಾಲಯಗಳು, ಭೃಗು ಮತ್ತು ದೂರ್ವಾಸರ ಆಶ್ರಮಗಳು ಮತ್ತು ಜೈನ ದೇವಾಲಯವನ್ನು ನವೀಕರಿಸುವ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.

ಈ ಉಪಕ್ರಮವು ಪೂರ್ವ ಉತ್ತರ ಪ್ರದೇಶದ ಮೇಲೆ ವಿಶೇಷ ಗಮನ ಹರಿಸಲಿದ್ದು, ಪ್ರವಾಸೋದ್ಯಮ ಇಲಾಖೆಯು ಈ ಸ್ಥಳಗಳನ್ನು ಪರಂಪರೆಯ ಪ್ರವಾಸೋದ್ಯಮ ಕೇಂದ್ರಗಳಾಗಿ ಪರಿವರ್ತಿಸಲು ವಿವರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಯೋಜನೆಯು ಬಲ್ಲಿಯಾದಲ್ಲಿನ ಭೃಗು ಆಶ್ರಮದಲ್ಲಿರುವ ಚಿತ್ರಗುಪ್ತ ದೇವಾಲಯದ ಸೌಂದರ್ಯೀಕರಣ, ತೆಂಡುವಾ ಪಟ್ಟಿ ಫರ್ಸತಾರ್ ಮೌಜಾ ಹೋಲ್ಪುರದಲ್ಲಿರುವ ಹನುಮಾನ್ ದೇವಾಲಯ ಸಂಕೀರ್ಣ ಮತ್ತು ಬಸಂತ್‌ಪುರ ಗ್ರಾಮದ ಉದಾಸಿನ್ ಮಠದ ಅಭಿವೃದ್ಧಿಯನ್ನು ಒಳಗೊಂಡಿದೆ.

plans to renovate temples across state
Gangsters Fielding: ಗ್ಯಾಂಗ್ ಲೀಡರ್ ಪತ್ನಿಯೊಂದಿಗೇ ಅಕ್ರಮ ಸಂಬಂಧ, ತಮ್ಮದೇ ಸದಸ್ಯನ ಹತ್ಯೆಗೆ 40 ಮಂದಿಯ ಸ್ಕೆಚ್!

ಅಲ್ಲದೆ ಅಜಮ್‌ಗಢದಲ್ಲಿ, ಈ ಯೋಜನೆಯು ಮಹಾರಾಜ್‌ಗಂಜ್‌ನಲ್ಲಿರುವ ಭೈರವ ಬಾಬಾ ಸ್ಥಳ ಮತ್ತು ಮಿಶ್ರಾಪುರದ ರಾಮ ಜಾನಕಿ ದೇವಾಲಯವನ್ನು ಒಳಗೊಳ್ಳುತ್ತದೆ ಎಂದು ಹೇಳಲಾಗಿದೆ.

ಇತರ ತಾಣಗಳಲ್ಲಿ ಫುಲ್ಪುರ್ ಪವಾಯಿ (ಅಜಮ್‌ಗಢ) ನಲ್ಲಿರುವ ದೂರ್ವಾಸ ಋಷಿ ಆಶ್ರಮ, ದುವಾರಿ ಗ್ರಾಮ (ಮೌ) ದಲ್ಲಿರುವ ಶ್ರೀ ವೀರ ಬಾಬಾ ಬ್ರಹ್ಮ ಸ್ಥಾನ ಮತ್ತು ಕನ್ನೌಜ್‌ನ ಸದರ್ ನಲ್ಲಿರುವ ಫೂಲ್ಮತಿ ದೇವಿ ದೇವಾಲಯ ಸೇರಿವೆ. ಹೆಚ್ಚುವರಿಯಾಗಿ, ಧನ್ನಿಪುರ, ಸಿಂಗ್‌ಪುರ, ಬನ್ಸ್‌ಗಾಂವ್‌ನಲ್ಲಿರುವ ಪರಮಹಂಸ ಬಾಬಾಗೆ ಸಂಬಂಧಿಸಿದ ಸ್ಥಳಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಸಹ ಸೇರಿಸಲಾಗಿದೆ.

2024 ರಲ್ಲಿ, 65 ಕೋಟಿಗೂ ಹೆಚ್ಚು ಪ್ರವಾಸಿಗರು ಉತ್ತರ ಪ್ರದೇಶದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com