ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಗೆ ಹೊಸ ರೂಪ: ರಿಯೊ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ನಿರ್ಣಾಯಕ ಖನಿಜಗಳು ಮತ್ತು ತಂತ್ರಜ್ಞಾನಕ್ಕಾಗಿ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಬ್ರಿಕ್ಸ್ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.
Prime Minister Narendra Modi addresses the session on 'Environment, COP30, and Global Health' at the BRICS Summit 2025 in Rio de Janeiro, Brazil, July 7, 2025
ಪ್ರಧಾನಿ ನರೇಂದ್ರ ಮೋದಿonline desk
Updated on

ರಿಯೋ: ತನ್ನ ಅಧ್ಯಕ್ಷತೆಯಲ್ಲಿ, ಭಾರತ ಬ್ರಿಕ್ಸ್ ನ್ನು 'ಸಹಕಾರ ಮತ್ತು ಸುಸ್ಥಿರತೆಯೆಡೆಗೆ ಹೊಸ ರೂಪದಲ್ಲಿ ವ್ಯಾಖ್ಯಾನಿಸಲು ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಿಯೊ ಶೃಂಗಸಭೆಯಲ್ಲಿ ಹೇಳಿದ್ದಾರೆ.

ಮುಂದಿನ ವರ್ಷ ಭಾರತ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಲಿದೆ. ಪರಿಸರ ಮತ್ತು ಜಾಗತಿಕ ಆರೋಗ್ಯದ ಕುರಿತಾದ ಅಧಿವೇಶನದಲ್ಲಿ ಮಾತನಾಡಿದ ಮೋದಿ, ಭೂಮಿಯ ಆರೋಗ್ಯ ಮತ್ತು ಜನರ ಆರೋಗ್ಯ ಪರಸ್ಪರ ಸಂಬಂಧ ಹೊಂದಿದೆ ಎಂದು ಹೇಳಿದ್ದಾರೆ. "ಭಾರತಕ್ಕೆ, ಕ್ಲೈಮೆಟ್ ಜಸ್ಟಿಸ್ ಪರ್ಯಾಯವಲ್ಲ; ಅದು ನೈತಿಕ ಕರ್ತವ್ಯ" ಕೆಲವರು ಇದನ್ನು ಸಂಖ್ಯೆಯಲ್ಲಿ ಅಳೆದರೆ, ಭಾರತ ಮೌಲ್ಯಗಳಲ್ಲಿ ಬದುಕುತ್ತದೆ ಎಂದು ಮೋದಿ ಹೇಳಿದ್ದಾರೆ. ಬ್ರಿಕ್ಸ್ ಗುಂಪಿನ ಅಧ್ಯಕ್ಷತೆಯಲ್ಲಿ ಭಾರತದ ಸಂಭಾವ್ಯ ಆದ್ಯತೆಗಳನ್ನು ಪ್ರಧಾನಿ ಮೋದಿ ಇದೇ ವೇಳೆ ಸೂಚಿಸಿದ್ದಾರೆ.

"ಭಾರತದ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ, ನಾವು ಬ್ರಿಕ್ಸ್ ಅನ್ನು ಹೊಸ ರೂಪದಲ್ಲಿ ವ್ಯಾಖ್ಯಾನಿಸಲು ಕೆಲಸ ಮಾಡುತ್ತೇವೆ. ಬ್ರಿಕ್ಸ್ ಎಂದರೆ - ಸಹಕಾರ ಮತ್ತು ಸುಸ್ಥಿರತೆಗಾಗಿ ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯನ್ನು ನಿರ್ಮಿಸುವುದು" ಎಂದು ಮೋದಿ ಹೇಳಿದ್ದಾರೆ. ಯಾವುದೇ ಘಟನೆಗಳಿಗೆ ಸಿದ್ಧರಾಗಿರಬೇಕಾದ ಅಗತ್ಯವನ್ನು ಮೋದಿ ಒತ್ತಿ ಹೇಳಿದರು.

ವೈರಸ್‌ಗಳು ವೀಸಾ ತೆಗೆದುಕೊಂಡು ಬರುವುದಿಲ್ಲ ಮತ್ತು ಪರಿಹಾರಗಳನ್ನು ಸಹ ಪಾಸ್‌ಪೋರ್ಟ್‌ಗಳನ್ನು ನೋಡಿ ಆಯ್ಕೆ ಮಾಡುವುದಿಲ್ಲ ಎಂದು ಕೋವಿಡ್ ಸಾಂಕ್ರಾಮಿಕ ರೋಗವು ನಮಗೆ ಕಲಿಸಿದೆ ಎಂದು ಮೋದಿ ಹೇಳಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳು ಭವಿಷ್ಯದ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಂತೆ ಅದೇ ವಿಶ್ವಾಸವನ್ನು ಹೊಂದಿರಬೇಕು ಎಂದು ಇದೇ ವೇಳೆ ಪ್ರಧಾನಿ ಹೇಳಿದ್ದಾರೆ.

Prime Minister Narendra Modi addresses the session on 'Environment, COP30, and Global Health' at the BRICS Summit 2025 in Rio de Janeiro, Brazil, July 7, 2025
"ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ಮುಖ್ಯ ಉದ್ದೇಶವಾಗಬೇಕು, ಅನುಕೂಲವಲ್ಲ": ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಯನ್ನು ಸುರಕ್ಷಿತಗೊಳಿಸಲು ಬ್ರಿಕ್ಸ್ ಕೆಲಸ ಮಾಡಬೇಕು

ನಿರ್ಣಾಯಕ ಖನಿಜಗಳು ಮತ್ತು ತಂತ್ರಜ್ಞಾನಕ್ಕಾಗಿ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಬ್ರಿಕ್ಸ್ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಯಾವುದೇ ದೇಶವು ಈ ಸಂಪನ್ಮೂಲಗಳನ್ನು ತನ್ನ ಸ್ವಂತ "ಸ್ವಾರ್ಥಿ ಲಾಭ" ಕ್ಕಾಗಿ ಅಥವಾ ಇತರರ ವಿರುದ್ಧ "ಆಯುಧ" ವಾಗಿ ಬಳಸದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಇದೇ ವೇಳೆ ಕರೆ ನೀಡಿದರು.

ಬಹುಪಕ್ಷೀಯತೆ, ಹಣಕಾಸು ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆಯ ಕುರಿತಾದ ಅಧಿವೇಶನದಲ್ಲಿ ಭಾನುವಾರ ಮಾತನಾಡಿದ ಮೋದಿ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಮತ್ತು ದುರುಪಯೋಗವನ್ನು ತಡೆಗಟ್ಟಲು AI ಬಳಕೆಗೆ ಜಾಗತಿಕ ಮಾನದಂಡಗಳನ್ನು ರಚಿಸುವಂತೆಯೂ ಕರೆ ನೀಡಿದ್ದಾರೆ.

ನಿರ್ಣಾಯಕ ಖನಿಜಗಳ ಕುರಿತು ಪ್ರಧಾನಿಯವರ ಹೇಳಿಕೆಗಳು ಚೀನಾ ಪ್ರಮುಖ ಸಂಪನ್ಮೂಲಗಳ ರಫ್ತಿನ ಮೇಲಿನ ನಿರ್ಬಂಧಗಳು ಮತ್ತು ಈ ವಲಯದಲ್ಲಿ ಅದರ ಪಾರದರ್ಶಕವಲ್ಲದ ನೀತಿ ವಿಧಾನದ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವಾಗ ಬಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com